ಹೊಸ ವರ್ಷಕ್ಕೆ 2 ಲಕ್ಷ ಲಡ್ಡು ವಿತರಿಸಲು ಸಿದ್ದತೆ…ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ತಯಾರಿ…ಮೈಸೂರು,ಡಿ29,Tv10 ಕನ್ನಡ

ಹೊಸ ವರ್ಷಕ್ಕೆ 2 ಲಕ್ಷ ಲಡ್ಡು ವಿತರಿಸಲು ಸಿದ್ದತೆ…ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ತಯಾರಿ…

ಮೈಸೂರು,ಡಿ29,Tv10 ಕನ್ನಡ

ಹೊಸ ವರ್ಷಕ್ಕೆ 2 ಲಕ್ಷ ಲಡ್ಡು ವಿತರಿಸಲು ಸಿದ್ದತೆ…ಯೋಗನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ತಯಾರಿ…

ಮೈಸೂರು,ಡಿ29,Tv10 ಕನ್ನಡ

ಹೊಸ ವರ್ಷಕ್ಕೆ ಭಕ್ತಾದಿಗಳಿಗೆ 2 ಲಕ್ಷ ಲಡ್ಡು ವಿತರಿಸಲು ಮೈಸೂರಿನ ವಿಜಯನಗರದಲ್ಲಿರುವ ಶ್ರೀ ಯೋಗಾನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಸಿದ್ದತೆ ಭರದಿಂದ ಸಾಗಿದೆ.ದೇವಸ್ಥಾನದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ನೇತೃತ್ವದಲ್ಲಿ ಸಿದ್ದತಾ ಕಾರ್ಯ ನೆರವೇರುತ್ತಿದೆ.ಸುಮಾರು 30 ಕ್ಕೂ ಹೆಚ್ಚು ಬಾಣಸಿಗರು ಸಿದ್ದತಾ ಕಾರ್ಯದಲ್ಲಿ ತೊಡಗಿದ್ದಾರೆ.1994 ರಲ್ಲಿ ಒಂದು ಸಾವಿರ ಲಡ್ಡು ವಿತರಣೆಯಿಂದ ಪ್ರಾರಂಭವಾದ ಈ ಕೈಂಕರ್ಯ ಇಂದು 2 ಲಕ್ಷ ಲಡ್ಡು ವಿತರಿಸುವ ಹಂತಕ್ಕೆ ಮುಟ್ಟಿದೆ.ಬೆಳಿಗ್ಗೆ ಸುಮಾರು 5 ಗಂಟೆಯಿಂದ ಪ್ರಸಾದ ವಿತರಣೆ ಆರಂಭವಾಗಲಿದೆ.2 ಕೆಜಿ ತೂಕದ 10 ಸಾವಿರ ಲಡ್ಡುಗಳು,150 ಗ್ರಾಂ ತೂಕದ ಎರಡು ಲಕ್ಷ ಲಡ್ಡುಗಳು ತಯಾರಾಗುತ್ತಿದೆ.

ಲಡ್ಡು ತಯಾರಿಕೆಗೆ 75 ಕ್ವಿಂಟಾಲ್ ಕಡ್ಲೆಹಿಟ್ಟು,200 ಕೆಜಿ ಸಕ್ಕರೆ,6000 ಲೀಟರ್ ಖಾದ್ಯ ತೈಲ,200 ಕೆಜಿ ಗೋಡಂಬಿ,200 ಕೆಜಿ ಒಣದ್ರಾಕ್ಷಿ,100 ಕೆಜಿ ಬಾದಾಮಿ,500 ಕೆಜಿ ಡೈಮಂಡ್ ಸಕ್ಕರೆ,1000 ಕೆಜಿ ಬೂರಾ ಸಕ್ಕರೆ,20 ಕೆಜಿ ಪಿಸ್ತಾ,50 ಕೆಜಿ ಏಲಕ್ಕಿ,10 ಕೆಜಿ ಪಚ್ಚ ಕರ್ಪೂರ,100 ಕೆಜಿ ಲವಂಗ ಬಳಸಲಾಗಿದೆ.ಜನವರಿ 1 ರ ಮುಂಜಾನೆ ದೇವರಿಗೆ ವಿಶೇಷ ಪೂಜೆ ನೆರವೇರಿದ ನಂತರ ಲಡ್ಡು ವಿತರಣೆಯಾಗಲಿದೆ.ರಾತ್ರಿ 10 ಗಂಟೆ ವರೆಗೂ ಪ್ರಸಾದ ವಿತರಿಸಲಾಗುತ್ತದೆ.

