
ಕುವೆಂಪುನಗರ ಪೊಲೀಸರ ಕಾರ್ಯಾಚರಣೆ…ಮನೆಗಳ್ಳನ ಬಂಧನ…40 ಗ್ರಾಂ ಚಿನ್ನಾಭರಣ ವಶ…
- CrimeMysore
- January 10, 2023
- No Comment
- 149
ಕುವೆಂಪುನಗರ ಪೊಲೀಸರ ಕಾರ್ಯಾಚರಣೆ…ಮನೆಗಳ್ಳನ ಬಂಧನ…40 ಗ್ರಾಂ ಚಿನ್ನಾಭರಣ ವಶ…
ಮೈಸೂರು,ಜ10,Tv10 ಕನ್ನಡ
ಕುವೆಂಪುನಗರ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಓರ್ವ ಮನೆಗಳ್ಳನ ಬಂಧನವಾಗಿದೆ.ರಾತ್ರಿ ಗಸ್ತಿನ ವೇಳೆ ರಾಡ್ ಹಾಗೂ ಸ್ಕ್ರೂ ಡ್ರೈವರ್ ಸಮೇತ ಸಿಕ್ಕಿಬಿದ್ದ ವ್ಯಕ್ತಿಯನ್ನ ವಶಕ್ಕೆ ಪಡೆದು ವಿಚಾರಣೆ ನಡೆಸಿದ ಕುವೆಂಪುನಗರ ಠಾಣೆ ಪೊಲೀಸರಿಗೆ ಎರಡು ಮನೆಗಳುವು ಪ್ರಕರಣ ಪತ್ತೆಯಾದಂತಾಗಿದೆ.ಬಂಧಿತನಿಂದ 2 ಲಕ್ಷ ಮೌಲ್ಯದ 40 ಗ್ರಾಂ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.ಮಂಜ (51) ಬಂಧಿತ ಆರೋಪಿ.ಬಂಧಿತ ಈ ಹಿಂದೆ ಹೊಳೆನರಸೀಪುರ,ಅರಸೀಕೆರೆ,ಚಿಕ್ಕಮಂಗಳೂರಿನಲ್ಲಿ 6 ಕಳುವು ಪ್ರಕರಣದಲ್ಲಿ ಭಾಗಿಯಾಗಿರುವುದು ಬೆಳಕಿಗೆ ಬಂದಿದೆ.ಮೈಸೂರಿನ ವಾಸು ಬಡಾವಣೆಯ ಕುಶಾಲಪ್ಪ ಎಂಬುವರ ಮನೆಯ ಬಾಗಿಲು ಮೀಟಿದ್ದ ಮಂಜು ಕಳುವು ಮಾಡಿದ್ದ.ಈ ಹಿನ್ನಲೆ ಡಿಸಿಪಿ ಗೀತಾ ಪ್ರಸನ್ನ,ಕೆ.ಆರ್.ವಿಭಾಗದ ಎಸಿಪಿ ಗಂಗಾಧರಸ್ವಾಮಿ ಮಾರ್ಗದರ್ಶನದಲ್ಲಿ ಕುವೆಂಪುನಗರ ಠಾಣೆಯ ಇನ್ಸ್ಪೆಕ್ಟರ್ ಅರುಣ್ ನೇತೃತ್ವದಲ್ಲಿ ಪಿಎಸ್ಸೈ ಗೋಪಾಲ್,ಸಿಬ್ಬಂದಿಗಳಾದ ಹಜರತ್,ಸುರೇಶ್,ಮಂಜುನಾಥ್,ಪುಟ್ಟಪ್ಪ,ಚಿಕ್ಕಬಸವೇಗೌಡ ರವರು ಕಾರ್ಯಾಚರಣೆ ನಡೆಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕುವೆಂಪುನಗರ ಠಾಣೆ ಪೊಲೀಸರ ಕಾರ್ಯಾಚರಣೆಗೆ ನಗರ ಪೊಲೀಸ್ ಆಯುಕ್ತರಾದ ಬಿ.ರಮೇಶ್,ಡಿಸಿಪಿ ಮುತ್ತುರಾಜ್ ರವರು ಪ್ರಶಂಸಿಸಿದ್ದಾರೆ…