IND/BNG ಟೆಸ್ಟ್ …ಶ್ರೇಯಸ್ ಅಯ್ಯರ್,ರವಿಚಂದ್ರನ್ ಅಶ್ವಿನ್ ದಿಟ್ಟ ಹೋರಾಟ…ಭಾರತಕ್ಕೆ 3 ವಿಕೆಟ್ ಗಳ ರೋಚಕ ಜಯ…ಸರಣಿ ಸ್ವೀಪ್ ಮಾಡಿದ ರಾಹುಲ್ ಪಡೆ…

IND/BNG ಟೆಸ್ಟ್ …ಶ್ರೇಯಸ್ ಅಯ್ಯರ್,ರವಿಚಂದ್ರನ್ ಅಶ್ವಿನ್ ದಿಟ್ಟ ಹೋರಾಟ…ಭಾರತಕ್ಕೆ 3 ವಿಕೆಟ್ ಗಳ ರೋಚಕ ಜಯ…ಸರಣಿ ಸ್ವೀಪ್ ಮಾಡಿದ ರಾಹುಲ್ ಪಡೆ…

IND/BNG ಟೆಸ್ಟ್ …ಶ್ರೇಯಸ್ ಅಯ್ಯರ್,ರವಿಚಂದ್ರನ್ ಅಶ್ವಿನ್ ದಿಟ್ಟ ಹೋರಾಟ…ಭಾರತಕ್ಕೆ 3 ವಿಕೆಟ್ ಗಳ ರೋಚಕ ಜಯ…ಸರಣಿ ಸ್ವೀಪ್ ಮಾಡಿದ ರಾಹುಲ್ ಪಡೆ…

Tv10 ಕನ್ನಡ
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಎರಡನೇ ಟೆಸ್ಟ್ ರೋಮಾಂಚನಕಾರಿಯಾಗಿ ಕೊನೆಗೊಂಡಿದೆ.ತೂಗುಯ್ಯಾಲಯಂತಾಡಿದ ವಿಜಯಲಕ್ಷ್ಮಿ ಕೊನೆಗೂ ಭಾರತಕ್ಕೆ ಒಲಿದಿದ್ದಾಳೆ ಶ್ರೇಯಸ್ ಅಯ್ಯರ್ ಹಾಗೂ ರವಿಚಂದ್ರನ್ ಅಶ್ವಿನ್ ರವರ ದಿಟ್ಟ ಹೋರಾಟಕ್ಕೆ ಫಲ ದೊರೆತಿದೆ.ಏಳನೇ ವಿಕೆಟ್ ಗೆ ಇಬ್ಬರ ನಡುವೆ 70 ರನ್ ಗಳ ಜೊತೆಯಾಟ ಭಾರತಕ್ಕೆ ಗೆಲುವಿನ ನಗೆ ಬೀರಲು ಸಹಕಾರಿಯಾಗಿದೆ.ಇಬ್ಬರ ಜುಗಲ್ ಬಂಧಿ ಆಟ ಎರಡು ಟೆಸ್ಟ್ ಗಳ ಸರಣಿ ಸ್ವೀಪ್ ಮಾಡಿದಂತಾಗಿದೆ.ಬಾಂಗ್ಲಾ ದೇಶದ ಸ್ಪಿನ್ನರ್ ಮೆಹಿದಿ ಹಸನ್ ರವರ ದಾಳಿಗೆ ನಲುಗಿದ್ದ ಭಾರತ ಕೊನೆಗೂ ಗೆಲುವಿನ ದಡ ಮುಟ್ಟಿದೆ.

