TV10 Kannada Exclusive

ಕುರಿದೊಡ್ಡಿಯಾದ ಟ್ರಿಣ್ ಟ್ರಿಣ್ ಸೈಕಲ್ ಸ್ಟ್ಯಾಂಡ್…ಹಳ್ಳ ಹಿಡಿಯುತ್ತಿರುವ ಸಿಎಂ ಸಿದ್ದರಾಮಯ್ಯ ಮಹತ್ತರ ಯೋಜನೆ…

ಮೈಸೂರು,ಜೂ2,Tv10 ಕನ್ನಡ ಟ್ರಿಣ್ ಟ್ರಿಣ್ ಸೈಕಲ್ ಗಳು ತುಂಬಿರಬೇಕಾದ ಸ್ಟ್ಯಾಂಡ್ ಇದೀಗ ಕುರಿದೊಡ್ಡಿಯಾಗಿ ಪರಿವರ್ತನೆಯಾಗಿದೆ.ಪರಿಸರ ಉಳಿವಿಗಾಗಿ ತಂದ ಯೋಜನೆ ನೈರ್ಮಲ್ಯಕ್ಕೆ ಕಾರಣವಾಗುತ್ತಿದೆ.ಸೈಕಲ್ ಗಳು ತುಂಬಿರಬೇಕಿದ್ದ ಸ್ಥಳದಲ್ಲಿ ಕುರಿಗಳನ್ನ ತುಂಬಿದ್ದರೂ ಅಧಿಕಾರಿಗಳ ಗಮನಕ್ಕೂ ಬಂದಿಲ್ಲ.ಸಿಎಂ ಸಿದ್ದರಾಮಯ್ಯ ರವರ ಮಹತ್ತರ ಯೋಜನೆ ಈ ಮೂಲಕ ಹಳ್ಳ ಹಿಡಿಯುವ ಸೂಚನೆ ತೋರಿಸುತ್ತಿದೆ. ಪರಿಸರ ನೈರ್ಮಲ್ಯ ಕಾಪಾಡುವ ದೃಷ್ಟಿಯಿಂದ ಸಿದ್ದರಾಮಯ್ಯ ನವರು ಈ ಯೋಜನೆಯನ್ನ 2016 ರಲ್ಲಿ ಜಾರಿಗೆ ತಂದರು.ಪ್ರಾಯೋಗಿಕವಾಗಿ ಆರಂಭವಾದ ಯೋಜನೆಗೆ ಸಾರ್ವಜನಿಕರೂ ಸಹ
Read More

ಗಣಪತಿ ಶ್ರೀ ಗಳ ಹುಟ್ಟುಹಬ್ಬ ಅಂಗವಾಗಿ ಶೋಭಾಯಾತ್ರೆ…ಪ್ರಚಾರ ಪೋಸ್ಟರ್ ಬಿಡುಗಡೆ…ದತ್ತಸೇನೆಯಿಂದ ಕಾರ್ಯಕ್ರಮ…

ಮೈಸೂರು,ಮೇ31,Tv10 ಕನ್ನಡ ಗಣಪತಿ ಸಚ್ಚಿದಾನಂದ ಶ್ರೀಗಳ 83ನೇ ವರ್ಷದ ಹುಟ್ಟುಹಬ್ಬದ ಅಂಗವಾಗಿ ಮೈಸೂರಿನಲ್ಲಿ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ.ಶಾಸಕ ಟಿಎಸ್. ಶ್ರೀವತ್ಸ ರವರು ಶೋಭಾಯಾತ್ರೆಯ ಪ್ರಚಾರ ಪೋಸ್ಟರ್ ಬಿಡುಗಡೆ ಮಾಡಿದರು.ದತ್ತಸೇನೆ ವತಿಯಿಂದ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಜೂನ್ 1ರಂದು ಬೆಳಗ್ಗೆ 10ಘಂಟೆಗೆ ಮೈಸೂರಿನ ಚಾಮುಂಡಿಪುರಂ ವೃತ್ತದಲ್ಲಿ ಶ್ರೀ ಗಣಪತಿ ಸಚ್ಚಿದಾನಂದ ಆಶ್ರಮದ ವರೆಗೂ ಬೃಹತ್ ಶೋಭಾಯತ್ರೆ ಸಾಗಲಿದೆ.ಶೋಭಾಯಾತ್ರೆಯಲ್ಲಿ ಮಂಗಳವಾದ್ಯ ನಾದಸ್ವರ, ವೇದಬಳಗ, ಭಜನಾಮಂಡಳಿ, ಸ್ವಾಮೀಜಿ ರವರ ಸಾರೋಟು ರಥ ಸಾಗಲಿದ್ದು ಮೈಸೂರಿನ ಸಂಘ ಸಂಸ್ಥೆಗಳು
Read More

