ಆಯುಷ್ಮಾನ ಕಾರ್ಡ್ ಆಂದೋಲನದ ರೂಪದಲ್ಲಿ 40 ಸಾವಿರ ಜನರ ನೊಂದಣಿ:ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗಾರಾಜು

ಆಯುಷ್ಮಾನ ಕಾರ್ಡ್ ಆಂದೋಲನದ ರೂಪದಲ್ಲಿ 40 ಸಾವಿರ ಜನರ ನೊಂದಣಿ:ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗಾರಾಜು

ಆಯುಷ್ಮಾನ ಕಾರ್ಡ್ ಆಂದೋಲನದ ರೂಪದಲ್ಲಿ 40 ಸಾವಿರ ಜನರ ನೊಂದಣಿ:ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗಾರಾಜು

ಮಂಡ್ಯ,ಮಾ.02:-ಆಯುಷ್ಮಾನ ಭಾರತ್ ಪ್ರಾಧನಮಂತ್ರಿ ಜನಾರೋಗ್ಯ ಹೆಲ್ತ್ ಕಾರ್ಡ್ ಗೆ ಇಂದು ಮತ್ತು ನಾಳೆ 40ಸಾವಿರ ಜನರನ್ನು ನೊಂದಣಿ ಮಾಡಿಸುವ ಗುರಿ ಹೊಂದಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಡಾ.ಹೆಚ್ ಎಲ್ ನಾಗಾರಾಜು ತಿಳಿಸಿದರು.

ಅವರು ಇಂದು ಪಾಂಡವಪುರ ತಾಲ್ಲೂಕಿನ ಹಾರೋಹಳ್ಳಿ ಗ್ರಾಮದಲ್ಲಿ ವಿಶೇಷವಾದ ಆಂದೋಲನ ರೂಪದಲ್ಲಿ ನೊಂದಣಿ ಕಾರ್ಯ ಪ್ರಾರಂಭ ಮಾಡಿ ಮಾತನಾಡಿದರು.

ಮಂಡ್ಯ ಜಿಲ್ಲೆಯ 18 ಲಕ್ಷ ಜನರಿಗೆ ಈ ಒಂದು ಉಚಿತ ಆರೋಗ್ಯ ಕಾರ್ಡ್ ವಿತರಿಸಬೇಕು ಎಂಬ ಉದ್ದೇಶದಿಂದ ಗ್ರಾಮ ಒನ್ ಪ್ರಾಂಚೈಸಿಗಳ ಮೂಲಕ, ಪ್ರತಿ ಗ್ರಾಮದ ನ್ಯಾಯಬೆಲೆ ಅಂಗಡಿ, ವಸತಿನಿಲಯ, ಶಾಲಾ- ಕಾಲೇಜು ಹಾಗೂ ಹೆಚ್ಚು ಜನ ಸೇರುವ ಪ್ರದೇಶಗಳಿಗೆ ಭೇಟಿ ನೀಡಿ ಉಚಿತವಾಗಿ ಆಯುಷ್ಮಾನ ಭಾರತ್ ಪ್ರಾಧನಮಂತ್ರಿ ಜನಾರೋಗ್ಯ ಹೆಲ್ತ್ ‌ಕಾರ್ಡ್ ನೊಂದಣಿಯ ಕಾರ್ಯವನ್ನು ಪ್ರಾರಂಭಿಸಿದ್ದೇವೆ ಎಂದರು.

300ಕ್ಕೂ ಹೆಚ್ಚು ಗ್ರಾಮ ಒನ್ ಪ್ರಾಂಚೈಸಿಗಳ ಮ‌ೂಲಕ ಜನ ಸಾಮಾನ್ಯರ ಮನೆಬಾಗಿಲಿಗೆ ಹೋಗಿ ಕಾರ್ಡ್ ಮಾಡಿಸುತ್ತೇವೆ. ನೊಂದಣಿ ಮಾಡಿಸುವಾಗ ಆಧಾರ್ ಕಾರ್ಡ್ ಮತ್ತು ಮೊಬೈಲ್ ಓಟಿಪಿ ನೀಡಬೇಕಾಗುತ್ತದೆ ಎಂದರು.

ಜನ ಸಾಮಾನ್ಯರು ಇದರ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಪಾಂಡವಪುರ ತಹಶೀಲ್ದಾರ್ ಸೌಮ್ಯ,
ಮಕ್ಕಳ ಸಾಹಿತ್ಯ ಪರಿಷತ್‌ ನ ಅದ್ಯಕ್ಷ ಧನ್ಯಕುಮಾರ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು ಇದ್ದರು.

