ಮೈಸೂರು:ಮದುವೆ ಆಗದ ಹಿನ್ನಲೆ…ಮನನೊಂದ ಟೆಕ್ಕಿ ನೇಣಿಗೆ ಶರಣು…
- TV10 Kannada Exclusive
- March 2, 2023
- No Comment
- 123
ಮೈಸೂರು:ಮದುವೆ ಆಗದ ಹಿನ್ನಲೆ…ಮನನೊಂದ ಟೆಕ್ಕಿ ನೇಣಿಗೆ ಶರಣು…
ಮೈಸೂರು,ಮಾ2,Tv10 ಕನ್ನಡ
ಮದುವೆ ಆಗದ ಹಿನ್ನಲೆ ಮಾನಸಿಕ ಖಿನ್ನತೆಗೆ ಒಳಗಾದ ಸಾಫ್ಟ್ ವೇರ್ ಇಂಜಿನಿಯರ್ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ಮೈಸೂರಿನ ರೂಪಾನಗರದಲ್ಲಿ ನಡೆದಿದೆ.ಪ್ರತಾಪ್(38) ಮೃತ ದುರ್ದೈವಿ.ಬೆಂಗಳೂರಿನ ಖಾಸಗಿ ಕಂಪನಿಯ ಉದ್ಯೋಗಿಯಾಗಿರುವ ಪ್ರತಾಪ್ ಕೊರೊನಾ ಬಂದಾಗಿನಿಂದ ವರ್ಕ್ ಫ್ರಂ ಹೋಂ ನಲ್ಲಿ ಕೆಲಸ ಮಾಡುತ್ತಿದ್ದರು.38 ವರ್ಷವಾದರೂ ಪ್ರತಾಪ್ ಗೆ ಮದುವೆ ಯೋಗ ಬರಲಿಲ್ಲ.ಒಡಹುಟ್ಟಿದ ಅಕ್ಕ ಅಮೆರಿಕಾದಲ್ಲಿ ನೆಲೆಸಿದ್ದಾರೆ.ತಂದೆ ರಿಟೈರ್ಡ್ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ.ಹೀಗಿದ್ದರೂ ಮದುವೆ ವಿಳಂಬವಾಗಿದೆ.ಇದರಿಂದಾಗಿ ಬೇಸತ್ತು ಜೀವನದಲ್ಲಿ ಜಿಗುಪ್ಸೆಗೊಂಡ ಪ್ರತಾಪ್ ನೇಣಿಗೆ ಶರಣಾಗಿದ್ದಾರೆ.ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…