ಮೈಸೂರು ಮಹಾಸಂಸ್ಥಾನದ 27 ನೇ ಮಹಾರಾಜರಾಗಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಪಟ್ಟಾಭಿಷಕ್ತರಾಗಿ ಇಂದಿಗೆ 10 ವರ್ಷ…ಶುಭಾಶಯಗಳ ಸುರಿಮಳೆ…

ಮೈಸೂರು,ಮೇ29,Tv10 ಕನ್ನಡ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ಯದುಕುಲದ ಅರಸರಾಗಿ ಹಾಗೂ 27 ನೇ ಮಹಾರಾಜರಾಗಿ ಪಟ್ಟಾಭಿಷಿಕ್ತರಾಗಿ ಇಂದಿಗೆ 10 ವರ್ಷ ಪೂರ್ಣಗೊಂಡಿದೆ.28 ಮೇ 2015 ರಂದು ಅರಮನೆಯಲ್ಲಿ ನಡೆದ ಅದ್ದೂರಿ ಸಮಾರಂಭದಲ್ಲಿ ಯದುವೀರ್ ರವರಿಗೆ ಪಟ್ಟಾಭಿಷೇಕ ನೆರವೇರಿಸಲಾಗಿತ್ತು.ನಾಡಿನ ಹಾಗೂ ದೇಶವಿದೇಶಗಳಿಂದ ಆಗಮಿಸಿದ್ದ ಗಣ್ಯರು ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿದ್ದರು.ಇದೀಗ ಹತ್ತು ವರ್ಷ ಪೂರೈಸಿರುವ ಯದುವೀರ್ ರವರಿಗೆ ಶುಭಾಶಯಗಳ ಸುರಿಮಳೆಯಾಗುತ್ತಿದೆ.ಈ ಶುಭ ಸಂದರ್ಭದಲ್ಲಿ ಯದುಕುಲದ ಅರಸರಿಗೆ ತಾಯಿ ಚಾಮುಂಡೇಶ್ವರಿ ಸಕಲ
Read More

ಮೈಸೂರು ಉಪವಿಭಾಗಾಧಿಕಾರಿಯಾಗಿ ಆರ್.ಮಂಜುನಾಥ್ ನೇಮಕ…

ಮೈಸೂರು,ಮೇ29,Tv10 ಕನ್ನಡ ಮೈಸೂರು ಉಪವಿಭಾಗಾಧಿಕಾರಿಯಾಗಿ ಆರ್.ಮಂಜುನಾಥ್ ರನ್ನ ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.ಈ ಹಿಂದೆ ಕಬಿನಿ ಜಲಾಶಯ ಯೋಜನೆ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಈ ಹಿಂದೆ ಉಪವಿಭಾಗಾಧಿಕಾರಿಯಾಗಿ ಇಂದಿನ ಮೈಸೂರು ಅಭಿವೃದ್ದಿ ಪ್ರಾಧಿಕಾರದ ಆಯುಕ್ತರಾಗಿರುವ ಕೆ.ಆರ್.ರಕ್ಷಿತ್ ಹುದ್ದೆ ಅಲಂಕರಿಸಿದ್ದರು.ಕೆ.ಆರ್.ರಕ್ಷಿತ್ ರವರ ಜಾಗಕ್ಕೆ ಆರ್.ಮಂಜುನಾಥ್ ರನ್ನ ಪ್ರಭಾರ ಆಗಿ ನೇಮಕ ಮಾಡಿರುವುದಾಗಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ…
Read More

ಸಾಲಬಾಧೆ:ರೈತ ಆತ್ಮಹತ್ಯೆ…

ಮಂಡ್ಯ,ಮೇ28,Tv10 ಕನ್ನಡ ಸಾಲಬಾಧೆ ತಾಳಲಾರದೆ ರೈತ ನೇಣು ಬಿಗಿದುಕೊಂಡು ಆತ್ಮತ್ಯೆಗೆ ಶರಣಾದ ಘಟನೆ ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಮರಟಿಕೊಪ್ಪಲು ಗ್ರಾಮದಲ್ಲಿ ನಡೆದಿದೆ. ರೈತ ಮಂಜೇಗೌಡ (45) ಆತ್ಮತ್ಯೆಗೆ ಶರಣಾದವರು.ಮಂಡ್ಯದ ಕೆ.ಆರ್.ಪೇಟೆ ತಾ. ಸಾಧುಗೋನಹಳ್ಳಿ ಸಮೀಪದ ಅರಣ್ಯ ಪ್ರದೇಶದಲ್ಲಿ ಘಟನೆ ನಡೆದಿದೆ.ವಿವಿಧ ಬ್ಯಾಂಕಿನಲ್ಲಿ ಸಾಲ, ಖಾಸಗಿ ವ್ಯಕ್ತಿಗಳಿಂದಲೂ 5 ಲಕ್ಷದವರೆಗೂ ಕೈ ಸಾಲ ಮಾಡಿಕೊಂಡಿದ್ದರು.ಸಾಲದ ಸುಳಿಯಲ್ಲಿ ಸಿಲುಕಿ ಮನನೊಂದು ನೇಣಿಗೆ ಶರಣಾಗಿದ್ದಾರೆ.ಘಟನಾ ಸ್ಥಳಕ್ಕೆ ಕೆ.ಆರ್.ಪೇಟೆ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ
Read More