ನಾಲ್ಕನೇ ದಿನವಾದ ಇಂದು ಆಟ ಮುಂದುವರೆಸಿದ ಭಾರತ ಆರಂಭದಲ್ಲೇ ಅಘಾತಕ್ಕೆ ಸಿಲುಕಿತು.ಗೆಲುವಿಗೆ ಇನ್ನೂ 99 ರನ್ ಗಳ ಅವಶ್ಯಕತೆವಿರುವಾಗಲೇ ಅಕ್ಷರ್ ಪಟೇಲ್,ಉನಾದ್ ಕಟ್ ವಿಕೆಟ್ ಕಳೆದುಕೊಂಡಿತು.ಮೊದಲ ಇನ್ನಂಗ್ಸ್ ಹೀರೋ ರಿಷಬ್ ಪಂತ್ ಹೆಚ್ಚುಹೊತ್ತು ಸ್ಕ್ರೀಸ್ ನಲ್ಲಿ ನಿಲ್ಲದೆ ಕೇವಲ 9 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಗೆಲುವಿಗೆ ಇನ್ನೂ 70 ರನ್ ಗಳ ಅವಶ್ಯಕತೆ ಇತ್ತು.ಈ ವೇಳೆ ಒಂದಾದ ಶ್ರೇಯಸ್ ಅಯ್ಯರ್ ಹಾಗೂ ರವಿಚಂದ್ರನ್ ಅಶ್ವಿನ್ ಮುರಿಯದ 7 ನೇ ವಿಕೆಟ್ ಗೆ 70 ರನ್ ಗಳನ್ನ ಪೇರಿಸಿ ಗೆಲುವಿನ ಸಂಭ್ರಮ ತಂದಿತ್ತರು.ಎರಡೂ ಇನ್ನಿಂಗ್ಸ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ರವಿಚಂದ್ರನ್ ಅಶ್ವಿನ್ ಪಂದ್ಯದ ಪುರುಶೋತ್ತಮ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್ ವಿವರ
ಬಾಂಗ್ಲಾ ಮೊದಲ ಇನ್ನಿಂಗ್ಸ್ 227 ಎರಡನೇ ಇನ್ನಿಂಗ್ಸ್ 231

ಭಾರತ ಮೊದಲ ಇನ್ನಿಂಗ್ಸ್ 314 ಎರಡನೇ ಇನ್ನಿಂಗ್ಸ್ 145/7

Spread the love

Related post

ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್…

ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್…

ಲೋಕಾ ಬಲೆಗೆ RI…10 ಸಾವಿರ ಲಂಚಕ್ಕೆ ಬೇಡಿಕೆ…ರೆಡ್ ಹ್ಯಾಂಡ್ ಲಾಕ್… ಮಂಡ್ಯ,ಜೂ13,Tv10 ಕನ್ನಡ ಜಮೀನು ಖಾತೆಗೆ ರೂ.2 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟು 10 ಸಾವಿರ ಹಣ ಸ್ವೀಕರಿಸುವಾಗಲೋಕಾಯುಕ್ತ…
ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್…

ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ…

ಸಾರ್ವಜನಿಕರ ವಿಶ್ರಾಂತಿ ಸ್ಥಳವಾದ ಕಸದ ರಾಶಿ ಜಾಗ…ನಗರಪಾಲಿಕೆಯ ಉಪಾಯ…ಕಸದ ಹಾವಳಿ ನಿಯಂತ್ರಣಕ್ಕೆ ಮಾಸ್ಟರ್ ಪ್ಲಾನ್… ಮೈಸೂರು,ಜೂ12,Tv10 ಕನ್ನಡ ಕಸದರಾಶಿ ಹಾವಳಿ ತಪ್ಪಿಸಲು ಮೈಸೂರು ಮಹಾನಗರ ಪಾಲಿಕೆ ಮಾಸ್ಟರ್ ಪ್ಲಾನ್…
ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ…

ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ…

ಮುಖ್ಯಮಂತ್ರಿಗಳ ಸಚಿವಾಲಯ ಅಧಿಕಾರಿಗಳ ಕರ್ತವ್ಯದಲ್ಲಿ ಪರಿಷ್ಕರಣೆ…ನೇಮಕ ಅಧಿಕಾರಿಗಳ ಪಟ್ಟಿ ಇಲ್ಲಿದೆ… ಮೈಸೂರು,ಜೂ10,Tv10 ಕನ್ನಡ ನಿರೀಕ್ಷೆಯಂತೆ ಮುಖ್ಯಮಂತ್ರಿಗಳ ಸಚಿವಾಲಯದ ಅಧಿಕಾರಿಗಳ ಕರ್ತವ್ಯದಲ್ಲಿ ಭಾರಿ ಬದಲಾವಣೆ ಆಗಿದೆ.ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಕರ್ತವ್ಯ…

Leave a Reply

Your email address will not be published. Required fields are marked *