
ಆಂಬ್ಯುಲೆನ್ಸ್ ಚಕ್ರಕ್ಕೆ ಸಿಲುಕಿದ ರಾಗಿ ಸತ್ತೆ…ರೋಗಿಯನ್ನ ಸಾಗಿಸುವಾಗ ಅಡ್ಡಿ…
- Crime
- January 12, 2023
- No Comment
- 128

ಆಂಬ್ಯುಲೆನ್ಸ್ ಚಕ್ರಕ್ಕೆ ಸಿಲುಕಿದ ರಾಗಿ ಸತ್ತೆ…ರೋಗಿಯನ್ನ ಸಾಗಿಸುವಾಗ ಅಡ್ಡಿ…

ಹುಣಸೂರು,ಜ12,Tv10 ಕನ್ನಡ
ರೋಗಿಯನ್ನ ಸಾಗಿಸುತ್ತಿದ್ದ ಆಂಬ್ಯುಲೆನ್ಸ್ ಚಕ್ರಕ್ಕೆ ರಸ್ತೆಯಲ್ಲಿ ಹಾಕಿದ್ದ ರಾಗಿ ಸತ್ತೆ ಸಿಲುಕಿದ ಘಟನೆ ಹುಣಸೂರು ತಾಲೂಕಿನಹರದನಹಳ್ಳಿ ಬಳಿ ನಡೆದಿದೆ.ಕೆಲಕಾಲ ಪರದಾಡಿದ ಆಂಬ್ಯಲೆನ್ಸ್ ಸಿಬ್ಬಂದಿ ರಾಗಿ ಸತ್ತೆಯನ್ನ ಬಿಡಿಸಿಕೊಂಡು ಮುಂದೆ ಸಾಗಿದ್ದಾರೆ.ಚಿಕ್ಕಬೀಚನಹಳ್ಳಿಯಿಂದ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ರೋಗಿಯನ್ನ ಸಾಗಿಸುತ್ತಿದ್ದ ವೇಳೆ ಘಟನೆ ನಡೆದಿದೆ.ರಸ್ತೆಯಲ್ಲಿ ರಾಗಿ ಸತ್ತೆಯನ್ನ ಹಾಕಬಾರದೆಂಬ ನಿಯಮವಿದ್ದರೂ ರೈತರು ನಿರ್ಲಕ್ಷಿಸುತ್ತಿದ್ದಾರೆ.ರಾಗಿ ಸತ್ತೆಗೆ ಸಿಲುಕಿದ್ದರೂ ಆಂಬ್ಯಲೆನ್ಸ್ ನಲ್ಲಿದ್ದ ರೋಗಿಯನ್ನ ಸಿಬ್ಬಂದಿಗಳು ಸುರಕ್ಷಿತವಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ಸಾಗಿಸುವಲ್ಲಿ ಯಶಸ್ವಿಯಾಗಿದ್ದಾರೆ.ರಸ್ತೆ ಮಧ್ಯೆ ರಾಗಿ ಸತ್ತೆ ಸುರಿಯುವ ರೈತರಿಗೆ ಬುದ್ದಿ ಹೇಳುವರಾರು…? ಆಂಬ್ಯುಲೆನ್ಸ್ ತಡವಾಗಿದ್ದಲ್ಲಿ ರೋಗಿಗೆ ಅನಾಹುತ ಸಂಭವಿಸಿದ್ದಲ್ಲಿ ಹೊಣೆ ಯಾರು…? ಎಂಬ ಪ್ರಶ್ನೆ ಉದ್ಭವವಾಗಿದೆ.ಕೂಡಲೇ ಸಂಭಂಧಪಟ್ಟವರು ಇತ್ತ ಗಮನ ಹರಿಸಬೇಕಿದೆ…