ವ್ಯಾಪಾರದಲ್ಲಿ ನಷ್ಟ…ದುಬೈನಿಂದ ಬಂದ ವ್ಯಕ್ತಿ ನೇಣಿಗೆ ಶರಣು…
- CrimeMysore
- January 31, 2023
- No Comment
- 103
ವ್ಯಾಪಾರದಲ್ಲಿ ನಷ್ಟ…ದುಬೈನಿಂದ ಬಂದ ವ್ಯಕ್ತಿ ನೇಣಿಗೆ ಶರಣು…
ಮೈಸೂರು,ಜ31,Tv10 ಕನ್ನಡ
ದುಬೈ ನಿಂದ ಹಿಂದಿರುಗಿ ಬಂದು ವ್ಯಾಪಾರ ಆರಂಭಿಸಿ ನಷ್ಟ ಅನುಭವಿಸಿದ ಹಿನ್ನಲೆ ವ್ಯಕ್ತಿಯೊಬ್ಬರು ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ರಾಜೀವ್ ನಗರದಲ್ಲಿ ನಡೆದಿದೆ.ಮೊಯೀನ್ ಖಾನ್(32) ಮೃತ ದುರ್ದೈವಿ.ಕೆಲಸಕ್ಕಾಗಿ ದುಬೈಗೆ ತೆರಳಿದ್ದ ಮೊಯೀನ್ ಖಾನ್ ಒಂದು ವರ್ಷದ ಹಿಂದೆ ಹಿಂದಿರುಗಿದ್ರು.ಮೈಸೂರಿನ ಸಿ.ವಿ.ರಸ್ತೆಯಲ್ಲಿ ಗುಜರಿ ವ್ಯಾಪಾರ ಆರಂಭಿಸಿದ್ರು.ವ್ಯಾಪಾರದಲ್ಲಿ ನಷ್ಟವಾಗಿತ್ತು.ಎರಡು ದಿನಗಳ ಹಿಂದೆ ಷೆಡ್ಡಕನ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ರು.ಪತ್ನಿ ಮಕ್ಕಳನ್ನ ಷೆಡ್ಡಕನ ಮನೆಯಲ್ಲಿ ಬಿಟ್ಟಿದ್ರು.ಪತ್ನಿ ಮಕ್ಕಳನ್ನ ಕರೆತರುವುದಾಗಿ ತಾಯಿಗೆ ತಿಳಿಸಿದ್ದ ಮೊಯೀನ್ ಖಾನ್ ತಮ್ಮ ಮನೆಯಲ್ಲೇ ನೇಣುಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…