ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿದ ಗ್ರಾಮ ಲೆಕ್ಕಿಗ ಆಂಥೋಣಿ ಸುನಿಲ್ ರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ…Tv10 ವರದಿ ಫಲಶೃತಿ…

ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿದ ಗ್ರಾಮ ಲೆಕ್ಕಿಗ ಆಂಥೋಣಿ ಸುನಿಲ್ ರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ…Tv10 ವರದಿ ಫಲಶೃತಿ…

ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿದ ಗ್ರಾಮ ಲೆಕ್ಕಿಗ ಆಂಥೋಣಿ ಸುನಿಲ್ ರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ಆದೇಶ…Tv10 ವರದಿ ಫಲಶೃತಿ…

ಮೈಸೂರು,ಫೆ8,Tv10 ಕನ್ನಡ
ಸರ್ಕಾರದ ಬೊಕ್ಕಸಕ್ಕೆ ಕನ್ನ ಹಾಕಿದ ಟಿ.ನರಸೀಪುರ ತಾಲೂಕು ಮೂಗೂರು ಹೋಬಳಿ ಗ್ರಾಮಲೆಕ್ಕಿಗ ಆಂಥೋಣಿ ಸುನಿಲ್ ರಾಜ್ ಅಮಾನತ್ತಾಗಿದ್ದಾರೆ.ದಾಖಲೆಗಳನ್ನ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ ರವರು ಆರೋಪ ಸಾಬೀತಾದ ಹಿನ್ನಲೆ ಮಹತ್ವದ ಆದೇಶ ಹೊರಡಿಸಿದ್ದಾರೆ.ಇದು Tv10 ಕನ್ನಡವಾಹಿನಿಯ ವರದಿ ಫಲಶೃತಿಯಾಗಿದೆ.ಈ ಬಗ್ಗೆ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆ ಸಮೇತ ಕ್ರಮ ಕೈಗೊಳ್ಳುವಂತೆ ದೂರು ನೀಡಿದ್ದರು.ಜನವರಿ 31 ರಂದು ಆಂಥೋಣಿ ಸುನಿಲ್ ರಾಜ್ ರ ಗೋಲ್ಮಾಲ್ ಸುದ್ದಿಯನ್ನ Tv10 ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಿತ್ತು.ವರದಿಗೆ ಎಚ್ಚೆತ್ತ ಜಿಲ್ಕಾಧಿಕಾರಿಗಳು ಆಂಥೋಣಿ ಸುನಿಲ್ ರಾಜ್ ವಿರುದ್ದ ಕ್ರಮ ಕೈಗೊಂಡಿದ್ದಾರೆ.

