ಮರ್ಕ್ಯೂರಿ ಬಾಬಾ ವಿಧಿವಶ…ಲೈವ್ ನಲ್ಲಿ ಪಾದರಸ ಕುಡಿದು ಖ್ಯಾತಿ ಪಡೆದಿದ್ದ ಬಾಬಾ ಇನ್ನಿಲ್ಲ…

ಮರ್ಕ್ಯೂರಿ ಬಾಬಾ ವಿಧಿವಶ…ಲೈವ್ ನಲ್ಲಿ ಪಾದರಸ ಕುಡಿದು ಖ್ಯಾತಿ ಪಡೆದಿದ್ದ ಬಾಬಾ ಇನ್ನಿಲ್ಲ…

ಮರ್ಕ್ಯೂರಿ ಬಾಬಾ ವಿಧಿವಶ…ಲೈವ್ ನಲ್ಲಿ ಪಾದರಸ ಕುಡಿದು ಖ್ಯಾತಿ ಪಡೆದಿದ್ದ ಬಾಬಾ ಇನ್ನಿಲ್ಲ…

ಮೈಸೂರು,ಡಿ22,Tv10 ಕನ್ನಡ
ಖಾಸಗಿ ಚಾನೆಲ್ ಗಳ ನೇರಪ್ರಸಾರದಲ್ಲಿ ಪಾದರಸ ಕುಡಿದು ಖ್ಯಾತಿ ಪಡೆದಿದ್ದ ಮರ್ಕ್ಯೂರಿ ಬಾಬಾ ವಿಧಿವಶರಾಗಿದ್ದಾರೆ.ಉದಯಗಿರಿಯಲ್ಲಿರುವ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.ಕೆಲವು ದಿನಗಳಿಂದ ಅನಾರೋಗ್ಯಕ್ಕೆ ಸಿಲುಕಿದ್ದ ಜುನೈದ್ @ಮರ್ಕ್ಯೂರಿ ಬಾಬಾ ರವರು ಹೃದಯಾಘಾತಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.ದುಬೈಗೆ ತೆರಳಿದ್ದ ಮರ್ಕ್ಯೂರಿ ಬಾಬಾ ರವರು ನಾಲ್ಕು ದಿನಗಳ ಹಿಂದೆ ಅನಾರೋಗ್ಯದ ನಿಮಿತ್ತ ಮೈಸೂರಿನ ಮನೆಗೆ ತಲುಪಿದ್ದರು.ಮನೆಯಲ್ಲೇ ಅವರಿಗೆ ಚಿಕಿತ್ಸೆ ಮುಂದುವರೆಯುತ್ತಿತ್ತು.ಬುಧುವಾರ ತಮ್ಮ ನಿವಾಸದಲ್ಲಿ ಮೃತಪಟ್ಟಿದ್ದಾರೆ.ಕ್ಯಾನ್ಸರ್ ಸೇರಿದಂತೆ ಮಾರಣಾಂತಿಕ ಕಾಯಿಲೆಗಳಿಗೆ ಔಷಧಿ ನೀಡುತ್ತಿದ್ದ ಜುನೈದ್ ಜನಶ್ರೀ ಚಾನೆಲ್ ನಲ್ಲಿ ನಡೆದ ನೇರಪ್ರಸಾರ ಕಾರ್ಯಕ್ರಮದಲ್ಲಿ ಪಾದರಸವನ್ನ ಕುಡಿದಿದ್ದರು.ಅಲ್ಲದೆ ಹಾವಿನ ವಿಷವನ್ನೂ ಸಹ ಸೇವಿಸಿ ಸಾವಿಗೇ ಸವಾಲೊಡ್ಡಿದ್ದರು.ಹಕವಾರು ರೋಗಗಳಿಗೆ ಔಷಧಿ ನೀಡಿ ಮರ್ಕ್ಯೂರಿ ಬಾಬಾ ಎಂದೇ ಖ್ಯಾತಿ ಪಡೆದಿದ್ದರು.ಇವರಿಗೆ ದೇಶದ ಮೂಲೆ ಮೂಲೆಗಳಲ್ಲೂ ಅಭಿಮಾನಿಗಳಿದ್ದರು.ಹಲವರು ಇವರ ನೀಡಿದ ಔಷಧಿ ಸೇವಿಸಿ ಗುಣಮುಖರಾಗಿದ್ದರು.45 ವರ್ಷದ ಮರ್ಕ್ಯೂರಿ ಬಾಬ ಇನ್ನು ಕೇವಲ ನೆನಪು ಮಾತ್ರ.ಸೂಫಿ ಸಂತರಾಗಿದ್ದ ಇವರ ಅಂತ್ರಕ್ರಿಯೆ ಇಂದು ಬೆಳಿಗ್ಗೆ ಮುಸ್ಲಿಂ ಸಮುದಾಯದ ಸಂಪ್ರದಾಯದಂತೆ ಪುಲಕೇಶಿ ರಸ್ತೆಬಳಿ ಇರುವ ಖಬರ್ ಸ್ಥಾನದಲ್ಲಿ ಅಂತ್ಯ ಕ್ರಿಯೆ ನೆರವೇರಿದೆ…