Spread the love

Related post

ಸರ್ಕಾರಿ ಜಮೀನು ಒತ್ತುವರಿ ತೆರುವು…ತಾಲೂಕು ಆಡಳಿತದಿಂದ ಕಾರ್ಯಾಚರಣೆ…

ಸರ್ಕಾರಿ ಜಮೀನು ಒತ್ತುವರಿ ತೆರುವು…ತಾಲೂಕು ಆಡಳಿತದಿಂದ ಕಾರ್ಯಾಚರಣೆ…

ಮೈಸೂರು,ಜು26,Tv10ಕನ್ನಡ ಸರ್ಕಾರಿ ಜಮೀನು ಒತ್ತುವರಿ ಮಾಡಿಕೊಂಡ ಖಾಸಗಿ ವ್ಯಕ್ತಿಗಳಿಗೆ ತಾಲೂಕು ಆಡಳಿತ ಚಾಟಿ ಬೀಸಿದೆ.ಸರ್ಕಾರಿ ಜಮೀನಿನಲ್ಲಿ ನಿರ್ಮಿಸಲಾದ ರಸ್ತೆ ಹಾಗೂ ಕಟ್ಟಡಗಳನ್ನ ತೆರುವುಗೊಳಿಸಿ ವಶಕ್ಕೆ ಪಡೆದುಕೊಳ್ಳಲಾಗಿದೆ. ಮೈಸೂರು ತಾಲೂಕು…

ದರ್ಶನ್ ಬಿಡುಗಡೆಗೆ ಪ್ರಾರ್ಥನೆ…ಭಾವಚಿತ್ರ ಹಿಡಿದು ಚಾಮುಂಡಿಬೆಟ್ಟ ಮೆಟ್ಟಿಲು ಹತ್ತಿದ ಅಭಿಮಾನಿಗಳು

… ಮೈಸೂರು,ಜು26,Tv10 ಕನ್ನಡp ಕೊಲೆ ಆರೋಪದ ಪ್ರಕರಣದಲ್ಲಿ ಜೈಲು ಹಕ್ಕಿಯಾಗಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುಗಡೆಗಾಗಿ ಅಭಿಮಾನಿಗಳು ಉತ್ಸುಕರಾಗಿ ಕಾಯುತ್ತಿದ್ದಾರೆ.ಆರೋಪದಿಂದ ನಿರ್ದೋಷಿಯಾಗಿ ಬರಲೆಂದು ಹಾರೈಸಿ ಮೂರನೇ ಆಷಾಢ ಶುಕ್ರವಾರವಾದ…
ಬೆಳ್ಳಂಬೆಳಗ್ಗೆ ಭೂಗಳ್ಳರಿಗೆ ಶಾಕ್…ಸರ್ಕಾರಿ ಜಾಗದಲ್ಲಿ ನಿರ್ಮಿಸಿದ ಕಟ್ಟಡ ನೆಲಸಮ…ತಹಸೀಲ್ದಾರ್ ಮಹೇಶ್ ಕುಮಾರ್ ನೇತೃತ್ವದಲ್ಲಿ ಕಾರ್ಯಾಚರಣೆ…

ಬೆಳ್ಳಂಬೆಳಗ್ಗೆ ಭೂಗಳ್ಳರಿಗೆ ಶಾಕ್…ಸರ್ಕಾರಿ ಜಾಗದಲ್ಲಿ ನಿರ್ಮಿಸಿದ ಕಟ್ಟಡ ನೆಲಸಮ…ತಹಸೀಲ್ದಾರ್ ಮಹೇಶ್ ಕುಮಾರ್…

ಮೈಸೂರು,ಜು25,Tv10 ಕನ್ನಡಬೆಳ್ಳಂಬೆಳಗ್ಗೆ ಮೈಸೂರಿನಲ್ಲಿ ಭೂಗಳ್ಳರಿಗೆ ತಹಸೀಲ್ದಾರ್ ಮಹೇಶ್ ಕುಮಾರ್ ಶಾಕ್ ಕೊಟ್ಟಿದ್ದಾರೆ.ಸರ್ಕಾರಿ ಜಾಗವನ್ನ ಕಬಳಿಸಿ ಅಕ್ರಮವಾಗಿ ವಾಣಿಜ್ಯ ಮಳಿಗೆಗಳನ್ನ ನಿರ್ಮಿಸಿದ್ದ ಖದೀಮರಿಗೆ ಚಾಟಿಬೀಸಿದ್ದಾರೆ.ಸುಮಾರು 10 ರಿಂದ 12 ವಾಣಿಜ್ಯ…

Leave a Reply

Your email address will not be published. Required fields are marked *