ಮೊದಲ ಪತ್ನಿ ವಿರುದ್ದ ಎಫ್.ಐ.ಆರ್.ದಾಖಲಿಸಿದ್ದ ಸ್ಯಾಂಟ್ರೋ ರವಿ…ದಾಖಲೆ ಲಭ್ಯ…

ಮೊದಲ ಪತ್ನಿ ವಿರುದ್ದ ಎಫ್.ಐ.ಆರ್.ದಾಖಲಿಸಿದ್ದ ಸ್ಯಾಂಟ್ರೋ ರವಿ…ದಾಖಲೆ ಲಭ್ಯ…

ಮೊದಲ ಪತ್ನಿ ವಿರುದ್ದ ಎಫ್.ಐ.ಆರ್.ದಾಖಲಿಸಿದ್ದ ಸ್ಯಾಂಟ್ರೋ ರವಿ…ದಾಖಲೆ ಲಭ್ಯ…

ಮೈಸೂರು,ಜ17,Tv10 ಕನ್ನಡ
ಸ್ಯಾಂಟ್ರೋ ರವಿ ನ್ಯಾಯಾಲಯದಲ್ಲಿ ನೀಡಿದ್ದ ಹೇಳಿಕೆ ಲಭ್ಯವಾಗಿದೆ.ದೂರು ದಾಖಲಿಸುವುದರಲ್ಲಿ ಸ್ಯಾಂಟ್ರೋ ರವಿ ಎಕ್ಸ್ ಪರ್ಟ್ ಆಗಿದ್ದ.
ನಾನೊಬ್ಬ ವೃತ್ತಿಯಲ್ಲಿ ಪತ್ರಕರ್ತ ಎಂದು ಆರಂಭದಲ್ಲೇ ಉಲ್ಲೇಖಿಸಿರುವ ರವಿ
ತನ್ನ ಮೊದಲ ಪತ್ನಿ ವಿರುದ್ಧವೂ ಕೇಸ್ ದಾಖಲಿಸಿದ್ದ.
ಎರಡನೇ ಪತ್ನಿ ಮೇಲೆ ಮಾಡಿರುವ ಆರೋಪವನ್ನೇ ಮೊದಲ ಪತ್ನಿಗೂ ಮಾಡಿದ್ದಾನೆ.
ಮೊದಲ ಪತ್ನಿ ವಿರುದ್ಧವೂ 10 ಲಕ್ಷ ರೂ ನಗದು ಕಳವು ಆರೋಪ ಮಾಡಿದ್ದ.
ಎರಡನೇ ಪತ್ನಿ ವಿರುದ್ಧವೂ 10 ಲಕ್ಷ ರೂ ಕಳವು ಆರೋಪ ಮಾಡಿದ್ದಾನೆ.
ತನ್ನ ಕೃತ್ಯಕ್ಕೆ ಅಡ್ಡ ಬಂದವರ ವಿರುದ್ದ ಎಫ್ ಐ ಆರ್ ಹಾಕುವ ಅಸ್ತ್ರ ಬಳಸಿಕೊಂಡಿದ್ದಾನೆ.
ಮೊದಲ ಪತ್ನಿ ವಿರುದ್ದವೂ ಪ್ರಕರಣ ದಾಖಲಿಸಿದ್ದ ಕೆ ಎಸ್ ಮಂಜುನಾಥ್ ಅಲಿಯಾಸ್ ಸ್ಯಾಂಟ್ರೋ ರವಿ.
ನವೆಂಬರ್ 2006ರಲ್ಲಿ ಎಫ್ ಐ ಆರ್ ದಾಖಲಿಸಿದ್ದ.
ತನ್ನ ವಿರುದ್ಧ ಕೊಲೆ ಬೆದರಿಕೆ ಆರೋಪದಡಿ ಪ್ರಕರಣ ದಾಖಲಿಸಿದ್ದ ಸ್ಯಾಂಟ್ರೋ ರವಿ.
ತನ್ನ‌ ಪತ್ನಿ ಮೊಬೈಲ್‌ಗೆ ಹಲವರಿಂದ ಅಸಭ್ಯ ಸಂದೇಶ ಬಂದಿದೆ.
ಈ ಬಗ್ಗೆ ನಾನು ಪತ್ನಿಗೆ ಪ್ರಶ್ನೆ ಮಾಡಿದ್ದೆ.ಹೀಗಾಗಿ ಜಗಳ
ಮಾಡಿ ಕೊಲೆ ಮಾಡುವುದಾಗಿ ಪತ್ನಿಯಿಂದ ಬೆದರಿಕೆ ಬಂದಿತ್ತು ಎಂದು ಆರೋಪಿಸಿದ್ದಾನೆ.
ಆಕೆ ಹಲವರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾಳೆ.
ವೇಶ್ಯಾವಾಟಿಕೆ ದಂಧೆಯಲ್ಲಿ ತೊಡಗಿದ್ದಾಳೆ.
ಹಲವರ ಜೊತೆ ಅನೈತಿಕ ಸಂಬಂಧ ಹೊಂದಿರುವುದನ್ನ ನೋಡಿದ್ದೇನೆ.
ಈ ಸಂಬಂಧ ಎನ್.ಆರ್.ಠಾಣೆಯಲ್ಲಿ ದೂರು ದಾಖಲಿಸಿದ್ದೆ.
ಹಿರಿಯರ ರಾಜಿ ಪಂಚಾಯ್ತಿ ಮೂಲಕ ಆಕೆ ಜೊತೆ ಬದುಕಿದ್ದೆ.
ಆದರೆ, ಆಕೆ ತನ್ನ ತಪ್ಪನ್ನ ತಿದ್ದುಕೊಳ್ಳಲಿಲ್ಲ ಎಂದು
ತನ್ನ ಪತ್ನಿ ವಿರುದ್ಧವೇ ಕೆಟ್ಟ ಅಭಿಪ್ರಾಯ ದಾಖಲಿಸಿದ್ದ ಸ್ಯಾಂಟ್ರೋ ರವಿ.
ಈ ಸಂಬಂಧ‌ ನ್ಯಾಯಾಲಯಕ್ಕೆ ಸಲ್ಲಿಸಿದ್ದ ಅಫಿಡಿವೆಟ್ ನಲ್ಲಿ ಸ್ಯಾಂಟ್ರೋ ರವಿ
ಆಕೆಯ ವಿರುದ್ದ ಕ್ರಮ ಕೈಗೊಳ್ಳುವಂತೆ ಪ್ರಕರಣ ದಾಖಲಿಸಿದ್ದ.
ನವೆಂಬರ್ 2019 ರಲ್ಲಿ ನ್ಯಾಯಾಲಯದಲ್ಲಿ ಹೇಳಿಕೆ ದಾಖಲಿಸಿ ಕ್ರಮಕ್ಕೆ ಆಗ್ರಹಿಸಿದ್ದ…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *