TV10 Kannada Exclusive

ಚಾಮುಂಡಿಬೆಟ್ಟ ಪಾದದ ಹಿರಿಯ ನಾಗರೀಕರ ಬಳಗದ ವಾರ್ಷಿಕೋತ್ಸವ ಹಾಗೂ ಧನುರ್ಮಾಸ ಪೂಜೆ …ಮೆಟ್ಟಿಲು ಮಾರ್ಗದಲ್ಲಿ ಆಚರಣೆ…ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆ…

ಮೈಸೂರು,ಜ5,Tv10 ಕನ್ನಡ ಚಾಮುಂಡಿಬೆಟ್ಟದ ಪಾದದ ಹಿರಿಯ ನಾಗರೀಕರ ಬಳಗದ 9 ನೇ ವಾರ್ಷಿಕೋತ್ಸವ ಅಂಗವಾಗಿ ಹಾಗೂ ಧನುರ್ಮಾಸ ಹಿನ್ನಲೆ ಮೆಟ್ಟಿಲ ಬಳಿ ನಾಡದೇವಿ ಹಾಗೂ ಗಣಪತಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.ಪ್ರತಿವರ್ಷ ಜನವರಿ ಮೊದಲ ಭಾನುವಾರದಂದು ವಿಶೇಷ ಪೂಜೆ ನೆರವೇರಿಸುವ ಮೂಲಕ ವಾರ್ಷಿಕೋತ್ಸವ ಆಚರಿಸಲಾಗುತ್ತಿದೆ.ಈ ವರ್ಷವೂ ಸಹ ವಿಶೇಷ ಪೂಜೆ ನೆರವೇರಿಸುವ ಮೂಲಕ ಆಚರಿಸಲಾಗಿದೆ.ಮುಂಜಾನೆ ಮೆಟ್ಟಿಲು ಹತ್ತುವ ಸಾವಿರಾರು ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಗಿದೆ…
Read More

ಮಿನಿಬಸ್ ನಲ್ಲಿ ಮಲಗಿದ್ದ ಡ್ರೈವರ್ ಕೊಲೆಗೆ ಯತ್ನ…ಹಣಕ್ಕಾಗಿ ಕೃತ್ಯ…

ನಂಜನಗೂಡು,ಜ4,Tv10 ಕನ್ನಡ ಹಣಕ್ಕಾಗಿ ಮಿನಿಬಸ್ ನಲ್ಲಿ ಮಲಗಿದ್ದ ಡ್ರೈವರ್ ನ ಸಿಮೆಂಟ್ ಇಟ್ಟಿಗೆಯಿಂದ ತಲೆಗೆ ಹೊಡೆದು ಕೊಲೆಗೆ ಯತ್ನಿಸಿದ ಘಟನೆ ನಂಜನಗೂಡು ಟೌನ್ ನಲ್ಲಿ ನಡೆದಿದೆ.ಸುರೇಶ್ (43) ಗಾಯಗೊಂಡಿ ಆಸ್ಪತ್ರೆ ಸೇರಿರುವ ಚಾಲಕ.ಕ್ಲೀನರ್ ಸೂರಿ.ಅ.ಲೂಸ್ ಸೂರಿ ಕೊಲೆಗೆ ಯತ್ನಿಸಿದ್ದಾನೆಂದು ಬಸ್ ಮಾಲೀಕರಾದ ಶಫಿಉಲ್ಲಾ ಖಾನ್ ನಂಜನಗೂಡು ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಶಷಿಉಲ್ಲಾ ಖಾನ್ ರವರಿಗೆ ಸೇರಿದ ಮಿನಿಬಸ್ ಗೆ ಸುರೇಶ್ ಹಲವಾರು ವರ್ಷಗಳಿಂದ ಚಾಲಕರಾಗಿದ್ದಾರೆ.ಜನವರಿ 3 ರಂದು
Read More

ಕೋಟ್ಯಾಂತರ ಬೆಲೆ ಬಾಳುವ ಜಮೀನು ಜಿಲ್ಲಾಡಳಿತ ವಶಕ್ಕೆ…ತಹಸೀಲ್ದಾರ್ KM ಮಹೇಶ್ ಕುಮಾರ್ ನೇತೃತ್ವದಲ್ಲಿ ಕ್ರಮ…

ಮೈಸೂರು,ಜ3,Tv10 ಕನ್ನಡ ಸರ್ಕಾರಿ ಜಮೀನಿನಲ್ಲಿ ಅಕ್ರಮವಾಗಿ ನಿರ್ಮಿಸುತ್ತಿದ್ದ ಕಟ್ಟಡ ಕಾಮಗಾರಿಗೆ ಜಿಲ್ಲಾಡಳಿತ ಬ್ರೇಕ್ ಹಾಕಿದ್ದು ಇಂದು ಫಲಕ ಅಳವಡಿಸುವ ಮೂಲಕ ತನ್ನ ವಶಕ್ಕೆ ಪಡೆದಿದೆ.ಜಿಲ್ಲಾಧಿಕಾರಿ ಲಕ್ಷ್ಮೀಕಾಂತ ರೆಡ್ಡಿ ರವರ ಆದೇಶದಂತೆ ತಹಸೀಲ್ದಾರ್ KM ಮಹೇಶ್ ಕುಮಾರ್ ಕಾರ್ಯಾಚರಣೆ ನಡೆಸಿ ಕೋಟ್ಯಾಂತರ ಬೆಲೆ ಬಾಳುವ ಆಸ್ತಿಯನ್ನ ವಶಕ್ಕೆ ಪಡೆದಿದ್ದಾರೆ ಮೈಸೂರು ತಾಲೂಕು ಕಸಬಾ ಹೋಬಳಿ ಹೆಬ್ಬಾಳು ಗ್ರಾಮದ ಸರ್ವೆ ನಂ.221 ರ 1.25 ಎಕ್ರೆ ಜಮೀನು ಸರ್ಕಾರಕ್ಕೆ ಸೇರಿದ ಆಸ್ತಿ.ಸದರಿ ಆಸ್ತಿಯಲ್ಲಿ
Read More

ನಿಮ್ಮ ಜಾತಿ ಇರೋದು ಒಂದೇ ಕುಟುಂಬ…ಗ್ರಾಮ ಬಿಟ್ಟು ತೊಲಗಿ…ಕುಟುಂಬವೊಂದಕ್ಕೆ ಟಾರ್ಚರ್…ಜಾಗದ ವಿಚಾರದಲ್ಲಿ ಬೆದರಿಕೆ…ಮೂವರ ವಿರುದ್ದ FIR ದಾಖಲು…

ಮೈಸೂರು,ಜ3,Tv10 ಕನ್ನಡ ಜಾಗವೊಂದರ ವಿವಾದ ವಿಚಾರ ನ್ಯಾಯಾಲಯದಲ್ಲಿ ದಾವೆ ಇದ್ದರೂ ಜಾತಿ ಹಸರು ಪ್ರಸ್ತಾಪಿಸಿ ಗ್ರಾಮ ಖಾಲಿ ಮಾಡುವಂತೆ ಕುಟುಂಬವೊಂದಕ್ಕೆ ಬೆದರಿಕೆ ಹಾಕಿರುವ ಘಟನೆ ಸಿಎಂ ತವರು ಜಿಲ್ಲೆ ವರುಣಾ ಹೋಬಳಿಯ ಆಶ್ರಮ ಹಂಚೆ ಗುಡುಮಾದನಹಳ್ಳಿ ಗ್ರಾಮದಲ್ಲಿ ನಡೆದಿದೆ.ಮಂಗಳಗೌರಿ(49) ಎಂಬುವರ ಕುಟುಂಬಕ್ಕೆ ಇಂತಹ ಬೆದರಿಕೆ ಬಂದಿದೆ.ಈ ಸಂಬಂಧ ಮೈಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಗಮ್ಮ,ಕೋಮಲ ಹಾಗೂ ರಾಘವೇಂದ್ರ ಎಂಬುವರ ವಿರುದ್ದ FIR ದಾಖಲಾಗಿದೆ. ಜಾಗದ ವಿಚಾರದಲ್ಲಿ ಇಬ್ಬರ ನಡುವೆ ವ್ಯಾಜ್ಯವಿದ್ದು
Read More

ಕಳ್ಳತನ ಮಾಡಲು ಬಂದು ಮಹಿಳೆಯೊಂದಿಗೆ ಅಸಭ್ಯ ವರ್ತನೆ…ಸಿಕ್ಕಿಬಿದ್ದ ಯುವಕ…ಕಂಬಕ್ಕೆ ಕಟ್ಟಿಹಾಕಿ ಗೂಸಾ…

ನಂಜನಗೂಡು,ಜ3,Tv10 ಕನ್ನಡ ಪತಿಯನ್ನ ಕಳೆದುಕೊಂಡ ವಿಧವೆ ಮನೆಗೆ ಮಧ್ಯ ರಾತ್ರಿಯಲ್ಲಿ ನುಗ್ಗಿದ ಕಳ್ಳನೊಬ್ಬ ಕದಿಯುವ ವಿಫಲ ಯತ್ನ ಮಾಡಿ ನಂತರ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿ ಸಿಕ್ಕಿಬಿದ್ದ ಘಟನೆ ನಂಜನಗೂಡು ತಾಲೂಕು ಬೊಕ್ಕಹಳ್ಳಿ ಗ್ರಾಮದಲ್ಲಿ ನಡೆದಿದೆ.ಗ್ರಾಮದ ಹರ್ಷ ಎಂಬಾತನೇ ಕಳ್ಳತನಕ್ಕೆ ಯತ್ನಿಸಿ ಅಸಭ್ಯವಾಗಿ ವರ್ತಿಸಿದ ಯುವಕ.ಸಿಕ್ಕಿಬಿದ್ದ ಯುವಕನನ್ನ ಗ್ರಾಮಸ್ಥರು ಕಂಬಕ್ಕೆ ಕಟ್ಟಿಹಾಕಿ ಥಳಿಸಿ ನಂತರ ಪೊಲೀಸರ ವಶಕ್ಕೆ ನೀಡಿದ್ದಾರೆ. ಬೊಕ್ಕಹಳ್ಳಿ ಗ್ರಾಮದ ಮಂಜುಳ ನಾಲ್ಕು ತಿಂಗಳ ಹಿಂದೆ ಪತಿ ಶಿವಕುಮಾರ್ ರನ್ನ
Read More

ನ್ಯೂ ಇಯರ್ ಸೆಲೆಬ್ರೇಷನ್ ಎಫೆಕ್ಟ್…ಬಿಯರ್ ಬಾಟೆಲ್ ನಿಂದ ಹಲ್ಲೆ ನಡೆಸಿ ಕೊಲೆ…ಕುಡಿಯಲು ಹಣ ನೀಡದ ಹಿನ್ನಲೆ ಕೃತ್ಯ…

ನಂಜನಗೂಡು,ಜ2,Tv10 ಕನ್ನಡ ಹೊಸವರ್ಷಾಚರಣೆ ಆಚರಿಸುವ ಮತ್ತಿನಲ್ಲಿ ಕುಡಿಯಲು ಹಣ ನೀಡದ ಹಿನ್ನಲೆ ವ್ಯಕ್ತಿಯೊಬ್ಬರನ್ನ ನಡು ರಸ್ತೆಯಲ್ಲಿ ಬಿಯರ್ ಬಾಟೆಲ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ ಘಟನೆ ನಂಜನಗೂಡಿನ ಸರಸ್ವತಿ ಕಾಲೋನಿಯಲ್ಲಿ ನಡೆದಿದೆ.ಮಹದೇವನಗರದ ನಿವಾಸಿ ರಫೀಕ್(40) ಮೃತ ದುರ್ದೈವಿ.ಬಿಯರ್ ಬಾಟೆಲ್ ನಿಂದ ಹಲ್ಲೆ ನಡೆಸಿದ ಸಲೀಂ ಹಾಗೂ ಈತನ ಸ್ನೇಹಿತ ಪರಾರಿಯಾಗಿದ್ದಾರೆ. ಹೊಸವರ್ಷದ ಮೊದಲ ದಿನ ರಫೀಕ್ ರವರು ಸರಸ್ವತಿ ಕಾಲೋನಿಯಲ್ಲಿ ತಮ್ಮ ಮನೆಗೆ ತಡರಾತ್ರಿಯಲ್ಲಿ ನಡೆದು ಹೋಗುತ್ತಿದ್ದಾಗ.ನೀಲಕಂಠನಗರದ ನಿವಾಸಿ
Read More

ಕಟ್ಟಡದಿಂದ ಬಿದ್ದು ವಿಧ್ಯಾರ್ಥಿ ಸಾವು…ಯಡವನಹಳ್ಳಿ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಘಟನೆ…ಆತ್ಮಹತ್ಯೆಯೋ…ಆಕಸ್ಮಿಕವೋ…?

ಚಾಮರಾಜನಗರ,ಜ2,Tv10 ಕನ್ನಡ ಮೊರಾರ್ಜಿ ದೇಸಾಯಿ ಪದವಿಪೂರ್ವ ಕಾಲೇಜು ವಿಧ್ಯಾರ್ಥಿನಿಯರ ವಸತಿ ನಿಲಯದ ಕಟ್ಟಡದಿಂದ ವಿಧ್ಯಾರ್ಥಿಯೋರ್ವ ಬಿದ್ದು ಸಾವನ್ನಪ್ಪಿದ ಘಟನೆ ಚಾಮರಾಜನಗರ ಯಡವನಹಳ್ಳಿ ಗ್ರಾಮದಲ್ಲಿ ನಡೆದಿದೆ.ಮೊರಾರ್ಜಿ ದೇಸಾಯಿ ಪದವಿ ಪೂರ್ವ ವಸತಿ ಶಾಲೆಯಲ್ಲಿ ದ್ವಿತೀಯ ಪಿಯುಸಿ ಓದುತ್ತಿರುವ ಮಣಿತ್(17) ಮೃತ ವಿಧ್ಯಾರ್ಥಿ.ಎರಡನೇ ಮಹಡಿಯ ಕಿಟಕಿ ಬಳಿಯಿಂದ ಮಧ್ಯರಾತ್ರಿ 2 ಗಂಟೆ ವೇಳೆ ಬಿದ್ದು ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆ ದಾಖಲಾಗಿದ್ದ ಮಣಿತ್ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ.ಮಧ್ಯೆ ರಾತ್ರಿ 2
Read More

ಆಕ್ಸಲ್ ಕಟ್ ಆಗಿ ಡಿವೈಡರ್ ಗೆ ಢಿಕ್ಕಿ ಹೊಡದ ಬಸ್…ತಪ್ಪಿದ ಅನಾಹುತ…

ಮೈಸೂರು,ಜ2,Tv10 ಕನ್ನಡ ಆಕ್ಸಲ್ ತುಂಡಾಗಿ ರಸ್ತೆ ವಿಭಜಕಕ್ಕೆ ಬಸ್ ಡಿಕ್ಕಿ ಹೊಡದ ಘಟನೆಮೈಸೂರು ಬೆಂಗಳೂರು ರಸ್ತೆಯಲ್ಲಿ ನಡೆದಿದೆ.ವಿಜಯಪುರದಿಂದ ಪ್ರವಾಸ ಬಂದಿದ್ದ ಶಾಲಾ ಮಕ್ಕಳ ಬಸ್ ಢಿಕ್ಕಿ ಹೊಡೆದಿದೆ.ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.ಮೈಸೂರಿನಿಂದ ಬೆಂಗಳೂರಿಗೆ ತೆರಳುವ ವೇಳೆ ಅಪಘಾತ ನಡೆದಿದೆ.ನರಸಿಂಹರಾಜ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ…
Read More

ಬಿಎಂಡಬ್ಲೂ ಕಂಪನಿ ಉದ್ಯೋಗಿ ಎಂದು ನಂಬಿಸಿ ಮದುವೆಯಾದ ಐನಾತಿ ಚಿನ್ನಾಭರಣ ಕದ್ದು ಸಿಕ್ಕಿಬಿದ್ದ…ವಂಚಕನ ವಿರುದ್ದ FIR ದಾಖಲು…