ಮೈಸೂರು ಅಭಿವೃದ್ದಿ ಪ್ರಾಧಿಕಾರ ಆಯುಕ್ತರಾಗಿ ಕೆ.ಆರ್.ರಕ್ಷಿತ್ ನೇಮಕ…

ಮೈಸೂರು,ಮೇ26,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದ ನೂತನ ಆಯುಕ್ತರಾಗಿ ಕೆ.ಆರ್.ರಕ್ಷಿತ್ ನೇಮಕವಾಗಿದ್ದಾರೆ.ಮೈಸೂರು ಅಭಿವೃದ್ದಿ ಪ್ರಾಧಿಕಾರದ ಭೂಸ್ವಾಧೀನಾಧಿಕಾರಿಯಾಗಿ ಕರ್ತವ್ಯ ನಿರತವಹಿಸುತ್ತಿರುವ ಕೆ.ಆರ್.ರಕ್ಷಿತ್ ರವರಿಗೆ ಆಯುಕ್ತರಾಗಿ ಹೆಚ್ಚಿನ ಅಧಿಕಾರ ವಹಿಸಲಾಗಿದ್ದು ಎರಡೂ ಹುದ್ದೆಯನ್ನ ಮುಂದಿನ ಆದೇಶದ ವರೆಗೆ ನಿರ್ವಹಿಸುವಂತೆ ಸೂಚಿಸಲಾಗಿದೆ…
Read More

ಕೆರೆ ಅಂಚಿನಲ್ಲಿ ಪೀಸ್ ಪೀಸ್ ಆದ ಪುರುಷ ಶವ ಪತ್ತೆ…ಕೊಲೆ ಶಂಕೆ…

ಮೈಸೂರು,ಮೇ25,Tv10 ಕನ್ನಡ ಕೆರೆ ಅಂಚಿನಲ್ಲಿ ಪೀಸ್ ಪೀಸ್ ಆದ ಪುರುಷ ಶವ ಪತ್ತೆಯಾದ ಘಟನೆ ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಯ ಕೆ.ಹೆಮ್ಮನಹಳ್ಳಿ ಗ್ರಾಮದಲ್ಲಿ ನಡೆದಿದೆ.ತಲೆ,ಎಡ ಮುಂಗೈ,ತೊಡೆ,ಮೊಣಕಾಲು ಬೇರ್ಪಡಿಸಲಾಗಿದ್ದು ಕೊಳೆತ ಸ್ಥಿತಿಯಲ್ಲಿ ಕಂಡುಬಂದಿದೆ.ಕೊಲೆ ಮಾಡಿ ಶವ ತಂದು ಹಾಕಿರಬಹುದೆಂದು ಶಂಕಿಸಲಾಗಿದೆ.ಮೃತನ ಮಾಹಿತಿ ತಿಳಿದು ಬಂದಿಲ್ಲ.ಸ್ಥಳಕ್ಕೆ ಜಯಪುರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ…
Read More

ಕೊಡೋತ್ಸವ ವೇಳೆ ಬೆಂಕಿಗೆ ಬಿದ್ದು ಗಾಯಗೊಂಡಿದ್ದ ಗುಡ್ಡಪ್ಪ ಸಾವು…

ಮಂಡ್ಯ,ಮೇ25,Tv10 ಕನ್ನಡ ಕೊಂಡಕ್ಕೆ ಬಿದ್ದು ಗಾಯಗೊಂಡು ಆಸ್ಪತ್ರೆ ದಾಖಲಾಗಿದ್ದ ಗುಡ್ಡಪ್ಪ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.ಕಾರಸವಾಡಿ ಗ್ರಾಮದ ಮಹದೇವು ಮೃತ ಗುಡ್ಡಪ್ಪ.ಏಪ್ರಿಲ್ 21ರಂದು ಗ್ರಾಮದಲ್ಲಿ ಬೋರೇದೇವರ ಕೊಂಡೋತ್ಸವ ನಡೆದಿತ್ತು.ಈ ವೇಳೆ ಗುಡ್ಡಪ್ಪ ನಿಯಂತ್ರಣ ತಪ್ಪಿ ಕೆಂಡಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು.ಗಾಯಾಳು ಗುಡ್ಡಪ್ಪಗೆ ಮೈಸೂರು, ಮಂಡ್ಯದ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗಿತ್ತು.ಚಿಕಿತ್ಸೆ ಫಲಿಸದೆ ಗುಡ್ಡಪ್ಪ ಮಹದೇವು ಮೃತಪಟ್ಟಿದ್ದಾರೆ.ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿತ್ತು…
Read More

ಹುಲಿ ಮೃತದೇಹ ಪತ್ತೆ…ಗಾಯವಾಗಿರುವ ಸ್ಥಿತಿಯಲ್ಲಿ ಶವ ಪತ್ತೆ…

ಹುಣಸೂರು,ಮೇ25,Tv10 ಕನ್ನಡ ಮೈಸೂರು ಜಿಲ್ಲೆ ಹುಣಸೂರು ತಾಲೂಕು ನಾಗರಹೊಳೆ ಮುದ್ದನಹಳ್ಳಿ ಅರಣ್ಯಪ್ರದೇಶದ ನಾಲೆ ಬಳಿ ಹುಲಿ ಮೃತದೇಹ ಪತ್ತೆಯಾಗಿದೆ.ವಾರದ ಹಿಂದೆ ಈ ಭಾಗದ ಅರಣ್ಯದಲ್ಲಿ ವೆಂಕಟೇಶರಿಗೆ ಸೇರಿದ ಹಸುವನ್ನು ಹುಲಿ ಕೊಂದು ಹಾಕಿತ್ತು.ಹುಲಿ ಸಾವಿನ ಬಗ್ಗೆ ಹಲವು ಅನುಮಾನ ವ್ಯಕ್ತವಾಗಿದೆ.ಹುಲಿ ಶವದ ಬಳಿ ರಕ್ತ ಮಿಶ್ರಿತ ಹುಲಿ ಮಲ ಪತ್ತೆಯಾಗಿದೆ.ಹಿಂಗಾಲಿಗೆ ಗಾಯವಾಗಿರುವ ಸ್ಥಿತಿಯಲ್ಲಿ ಹುಲಿ ಶವ ಪತ್ತೆಯಾಗಿದೆ.ಸ್ಥಳಕ್ಕೆ ನಾಗರಹೊಳೆ ಹೊಳೆ ಉದ್ಯಾನದ ನಿರ್ದೆಶಕಿ ಪಿ.ಎ.ಸೀಮಾ. ಆರ್.ಎಫ್. ಒ. ಸುಬ್ರಮಣಿ,ಪಶುವೈದ್ಯ ಡಾ.ರಮೇಶ್
Read More

ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿಯಾಗಿ ಯದುವೀರ್…ಅಭಿಯಾನ ಆರಂಭ…

ಮೈಸೂರು,ಮೇ25,Tv10 ಕನ್ನಡ ಮೈಸೂರು ಸ್ಯಾಂಡಲ್ ಸೋಪ್ ರಾಯಭಾರಿ ವಿವಾದ ಇದೀಗ ಮತ್ತೊಂದು ತಿರುವು ಪಡೆಯುತ್ತಿದೆ.ಸಂಸದಯದುವೀರ್ ಕೃಷ್ಣರದತ್ತ ಚಾಮರಾಜ ಒಡೆಯರ್‌ರನ್ನು ರಾಯಭಾರಿ ಮಾಡಲು ಅಭಿಯಾನ ಆರಂಭವಾಗಿದೆ.ಯದುವೀರ್ ಪೋಸ್ಟರ್ ಮಾಡಿ ಅಭಿಮಾನಿಗಳು ಅಭಿಯಾನ ಆರಂಭಿಸಿದ್ದಾರೆ.ತಮನ್ನಾ ಬದಲಾಯಿಸಿ ಯದುವೀರ್ ಘೋಷಿಸಿಸೂಕ್ತ ರಾಯಭಾರಿ ಎಂದರೆ ನಮ್ಮ ಯದುವೀರ್ ಎಂದು ಉಲ್ಲೇಖಿಸಿ ಅಭಿಯಾನ ಶುರುವಾಗಿದೆ.ಬ್ರಾಂಡು ನಮ್ದೆ ಬ್ರಾಂಡ್ ಅಂಬಾಸಿಡರ್ ನಮ್ಮವರೇ ಎಂದು ಪೋಸ್ಟರ್ ನಲ್ಲಿ ಉಲ್ಲೇಖಿಸಲಾಗಿದೆ…
Read More