Spread the love

Related post

ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ದಿ ಸಂಘದಲ್ಲಿ ವಿಶ್ವಮಹಿಳಾದಿನ ಆಚರಣೆ…ಸಾಧಕರಿಗೆ ಸನ್ಮಾನ…

ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ದಿ ಸಂಘದಲ್ಲಿ ವಿಶ್ವಮಹಿಳಾದಿನ ಆಚರಣೆ…ಸಾಧಕರಿಗೆ ಸನ್ಮಾನ…

ಮೈಸೂರು,ಮಾ29,Tv10 ಕನ್ನಡ ನೇಗಿಲ ಯೋಗಿ ಮಹಿಳೆಯರ ಕ್ಷೇಮಾಭಿವೃದ್ಧಿ ಸಂಘದಿಂದ ಇಂದು ವಿಶ್ವ ಮಹಿಳಾ ದಿನಾಚರಣೆಯನ್ನ ಅರ್ಥಪೂರ್ಣವಾಗಿ ಕಾವೇರಿ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ.ಸರಳಾ ಚಂದ್ರಶೇಖರ್ ಕಾರ್ಯಕ್ರಮವನ್ನ…
ನಂಜನಗೂಡು ಶಿಕ್ಷಕ ಸೇರಿದಂತೆ BEO ಲೋಕಾ ಬಲೆಗೆ…ಗೌರವ ಧನ ಬಿಡುಗಡೆ ಮಾಡಲು ಲಂಚ…

ನಂಜನಗೂಡು ಶಿಕ್ಷಕ ಸೇರಿದಂತೆ BEO ಲೋಕಾ ಬಲೆಗೆ…ಗೌರವ ಧನ ಬಿಡುಗಡೆ ಮಾಡಲು…

ನಂಜನಗೂಡು,ಮಾ28,Tv10 ಕನ್ನಡ ಗೌರವ ಧನ ಬಿಡುಗಡೆ ಮಾಡಲು ವ್ಯಕ್ತಿಯೊಬ್ಬರಿಂದ 5 ಸಾವಿರ ಲಂಚ ಪಡೆಯುತ್ತಿದ್ದ ಶಿಕ್ಷಕ ಹಾಗೂ ಬಿಇಓ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ನಂಜನಗೂಡು ಬಿಇಓ ಶಿವಲಿಂಗಯ್ಯ ಹಾಗೂ ಶಿಕ್ಷಕ…
Tv10 ಕನ್ನಡ ವಾಹಿನಿ ವರದಿ ಫಲಶೃತಿ…ಅಂಬೇಡ್ಕರ್ ವಸತಿಶಾಲೆ ಪ್ರಾಂಶುಪಾಲ ಅಮಾನತು…ಇಲಾಖಾ ವಿಚಾರಣೆಗೆ ಆದೇಶ…

Tv10 ಕನ್ನಡ ವಾಹಿನಿ ವರದಿ ಫಲಶೃತಿ…ಅಂಬೇಡ್ಕರ್ ವಸತಿಶಾಲೆ ಪ್ರಾಂಶುಪಾಲ ಅಮಾನತು…ಇಲಾಖಾ ವಿಚಾರಣೆಗೆ…

ನಂಜನಗೂಡು,ಮಾ28,Tv10 ಕನ್ನಡ ನಂಜನಗೂಡು ತಾಲೂಕು ಹದಿನಾರು ಗ್ರಾಮದ ಅಂಬೇಂಡ್ಕರ್ ವಸತಿ ಶಾಲೆ ಪ್ರಾಂಶುಪಾಲ ಪ್ರಸನ್ನ ಕುಮಾರ್ ಗೆ ಸರ್ಕಾರ ಗೇಟ್ ಪಾಸ್ ನೀಡಿದ ಕರ್ತವ್ಯ ಲೋಪ ಹಿನ್ನಲೆ ಸೇವೆಯಿಂದ…

Leave a Reply

Your email address will not be published. Required fields are marked *