IND/BNG ಟೆಸ್ಟ್ …ಶ್ರೇಯಸ್ ಅಯ್ಯರ್,ರವಿಚಂದ್ರನ್ ಅಶ್ವಿನ್ ದಿಟ್ಟ ಹೋರಾಟ…ಭಾರತಕ್ಕೆ 3 ವಿಕೆಟ್ ಗಳ ರೋಚಕ ಜಯ…ಸರಣಿ ಸ್ವೀಪ್ ಮಾಡಿದ ರಾಹುಲ್ ಪಡೆ…

IND/BNG ಟೆಸ್ಟ್ …ಶ್ರೇಯಸ್ ಅಯ್ಯರ್,ರವಿಚಂದ್ರನ್ ಅಶ್ವಿನ್ ದಿಟ್ಟ ಹೋರಾಟ…ಭಾರತಕ್ಕೆ 3 ವಿಕೆಟ್ ಗಳ ರೋಚಕ ಜಯ…ಸರಣಿ ಸ್ವೀಪ್ ಮಾಡಿದ ರಾಹುಲ್ ಪಡೆ…

IND/BNG ಟೆಸ್ಟ್ …ಶ್ರೇಯಸ್ ಅಯ್ಯರ್,ರವಿಚಂದ್ರನ್ ಅಶ್ವಿನ್ ದಿಟ್ಟ ಹೋರಾಟ…ಭಾರತಕ್ಕೆ 3 ವಿಕೆಟ್ ಗಳ ರೋಚಕ ಜಯ…ಸರಣಿ ಸ್ವೀಪ್ ಮಾಡಿದ ರಾಹುಲ್ ಪಡೆ…

Tv10 ಕನ್ನಡ
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಎರಡನೇ ಟೆಸ್ಟ್ ರೋಮಾಂಚನಕಾರಿಯಾಗಿ ಕೊನೆಗೊಂಡಿದೆ.ತೂಗುಯ್ಯಾಲಯಂತಾಡಿದ ವಿಜಯಲಕ್ಷ್ಮಿ ಕೊನೆಗೂ ಭಾರತಕ್ಕೆ ಒಲಿದಿದ್ದಾಳೆ ಶ್ರೇಯಸ್ ಅಯ್ಯರ್ ಹಾಗೂ ರವಿಚಂದ್ರನ್ ಅಶ್ವಿನ್ ರವರ ದಿಟ್ಟ ಹೋರಾಟಕ್ಕೆ ಫಲ ದೊರೆತಿದೆ.ಏಳನೇ ವಿಕೆಟ್ ಗೆ ಇಬ್ಬರ ನಡುವೆ 70 ರನ್ ಗಳ ಜೊತೆಯಾಟ ಭಾರತಕ್ಕೆ ಗೆಲುವಿನ ನಗೆ ಬೀರಲು ಸಹಕಾರಿಯಾಗಿದೆ.ಇಬ್ಬರ ಜುಗಲ್ ಬಂಧಿ ಆಟ ಎರಡು ಟೆಸ್ಟ್ ಗಳ ಸರಣಿ ಸ್ವೀಪ್ ಮಾಡಿದಂತಾಗಿದೆ.ಬಾಂಗ್ಲಾ ದೇಶದ ಸ್ಪಿನ್ನರ್ ಮೆಹಿದಿ ಹಸನ್ ರವರ ದಾಳಿಗೆ ನಲುಗಿದ್ದ ಭಾರತ ಕೊನೆಗೂ ಗೆಲುವಿನ ದಡ ಮುಟ್ಟಿದೆ.

