
ಕೆ.ಎಸ್.ಆರ್.ಟಿ.ಸಿ.ಅಧಿಕಾರಿಗೆ ಮಾರಕಾಸ್ತ್ರ ತೋರಿಸಿ ಮಹಿಳೆಯರು ಆವಾಜ್…ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು….
- CrimeMysore
- December 12, 2022
- No Comment
- 124

ಕೆ.ಎಸ್.ಆರ್.ಟಿ.ಸಿ.ಅಧಿಕಾರಿಗೆ ಮಾರಕಾಸ್ತ್ರ ತೋರಿಸಿ ಮಹಿಳೆಯರು ಆವಾಜ್…ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು…
ಮೈಸೂರು,ಡಿ12,Tv10 ಕನ್ನಡ
ನ್ಯಾಯಾಲಯದ ಆದೇಶದಂತೆ ಕ್ರಮ ಕೈಗೊಳ್ಳಲು ಮುಂದಾದ ಸಾರಿಗೆ ಅಧಿಕಾರಿಗೆ ಮೂವರು ಮಹಿಳೆಯರು ಮಾರಕಾಸ್ತ್ರ ಪ್ರದರ್ಶಿಸಿ ಧಂಕಿ ಹಾಕಿದ ಘಟನೆ ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಮಹಿಳೆ ಹಾಗೂ ಆಕೆಯ ಪತಿ ಮೇಲೆ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕೆ.ಎಸ್.ಅರ್.ಟಿ.ಸಿ.ವಿಭಾಗೀಯ ಅಧಿಕಾರಿ ಮರಿಗೌಡ ಎಂಬುವರು ಪ್ರಕರಣ ದಾಖಲಿಸಿದ್ದಾರೆ.ಷಫಿ ಹಾಗೂ ಸೈಯದ್ ಮುನಿಬುನ್ನೀಸಾ ಎಂಬುವರ ಮೇಲೆ ಪ್ರಕರಣ ದಾಖಲಾಗಿದ್ದು ಆರೋಪಿಗಳು ಪರಾರಿಯಾಗಿದ್ದಾರೆ.
ಸಾತಗಳ್ಳಿ ಬಸ್ ನಿಲ್ದಾಣಕ್ಕೆ ಸೇರಿದ್ದ ವಾಣಿಜ್ಯಮಳಿಗೆಯನ್ನ ಷಫಿ ಎಂಬುವರಿಗೆ 12 ವರ್ಷಗಳ ಅವಧಿಗೆ ಲೀಸ್ ನೀಡಲಾಗಿತ್ತು.ಕಾಲಕಾಲಕ್ಕೆ ಪಾವತಿಸಬೇಕಾದ ವಿದ್ಯುತ್,ಜಿಎಸ್ ಟಿ ಹಾಗೂ ಪರವಾನಗಿ ಶುಲ್ಕ ಪಾವತಿಸದೆ ಷಫಿ ನಿಯಮಗಳನ್ನ ಉಲ್ಲಂಘಿಸಿದ್ದ.ಈ ಬಗ್ಗೆ ನ್ಯಾಯಾಲಯದ ಮೊರೆ ಹೋಗಿ ಮಧ್ಯಂತರ ತಡೆ ಪಡೆದಿದ್ದ.ನಂತರ ಘನ ನ್ಯಾಯಾಲಯ ಮಧ್ಯಂತರ ಆದೇಶ ರದ್ದುಪಡಿಸಿತ್ತು.ಒಟ್ಟು 1,89,18,712/- ರೂ ಪಾವತಿಸಬೇಕಿತ್ತು.ನ್ಯಾಯಾಲಯದ ಆದೇಶದಂತೆ ಸಾರಿಗೆ ಅಧಿಕಾರಿಯಾದ ಮರಿಗೌಡ ಹಾಗೂ ಇತರರು ಕ್ರಮ ಕೈಗೊಳ್ಳಲು ಡಿ.10 ರಂದು ಸ್ಥಳಕ್ಕೆ ಭೇಟಿ ನೀಡಿದಾಗ ಷಫಿ ಪತ್ನಿ ಸೈಯದ್ ಮುನಿಬುನ್ನೀಸಾ ಹಾಗೂ ಇನ್ನಿಬ್ಬರು ಮಹಿಳೆಯರು ಏಕಾ ಏಕಿ ಅವ್ಯಾಚ ಶಬ್ದಗಳಿಂದ ನಿಂದಿಸುತ್ತಾ ಮಾರಕಾಸ್ತ್ರಗಳನ್ನ ಪ್ರದರ್ಶಿಸಿ ಆವಾಜ್ ಹಾಕಿದ್ದಾರೆ.ಈ ಸಂಭಂಧ ಮರಿಗೌಡ ರವರು ಉದಯಗಿರಿ ಪೊಲೀಸ್ ಠಾಣೆಯಲ್ಲಿ FIR ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದಾರೆ..