
ಡಿಕೆಶಿ CM,ತನ್ವೀರ್ ಸೇಠ್ ಮಂತ್ರಿ ಆಗಲೆಂದು ಅಜ್ಮೀರ್ ನಲ್ಲಿ ಅಭಿಮಾನಿಯಿಂದ ಪ್ರಾರ್ಥನೆ…
- Politics
- December 16, 2022
- No Comment
- 127

ಡಿಕೆಶಿ CM,ತನ್ವೀರ್ ಸೇಠ್ ಮಂತ್ರಿ ಆಗಲೆಂದು ಅಜ್ಮೀರ್ ನಲ್ಲಿ ಅಭಿಮಾನಿಯಿಂದ ಪ್ರಾರ್ಥನೆ…
ಮೈಸೂರು,ಡಿ16,Tv10 ಕನ್ನಡ
ಚುನಾವಣೆ ಹತ್ತಿರವಾಗುತ್ತಿದ್ದಂತೆ ಸಿಎಂ ಸ್ಥಾನದ ಕಾಂಗ್ರೆಸ್ ನಲ್ಲಿ ಭಾರಿ ಪೈಪೋಟಿ ನಡೆಯುತ್ತಿದೆ.ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ನಡೆಯುತ್ತಿದೆ.ಉಭಯ ನಾಯಕರ ಅಭಿಮಾನಿಗಳಲ್ಲೂ ಸಹ ಉತ್ಸುಕತೆ ತುಂಬಿದೆ.ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂದು ಹಾಗೂ ಮೈಸೂರು ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ರವರು ಮಂತ್ರಿಯಾಗಬೇಕೆಂದು ಅಭಿಮಾನಿಯೊಬ್ಬರು ಅಜ್ಮೀರ್ ನ ಹಜರತ್ ಖಾನಾ ಗರೀಬಿನ್ ನವಾಜ್ ದರ್ಗಾದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದ್ದಾರೆ.ಮೈಸೂರು ನಗರ ಅಲ್ಪಸಂಖ್ಯಾತರ ಘಟಕದ ಮಾಜಿ ಅಧ್ಯಕ್ಷ ಹಾಗೂ ರಾಜ್ಯ ತನ್ವೀರ್ ಸೇಠ್ ಅಭಿಮಾನಿಗಳ ಸಂಘದ ಅಧ್ಯಕ್ಷರೂ ಆದ ಫೈರೋಜ್ ಖಾನ್ ರವರು ಇಬ್ಬರು ನಾಯಕರು ಮುಂದಿನ ದಿನಗಳಲ್ಲಿ ಅಧಿಕಾರ ಸ್ವೀಕರಿಸಬೇಕೆಂದು ಇಂದು ಶುಕ್ರವಾರ ವಿಶೇಷವಾಗಿ ಪ್ರಾರ್ಥಿಸಿದ್ದಾರೆ.ಇಬ್ಬರು ನಾಯಕರ ಭಿತ್ತಿಚಿತ್ರ ಹಿಡಿದು ಪ್ರಾರ್ಥನೆ ಸಲ್ಲಿಸಿದ್ದಾರೆ…