ಮೈಸೂರು,ಜ1,Tv10 ಕನ್ನಡ ಬಿಎಂಡಬ್ಲೂ ಕಂಪನಿ ಉದ್ಯೋಗಿ ಎಂದು ನಂಬಿಸಿ ಮದುವೆಯಾದ ಭೂಪ ಅತ್ತೆ ಮನೆಯಲ್ಲಿ ಚಿನ್ನಾಭರಣ ಕದ್ದು ಸಿಕ್ಕಿಬಿದ್ದು ವಂಚನೆ ಪ್ರಕರಣ ಮೈಮೇಲೆ ಎಳೆದುಕೊಂಡ ಘಟನೆ ಮೈಸೂರಿನ ವಿಜಯನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ವಂಚಕನ ವಿರುದ್ದ ನ್ಯಾಯಾಲಯ ಆದೇಶದ ಅನ್ವಯದಂತೆ FIR ದಾಖಲಾಗಿದೆ.ಬೆಳಗಾವಿ ಮೂಲದ ವಿಜಯಕುಮಾರ್ ಲಟ್ಟಿ(39) ಎಂಬಾತನ ವಿರುದ್ದ ಪ್ರಕರಣ ದಾಖಲಾಗಿದೆ.ಶ್ರೀನಿವಾಸ್ ಎಂಬುವರು ತಮ್ಮ ಮಗಳನ್ನ ನಂಬಿಸಿ ಮದುವೆ ಆಗಿ ವಂಚಿಸಿದ್ದಾನೆಂದು ಪ್ರಕರಣ ದಾಖಲಿಸಿದ್ದಾರೆ. 2021 ರಲ್ಲಿ ಮೆಟ್ರಿಮೋನಿಯಲ್
Read More

ಯೋಗಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ಹೊಸವರ್ಷದ ಸಂಭ್ರಮ…ವಿಶೇಷ ಪೂಜೆ…2 ಲಕ್ಷ ಲಡ್ಡು ವಿತರಣೆ…

ಮೈಸೂರು,ಜ1,Tv10 ಕನ್ನಡ ನೂತನ ಕ್ರೈಸ್ತ ವರ್ಷಾರಂಭವನ್ನ ಮೈಸೂರಿನ ವಿಜಯನಗರದಲ್ಲಿರುವ ಯೋಗಾ ನರಸಿಂಹಸ್ವಾಮಿ ದೇವಾಲಯದಲ್ಲಿ ಭಕ್ತರಿಗೆ ತಿರುಪತಿ ಮಾದರಿಯ ಲಡ್ಡು ವಿತರಿಸುವ ಮೂಲಕ ಸ್ವಾಗತಿಸಲಾಗಿದೆ.2025 ನೇ ವರ್ಷದ ಮೊದಲ ದಿನವನ್ನ ಯೋಗನರಸಿಂಹ ಸ್ವಾಮಿಗೆ ವಿಶೇಷ ಪೂಜೆ ನೆರವೇರಿಸುವ ಮೂಲಕ ಅದ್ದೂರಿಯಾಗಿ ಸ್ವಾಗತಿಸಲಾಗಿದೆ.ಲೋಕ ಕಲ್ಯಾಣಾರ್ಥವಾಗಿ ಹಮ್ಮಿಕೊಳ್ಳಲಾದ ಪೂಜಾ ಕೈಂಕರ್ಯಗಳು ದೇವಾಲಯದ ಸಂಸ್ಥಾಪಕರಾದ ಶ್ರೀ ಭಾಷ್ಯಂ ಸ್ವಾಮೀಜಿ ರವರ ದಿವ್ಯ ಸಾನಿಧ್ಯದಲ್ಲಿ ನೆರವೇರಿದೆ. ಬೆಳಿಗ್ಗೆ 4 ಗಂಟೆಯಿಂದಲೇ ಭಕ್ತರಿಗೆ ತಿರುಪತಿ ಮಾದರಿಯ ಲಡ್ಡು ವಿತರಿಸಲಾಗುತ್ತಿದೆ.ಭಾಷ್ಯಂ
Read More