ಮಾಡ್ರಹಳ್ಳಿಯ ಗ್ರಾಮಲೆಕ್ಕಿಗನಾಗಿರುವ ಆಂಥೋಣಿ ಸುನಿಲ್ ರಾಜ್ ಜಮೀನುಗಳಿಗೆ ಕಂದಾಯ ಪಾವತಿಸಿದ ರೈತರಿಗೂ ವಂಚಿಸಿದ್ದರು ಅಲ್ಲದೆ ಸರ್ಕಾರಕ್ಕೆ ಸೇರಬೇಕಾದ ಹಣವನ್ನ ಗುಳುಂ ಮಾಡಿ ಖಜಾನೆಗೂ ಧೋಕಾ ಮಾಡಿದ್ದರು.ಕಂದಾಯ ಪಾವತಿಸಿದ ವೇಳೆ ಸರ್ಕಾರಕ್ಕೆ ಸೇರಬೇಕಾದ ಕಾಪಿಯಲ್ಲಿ ಒಂದು ಮೊತ್ತ ರೈತರಿಗೆ ನೀಡಲಾದ ರಸೀತಿಯಲ್ಲಿ ಒಂದು ಮೊತ್ತ ನಮೂದಿಸಿ ವಂಚಿಸಿದ್ದರು.ಒಂದೇ ದಿನದಲ್ಲಿ 7 ರೈತರಿಗೆ ವಂಚಿಸಿ ಸರ್ಕಾರಕ್ಕೂ ದ್ರೋಹ ಬಗೆದಿದ್ದರು.7 ರೈತರಿಂದ 8162 ರೂಗಳನ್ನ ಪಾವತಿಸಿಕೊಂಡಿದ್ದರು.ಸರ್ಕಾರಕ್ಕೆ ಸೇರಿದ ಕಾಪಿಯಲ್ಲಿ ಕೇವಲ 440 ರೂ ಮಾತ್ರ ನಮೂದಿಸಿದ್ದರು.ಉಳಿದ 7722 ರೂಗಳನ್ನ ಕಬಳಿಸಿದ್ದರು.ಈ ಸಕ್ರಮವನ್ನ ಆರ್.ಟಿ.ಐ.ಕಾರ್ಯಕರ್ತ ಬಿ.ಎನ್.ನಾಗೇಂದ್ರ ದಾಖಲೆ ಸಮೇತ ಬಯಲಿಗೆ ಎಳೆದು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಸಲ್ಲಿಸಿದ್ದರು.ಈ ಅಕ್ರಮವನ್ನ Tv10 ಕನ್ನಡ ವಾಹಿನಿಯಲ್ಲಿ ಪ್ರಸಾರ ಮಾಡಲಾಗಿತ್ತು.ಇದೀಗ ಸರ್ಕಾರಕ್ಕೆ ವಂಚಿಸಿದ ಗ್ರಾಮಲೆಕ್ಕಿಗ ಆಂಥೋಣಿ ಸುನಿಲ್ ರಾಜ್ ರನ್ನ ಸಸ್ಪೆಂಡ್ ಮಾಡಿದ್ದಾರೆ…

Spread the love

Related post

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ…

ಕಾಡುಹಂದಿ ಬೇಟೆ… ಓರ್ವನ ಬಂಧನ… ಮೂವರು ಪರಾರಿ… ಚಾಮರಾಜನಗರ,ಜು28,Tv10 ಕನ್ನಡ ಕಾಡುಹಂದಿ ಬೇಟೆ ಮಾಡಿದ ಆರೋಪದ ಹಿನ್ನಲೆ ಓರ್ವ ಆರೋಪಿಯನ್ನ ಬಂಧಿಸಲಾಗಿದೆ.ಮಹದೇಶ್ವರ ಬೆಟ್ಟ ವನ್ಯಧಾಮದಲ್ಲಿ ಘಟನೆ ನಡೆದಿದೆ.ಕೊಡಗು ಜಿಲ್ಲೆ…
ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ…

ಟಿ.ನರಸೀಪುರ ವಿಧಾನಸಭಾ ಕ್ಷೇತ್ರ ಮತದಾರರ ನೊಂದಣಾಧಿಕಾರಿ ಹುದ್ದೆಗೆ ಕೆ.ಜಾನ್ಸನ್ ನೇಮಕ…ಎಂಡಿಎ ವಿಶೇಷ ಭೂಸ್ವಾಧೀನಾಧಿಕಾರಿಯಾಗಿ ಹೆಚ್ಚಿನ ಜವಾಬ್ದಾರಿ… ಮೈಸೂರು,ಜು13,Tv10 ಕನ್ನಡ ಮೈಸೂರು ಅಭಿವೃದ್ದಿ ಪ್ರಾಧಿಕಾರದಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಕೆ.ಜಾನ್ಸನ್…
ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು…

ಗಾನ ಕೋಗಿಲೆ ಎಸ್. ಜಾನಕಿ ಸ್ಮರಣಾರ್ಥ… KSOUನಲ್ಲಿ ಸಂಗೀತ ಅಧ್ಯಯನ ಮತ್ತು ಡಿಜಿಟಲ್ ಆರ್ಕೈವ್ ಕೇಂದ್ರ ಸ್ಥಾಪನೆಗೆ ಚಿಂತನೆ… ಮೈಸೂರು,ಜುಲೈ11,Tv10 ಕನ್ನಡ ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ…

Leave a Reply

Your email address will not be published. Required fields are marked *