ಅಕ್ರಮ ವಿದ್ಯುತ್ ಸಂಪರ್ಕಗಳ ಮೇಲೆ ಸೆಸ್ಕ್ ಜಾಗೃತದಳ ದಾಳಿ…22 ಪ್ರಕರಣಗಳು ಪತ್ತೆ…ಕೇಸ್ ದಾಖಲು…

ಅಕ್ರಮ ವಿದ್ಯುತ್ ಸಂಪರ್ಕಗಳ ಮೇಲೆ ಸೆಸ್ಕ್ ಜಾಗೃತದಳ ದಾಳಿ…22 ಪ್ರಕರಣಗಳು ಪತ್ತೆ…ಕೇಸ್ ದಾಖಲು…

ಅಕ್ರಮ ವಿದ್ಯುತ್ ಸಂಪರ್ಕಗಳ ಮೇಲೆ ಸೆಸ್ಕ್ ಜಾಗೃತದಳ ದಾಳಿ…22 ಪ್ರಕರಣಗಳು ಪತ್ತೆ…ಕೇಸ್ ದಾಖಲು…

ಮೈಸೂರು,ಜ04,Tv10 ಕನ್ನಡ
ಅಕ್ರಮ ವಿದ್ಯುತ್ ಸಂಪರ್ಕಗಳ ಮೇಲೆ ಸೆಸ್ಕ್ ಜಾಗೃತಿ ದಳ ಹದ್ದಿನ ಕಣ್ಣಿಡುತ್ತಿದೆ.ಅಕ್ರಮವಾಗಿ ಸಂಪರ್ಕ ಪಡೆದವರ ಮೇಲೆ ನಿರ್ದಾಕ್ಷಿಣ್ಯವಾಗಿ ಕೇಸ್ ದಾಖಲು ಮಾಡುತ್ತಿದೆ.ಕೆಲವು ದಿನಗಳ ಹಿಂದಷ್ಟೆ ದಾಳಿ ನಡೆಸಿದ್ದ ಜಾಗೃತದಳ ಹಲವು ಪ್ರಕರಣಗಳನ್ನ ದಾಖಲಿಸಿತ್ತು.ಇದೀಗ ತಮ್ಮ ಕಾರ್ಯಾಚರಣೆಯನ್ನ ಮುಂದುವರೆಸಿದ್ದು ಮೈಸೂರಿನ ಎನ್.ಆರ್.ಮೊಹಲ್ಲಾ ವಿಭಾಗದಲ್ಲಿ 22 ಅಕ್ರಮ ಸಂಪರ್ಕಗಳನ್ನ ಪತ್ತೆಹಚ್ಚಿ ಪ್ರಕರಣ ದಾಖಲಿಸಿಕೊಂಡಿದೆ.ಅಕ್ರಮ ಸಂಪರ್ಕ ಪಡೆಯಲು ಬಳಸಲಾದ ವಿದ್ಯುತ್ ಉಪಕರಣಗಳನ್ನ ಸೀಜ್ ಮಾಡಿದೆ.ಮೈಸೂರು ವಿಜಿಲೆನ್ಸ್ ತಂಡದ ಜೊತೆಗೆ ಮಂಡ್ಯ,ಚಾಮರಾಜನಗರ ಹಾಗೂ ಮಡಿಕೇರಿ ತಂಡಗಳೂ ಸಹ ಜಂಟಿಯಾಗಿ ಕಾರ್ಯಾಚರಣೆ ನಡೆಸಿದೆ.

ಸೆಸ್ಕ್ ವ್ಯವಸ್ಥಾಪಕ ನಿರ್ದೇಶಕ ಜಯವಿಭವ ಸ್ವಾಮಿ,ಎಸ್ಪಿ ರಶ್ಮಿ ಪರಡ್ಡಿ,ಡಿವೈಎಸ್ಪಿ ಧರ್ಮೇಂದ್ರ ಮಾರ್ಗದರ್ಶನದಲ್ಲಿ ಇ.ಇ.ತಬ್ಬುಸ್ಸಮ್ ಅಫ್ಘಾಬಾನು ನೇತೃತ್ವದಲ್ಲಿ ಸೆಸ್ಕ್ ಜಾಗೃತಿದಳದ ನಿರೀಕ್ಷಕರಾದ ವಿನಯ್,ರಾಘವೇಂದ್ರ,ಮಹದೇವಸ್ವಾಮಿ,ಎಇಇ ಅನಿಶ್ ಕುಮಾರ್ ಪಾಠಕ್,ತಿಲಕ್,ಸೈಯದ್ ಅಬ್ದುಲ್ ರಜೀಮ್,ತಿಲಕ್,ಲತಾ, ಎಇ ಸೈಯದಾ ಕೌಸರ್ ಬೇಗಂ,ಜೆಇ ಮಣಿಕಂಠಸ್ವಾಮಿ,ಪಿಎಸ್ಸೈ ಗಳಾದ ಸುಧಾ,ನಿಕಿತಾ,ವೀಣಾ ನಾಯ್ಕ್ ಹಾಗೂ ಸಿಬ್ಬಂದಿಗಳು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ…

Spread the love

Related post

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ

ವಿವಿಧ ಲಯನ್ಸ್ ಸಂಸ್ಥೆ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ಮೈಸೂರು, ಸೆ.15: ಪ್ರಾಣಿ ಸಂರಕ್ಷಣೆ ಹಾಗೂ ವನ್ಯಜೀವಿಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಲಯನ್ಸ್ ಇಂಟರ್‌ನ್ಯಾಷನಲ್, ಲಯನ್ಸ್…
ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ…

ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ…

ಸಾಹಸಸಿಂಹ ಡಾ. ವಿಷ್ಣುವರ್ಧನ್ 76ನೇ ಜನ್ಮದಿನಾಚರಣೆ…ಉದ್ಭೂರು ಗೇಟ್ ಸ್ಮಾರಕದಲ್ಲಿ ಅದ್ಧೂರಿ ಕಾರ್ಯಕ್ರಮ… ಮೈಸೂರು,ಸೆ15,Tv10 ಕನ್ನಡ ಸಾಹಸಸಿಂಹ, ಕರ್ನಾಟಕ ರತ್ನ ಡಾ. ವಿಷ್ಣುವರ್ಧನ್ ಅವರ 76ನೇ ಜನ್ಮದಿನಾಚರಣೆಯನ್ನು ಸೆಪ್ಟೆಂಬರ್ 18ರಂದು…
ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ.

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ…

ಬರ ಘೋಷಣೆ ಮಾಡಿ ಒಂದು ತಿಂಗಳಾದರೂ ನಯಾಪೈಸೆ ಇಲ್ಲ: ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹನೂರು ವೆಂಕಟೇಶ್ ಕಿಡಿ. ಹನೂರು Tv10 ಕನ್ನಡ ಹನೂರು: ಹನೂರು ತಾಲೂಕನ್ನು ಬರಪೀಡಿತ…

Leave a Reply

Your email address will not be published. Required fields are marked *