ನಾಲ್ಕನೇ ದಿನವಾದ ಇಂದು ಆಟ ಮುಂದುವರೆಸಿದ ಭಾರತ ಆರಂಭದಲ್ಲೇ ಅಘಾತಕ್ಕೆ ಸಿಲುಕಿತು.ಗೆಲುವಿಗೆ ಇನ್ನೂ 99 ರನ್ ಗಳ ಅವಶ್ಯಕತೆವಿರುವಾಗಲೇ ಅಕ್ಷರ್ ಪಟೇಲ್,ಉನಾದ್ ಕಟ್ ವಿಕೆಟ್ ಕಳೆದುಕೊಂಡಿತು.ಮೊದಲ ಇನ್ನಂಗ್ಸ್ ಹೀರೋ ರಿಷಬ್ ಪಂತ್ ಹೆಚ್ಚುಹೊತ್ತು ಸ್ಕ್ರೀಸ್ ನಲ್ಲಿ ನಿಲ್ಲದೆ ಕೇವಲ 9 ರನ್ ಗಳಿಸಿ ಪೆವಿಲಿಯನ್ ಹಾದಿ ಹಿಡಿದರು. ಗೆಲುವಿಗೆ ಇನ್ನೂ 70 ರನ್ ಗಳ ಅವಶ್ಯಕತೆ ಇತ್ತು.ಈ ವೇಳೆ ಒಂದಾದ ಶ್ರೇಯಸ್ ಅಯ್ಯರ್ ಹಾಗೂ ರವಿಚಂದ್ರನ್ ಅಶ್ವಿನ್ ಮುರಿಯದ 7 ನೇ ವಿಕೆಟ್ ಗೆ 70 ರನ್ ಗಳನ್ನ ಪೇರಿಸಿ ಗೆಲುವಿನ ಸಂಭ್ರಮ ತಂದಿತ್ತರು.ಎರಡೂ ಇನ್ನಿಂಗ್ಸ್ ಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ರವಿಚಂದ್ರನ್ ಅಶ್ವಿನ್ ಪಂದ್ಯದ ಪುರುಶೋತ್ತಮ ಪ್ರಶಸ್ತಿಗೆ ಭಾಜನರಾದರು.

ಸ್ಕೋರ್ ವಿವರ
ಬಾಂಗ್ಲಾ ಮೊದಲ ಇನ್ನಿಂಗ್ಸ್ 227 ಎರಡನೇ ಇನ್ನಿಂಗ್ಸ್ 231

ಭಾರತ ಮೊದಲ ಇನ್ನಿಂಗ್ಸ್ 314 ಎರಡನೇ ಇನ್ನಿಂಗ್ಸ್ 145/7

Spread the love

Related post

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ.

ಚಿರತೆ ದಾಳಿಗೆ ಮಾದಪ್ಪನ ಭಕ್ತ ಬಲಿ. ಹನೂರು Tv10 ಕನ್ನಡ21/01/2026 ಹನೂರು :ಪ್ರಸಿದ್ಧ ಯಾತ್ರಾಸ್ಥಳವಾದ ಹನೂರು ತಾಲೂಕಿನ ಮಲೆಮಹದೇಶ್ವರ ಬೆಟ್ಟಕ್ಕೆ ಕಾಲ್ನಡಿಗೆಯಲ್ಲಿ ತೆರಳುತ್ತಿದ್ದ ಯುವಕ ಚಿರತೆ ದಾಳಿಗೆ ಬಲಿಯಾದ…
ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು…

ಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ನೀರುಪಾಲು… ಮಂಡ್ಯ,ಜ21,Tv10 ಕನ್ನಡಕುರಿ ತೊಳೆಯಲು ಕಟ್ಟೆಗೆ ಇಳಿದ ರೈತ ಕಾಲುಜಾರಿ ನೀರುಪಾಲಾದ ಘಟನೆ ಕೆ.ಆರ್.ಪೇಟೆ ತಾಲೂಕಿನ ಅಂಚೆಬೀರನಹಳ್ಳಿಯಲ್ಲಿ ನಡೆದಿದೆ.ಆನೆಗೋಳ ಗ್ರಾಮದ ರೈತ…
ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ…

ಮೈಸೂರಿನಲ್ಲಿ ನಿಮ್ಹಾನ್ಸ್ ಮಾದರಿ ಸಂಸ್ಥೆ ಫಿಕ್ಸ್…ಜಮೀನು ವಶಕ್ಕೆ…ಮೈಸೂರು ಮೆಡಕಲ್ ಕಾಲೇಜಿಗೆ ಹಸ್ತಾಂತರ… ಮೈಸೂರು,ಜ19,Tv10 ಕನ್ನಡ ಮೈಸೂರಿನಲ್ಲಿ ಸಿಎಂ ಸಿದ್ದರಾಮಯ್ಯನವರ ಮಹತ್ತರ ಯೋಜನೆಯ ನಿಮ್ಹಾನ್ಸ್ ಮಾದರಿಯ ಸಂಸ್ಥೆ ಸ್ಥಾಪನೆಗೆ ಗ್ರೀನ್…

Leave a Reply

Your email address will not be published. Required fields are marked *