ಮಾರ್ಶಲ್ ಆರ್ಟ್ಸ್ ನಲ್ಲಿ ಸಾಧನೆ ಮಾಡಿದ ಕರಾಟೆಪಟುಗೆ ಎನ್.ಆರ್.ಠಾಣೆ ಪೊಲೀಸರಿಂದ ಸನ್ಮಾನ…
- TV10 Kannada Exclusive
- January 10, 2023
- No Comment
- 82
ಮಾರ್ಶಲ್ ಆರ್ಟ್ಸ್ ನಲ್ಲಿ ಸಾಧನೆ ಮಾಡಿದ ಕರಾಟೆಪಟುಗೆ ಎನ್.ಆರ್.ಠಾಣೆ ಪೊಲೀಸರಿಂದ ಸನ್ಮಾನ…
ಮೈಸೂರು,ಜ10, Tv10 ಕನ್ನಡ
ಮಾರ್ಶಲ್ ಆರ್ಟ್ಸ್ ನಲ್ಲಿ ಸಾಧನೆ ಮಾಡಿ ರಾಜ್ಯಕ್ಕೆ ಹಾಗೂ ದೇಶಕ್ಕೆ ಕೀರ್ತಿ ತಂದ ಸೌಜನ್ಯ ರವರನ್ನ ಎನ್.ಆರ್.ಪೊಲೀಸ್ ಠಾಣೆಯ ಎಸ್ಸೈ ಜೈಕೀರ್ತಿ ಹಾಗೂ ಸಿಬ್ಬಂದಿಗಳು ಗೌರವಿಸಿ ಸನ್ಮಾನಿಸಿದರು. ಮೈಸೂರು ವಿಶ್ವ ವಿದ್ಯಾನಿಲಯದ ಎಂ.ಎಸ್ಸಿ ವಿದ್ಯಾರ್ಥಿನಿ ಹಾಗೂ ಮೈಸೂರು ನಗರದ ರಾಜೇಂದ್ರ ನಗರ SGRR ಕರಾಟೆ & ಸ್ಪೋರ್ಟ್ಸ್ ಶಾಲೆಯ ಕರಾಟೆ ತರಬೇತುದಾರ ಲೋಕೇಶ್ ರವರಲ್ಲಿ ಓಕಿನಾವ ಶೋಟಾಕಾನ್ ಶೈಲಿಯ ಕರಾಟೆ ಅಭ್ಯಾಸ ಮಾಡುತ್ತಿರುವ ಸೌಜನ್ಯ, ಮೈಸೂರಿನ ಇಲಾವಾಲ ನಿವಾಸಿಯಾಗಿದ್ದಾರೆ. ಈವರೆಗೆ 6 ಬಾರಿ ಯೂನಿವರ್ಸಿಟಿ ಚಾಂಪಿಯನ್ ಆಗಿದ್ದು, 30 ರಾಜ್ಯಮಟ್ಟದ ಪದಕಗಳನ್ನು, 13 ರಾಷ್ಟ್ರಮಟ್ಟದ ಪ್ರಶಸ್ತಿ ಗಳನ್ನು, 2 ಅಂತರ್ರಾಷ್ಟ್ರೀಯ ಪ್ರಶಸ್ತಿ ಗಳನ್ನು ಗೆದ್ದು ದೇಶಕ್ಕೆ, ರಾಜ್ಯಕ್ಕೆ, ವಿಶೇಷ ವಾಗಿ ಮೈಸೂರಿಗೆ ಹೆಮ್ಮೆ ತಂದಿದ್ದಾರೆ. ಪ್ರತಿಭಾವಂತೆ ಸೌಜನ್ಯ ರವರನ್ನು ಈ ದಿನ ನರಸಿಂಹರಾಜ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶ್ರೀ. ಜೈಕೀರ್ತಿ ರವರು ಹಾಗೂ ಠಾಣೆಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಇಂದು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಿದರು. ಹೆಣ್ಣು ಮಕ್ಕಳ ಆತ್ಮರಕ್ಷಣೆಗೆ ಹಾಗೂ ಆತ್ಮಸ್ಥೈರ್ಯಕ್ಕೆ ಅತ್ಯಂತ ಉಪಯುಕ್ತವಾಗಿರುವ ಕರಾಟೆ ಯಲ್ಲಿ ಸೌಜನ್ಯ ರಂತಹ ಹೆಣ್ಣು ಮಗಳ ಸಾಧನೆ ಶ್ಲಾಘನೀಯ ಮತ್ತು ಅವರ ಸಾಧನೆ ಎಲ್ಲ ಹೆಣ್ಣುಮಕ್ಕಳಿಗೂ ಪ್ರೇರಣಾದಯಕ ಎಂದು ಈ ಸಂದರ್ಭದಲ್ಲಿ ಪಿಎಸ್ಐ ಜೈಕೀರ್ತಿ ರವರು ಅಭಿಪ್ರಾಯ ಪಡುತ್ತಾ ಕುಮಾರಿ ಸೌಜನ್ಯ ರವರು ಇನ್ನಷ್ಟು ಸಾಧನೆಗಳನ್ನು ಮಾಡಿ ದೇಶಕ್ಕೆ ರಾಜ್ಯಕ್ಕೆ ನಮ್ಮ ಮೈಸೂರಿಗೆ ಕೀರ್ತಿ ತರಲಿ ಎಂದು ಹಾರೈಸಿ ಸನ್ಮಾನಿಸಿದ್ದಾರೆ…