IND/BNG ಟೆಸ್ಟ್ …ಶ್ರೇಯಸ್ ಅಯ್ಯರ್,ರವಿಚಂದ್ರನ್ ಅಶ್ವಿನ್ ದಿಟ್ಟ ಹೋರಾಟ…ಭಾರತಕ್ಕೆ 3 ವಿಕೆಟ್ ಗಳ ರೋಚಕ ಜಯ…ಸರಣಿ ಸ್ವೀಪ್ ಮಾಡಿದ ರಾಹುಲ್ ಪಡೆ…

IND/BNG ಟೆಸ್ಟ್ …ಶ್ರೇಯಸ್ ಅಯ್ಯರ್,ರವಿಚಂದ್ರನ್ ಅಶ್ವಿನ್ ದಿಟ್ಟ ಹೋರಾಟ…ಭಾರತಕ್ಕೆ 3 ವಿಕೆಟ್ ಗಳ ರೋಚಕ ಜಯ…ಸರಣಿ ಸ್ವೀಪ್ ಮಾಡಿದ ರಾಹುಲ್ ಪಡೆ…

IND/BNG ಟೆಸ್ಟ್ …ಶ್ರೇಯಸ್ ಅಯ್ಯರ್,ರವಿಚಂದ್ರನ್ ಅಶ್ವಿನ್ ದಿಟ್ಟ ಹೋರಾಟ…ಭಾರತಕ್ಕೆ 3 ವಿಕೆಟ್ ಗಳ ರೋಚಕ ಜಯ…ಸರಣಿ ಸ್ವೀಪ್ ಮಾಡಿದ ರಾಹುಲ್ ಪಡೆ…

Tv10 ಕನ್ನಡ
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಎರಡನೇ ಟೆಸ್ಟ್ ರೋಮಾಂಚನಕಾರಿಯಾಗಿ ಕೊನೆಗೊಂಡಿದೆ.ತೂಗುಯ್ಯಾಲಯಂತಾಡಿದ ವಿಜಯಲಕ್ಷ್ಮಿ ಕೊನೆಗೂ ಭಾರತಕ್ಕೆ ಒಲಿದಿದ್ದಾಳೆ ಶ್ರೇಯಸ್ ಅಯ್ಯರ್ ಹಾಗೂ ರವಿಚಂದ್ರನ್ ಅಶ್ವಿನ್ ರವರ ದಿಟ್ಟ ಹೋರಾಟಕ್ಕೆ ಫಲ ದೊರೆತಿದೆ.ಏಳನೇ ವಿಕೆಟ್ ಗೆ ಇಬ್ಬರ ನಡುವೆ 70 ರನ್ ಗಳ ಜೊತೆಯಾಟ ಭಾರತಕ್ಕೆ ಗೆಲುವಿನ ನಗೆ ಬೀರಲು ಸಹಕಾರಿಯಾಗಿದೆ.ಇಬ್ಬರ ಜುಗಲ್ ಬಂಧಿ ಆಟ ಎರಡು ಟೆಸ್ಟ್ ಗಳ ಸರಣಿ ಸ್ವೀಪ್ ಮಾಡಿದಂತಾಗಿದೆ.ಬಾಂಗ್ಲಾ ದೇಶದ ಸ್ಪಿನ್ನರ್ ಮೆಹಿದಿ ಹಸನ್ ರವರ ದಾಳಿಗೆ ನಲುಗಿದ್ದ ಭಾರತ ಕೊನೆಗೂ ಗೆಲುವಿನ ದಡ ಮುಟ್ಟಿದೆ.

ನಾಲ್ಕನೇ ದಿನವಾದ ಇಂದು ಆಟ ಮುಂದುವರೆಸಿದ ಭಾರತ ಆರಂಭದಲ್ಲೇ ಅಘಾತಕ್ಕೆ ಸಿಲುಕಿತು.ಗೆಲುವಿಗೆ ಇನ್ನೂ 99 ರನ್ ಗಳ ಅವಶ್ಯಕತೆವಿರುವಾಗಲೇ ಅಕ್ಷರ್ ಪಟೇಲ್,ಉನಾದ್ ಕಟ್ ವಿಕೆಟ್ ಕಳೆದುಕೊಂಡಿತು.ಮೊದಲ ಇನ್ನಂಗ್ಸ್ ಹೀರೋ ರಿಷಬ್ ಪಂತ್ ಹೆಚ್ಚುಹೊತ್ತು ಸ್ಕ್ರೀಸ್ ನಲ್ಲಿ ನಿಲ್ಲದೆ ಕೇವಲ 9 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಗೆಲುವಿಗೆ ಇನ್ನೂ 70 ರನ್ ಗಳ ಅವಶ್ಯಕತೆ ಇತ್ತು.ಈ ವೇಳೆ ಒಂದಾದ ಶ್ರೇಯಸ್ ಅಯ್ಯರ್ ಹಾಗೂ ರವಿಚಂದ್ರನ್ ಅಶ್ವಿನ್ ಮುರಿಯದ 7 ನೇ ವಿಕೆಟ್ ಗೆ 70 ರನ್ ಗಳನ್ನ ಪೇರಿಸಿ ಗೆಲುವಿನ ಸಂಭ್ರಮ ತಂದಿತ್ತರು.ಎರಡೂ ಇನ್ನಿಂಗ್ಸ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ರವಿಚಂದ್ರನ್ ಅಶ್ವಿನ್ ಪಂದ್ಯದ ಪುರುಶೋತ್ತಮ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್ ವಿವರ
ಬಾಂಗ್ಲಾ ಮೊದಲ ಇನ್ನಿಂಗ್ಸ್ 227 ಎರಡನೇ ಇನ್ನಿಂಗ್ಸ್ 231

ಭಾರತ ಮೊದಲ ಇನ್ನಿಂಗ್ಸ್ 314 ಎರಡನೇ ಇನ್ನಿಂಗ್ಸ್ 145/7

Spread the love

Related post

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…

Leave a Reply

Your email address will not be published. Required fields are marked *