ನಾಲ್ಕನೇ ಅಲೆ ಭೀತಿ ಇರಯವುದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮಾಸ್ಕ್ ಧರಿಸುವಂತೆ ಭಕ್ತರಿಗೆ ಭಾಷ್ಯಂ ಸ್ವಾಮೀಜಿ ರವರು ಮನವಿ ಮಾಡಿದ್ದಾರೆ.ಆಡಳಿತಾಧಿಕಾರಿ ಶ್ರೀನಿವಾಸ್ ಉಸ್ತುವಾರಿಯಲ್ಲಿ ಲಡ್ಡು ತಯಾರಿಕಾ ನಿರ್ವಹಣೆ ಸಾಗುತ್ತಿದೆ…

Spread the love

Related post

ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ…ಅಡ್ಡೆ ಮೇಲೆ ಪೊಲೀಸರ ದಾಳಿ…ನಾಲ್ವರು ಮಹಿಳೆಯರ ರಕ್ಷಣೆ…

ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ…ಅಡ್ಡೆ ಮೇಲೆ ಪೊಲೀಸರ ದಾಳಿ…ನಾಲ್ವರು ಮಹಿಳೆಯರ ರಕ್ಷಣೆ…

ಸ್ಪಾ ಹೆಸರಲ್ಲಿ ವೇಶ್ಯಾವಾಟಿಕೆ…ಅಡ್ಡೆ ಮೇಲೆ ಪೊಲೀಸರ ದಾಳಿ…ನಾಲ್ವರು ಮಹಿಳೆಯರ ರಕ್ಷಣೆ… ಮಂಡ್ಯ,ಮೇ17,Tv10 ಕನ್ನಡ ಸ್ಪಾ ಹೆಸರಲ್ಲಿ ವೇಶ್ಯಾವಟಿಕೆ ನಡೆಸುತ್ತಿದ್ದ ಅಡ್ಡೆ ಮೇಲೆ ಮೈಸೂರಿನ ಒಡನಾಡಿ ಸಂಸ್ಥೆ ಹಾಗೂ ಮಂಡ್ಯ…
ಗ್ರಾ.ಪಂ.ವ್ಯಾಪ್ತಿಯಲ್ಲಿ ನಿರ್ಮಾಣವಾದ ಅನಧಿಕೃತ ಕಟ್ಟಡಗಳ ನೆಲಸಮಗೊಳಿಸಲು ಸರ್ಕಾರದಿಂದ ಆದೇಶ…ನಿಯಮಗಳನ್ನ ಉಲ್ಲಂಘಿಸಿ ನಿರ್ಮಾಣವಾದ ಕಟ್ಟಡ ಮಾಲೀಕರಿಗೆ ಶಾಕ್…

ಗ್ರಾ.ಪಂ.ವ್ಯಾಪ್ತಿಯಲ್ಲಿ ನಿರ್ಮಾಣವಾದ ಅನಧಿಕೃತ ಕಟ್ಟಡಗಳ ನೆಲಸಮಗೊಳಿಸಲು ಸರ್ಕಾರದಿಂದ ಆದೇಶ…ನಿಯಮಗಳನ್ನ ಉಲ್ಲಂಘಿಸಿ ನಿರ್ಮಾಣವಾದ…

ಮೈಸೂರು,ಮೇ16,Tv10 ಕನ್ನಡ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ಅನಧಿಕೃತ ಕಟ್ಟಡಗಳನ್ನ ನೆಲಸಮಗೊಳಿಸುವಂತೆ ಸರ್ಕಾರದಿಂದ ಎಲ್ಲಾ ಗ್ರಾಮ ಪಂಚಾಯ್ತಿಗೆ ಆದೇಶ ಹೊರಡಿಸಲಾಗಿದೆ.ನಿಯಮಗಳನ್ನ ಉಲ್ಲಂಘಿಸಿ ನಿರ್ಮಾಣವಾಗುತ್ತಿರುವ ವಾಣಿಜ್ಯ,ವಸತಿ ಹಾಗೂ ಇತರೆ ಕಟ್ಟಡಗಳ…
ಚಿರತೆದಾಳಿ…ಎರಡು ಕರುಗಳು ಬಲಿ…ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ…

ಚಿರತೆದಾಳಿ…ಎರಡು ಕರುಗಳು ಬಲಿ…ಸೆರೆ ಹಿಡಿಯುವಂತೆ ಗ್ರಾಮಸ್ಥರ ಒತ್ತಾಯ…

ಮಂಡ್ಯ,ಮೇ13,Tv10 ಕನ್ನಡ ಮಂಡ್ಯದಲ್ಲಿ ಚಿರತೆಗಳ ಹಾವಳಿ ಮುಂದುವರೆದಿದೆಚಿರತೆ ದಾಳಿಗೆ ಎರಡು ಕರುಗಳು ಬಲಿಯಾಗಿದೆ.ಮಂಡ್ಯ ಜಿಲ್ಲೆ ಕೆ.ಆರ್.ಪೇಟೆ ತಾಲೂಕಿನ ಕಾಪನಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.ವಾರದ ಹಿಂದೆ ಕಾಪನಹಳ್ಳಿಯ ಗವಿಮಠದ ಸಮೀಪ…

Leave a Reply

Your email address will not be published. Required fields are marked *