SDA ಲೋಕಾಯುಕ್ತ ಬಲೆಗೆ…10 ಸಾವಿರ ಲಂಚ ಪಡೆಯುವಾಗ ಲಾಕ್…
- CrimeMysore
- March 2, 2023
- No Comment
- 104
SDA ಲೋಕಾಯುಕ್ತ ಬಲೆಗೆ…10 ಸಾವಿರ ಲಂಚ ಪಡೆಯುವಾಗ ಲಾಕ್…
ಟಿ.ನರಸೀಪುರ,ಮಾ2,Tv10 ಕನ್ನಡ
ಅನ್ಯಕ್ರಾಂತ ಮಾಡಲು 10 ಸಾವಿರ ಲಂಚ ಪಡೆಯುತ್ತಿದ್ದ ಟಿ.ನರಸೀಪುರ ತಹಸೀಲ್ದಾರ್ ಕಚೇರಿಯ SDA ವೇಣುಗೋಪಾಲ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಟಿ.ನರಸೀಪುರದ ನಿವಾಸಿ ಲಿಂಗರಾಜು ಎಂಬುವರು ನೀಡಿದ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಲೋಕಾಯುಕ್ತ ಪೊಲೀಸರು ಲಂಚ ಪಡೆಯವಾಗಲೇ ದಾಳಿ ನಡೆಸಿ ರೆಡ್ ಹ್ಯಾಂಡಾಗಿ ಹಿಡಿದಿದ್ದಾರೆ.ತಮ್ಮ ನಿವೇಶನ ಅನ್ಯಕ್ರಾಂತ ಮಾಡಿಸಲು ಲಿಂಗರಾಜು ಬಳಿ ಲಂಚದ ಬೇಡಿಕೆ ಇಟ್ಟಿದ್ದಾರೆ.ವೇಣುಗೋಪಾಲ್ ರವರ ವರ್ತನೆಗೆ ಬೇಸತ್ತ ಲಿಂಗರಾಜು ಲೋಕಾಯುಕ್ತರಲ್ಲಿ ದೂರು ನೀಡಿದ್ದಾರೆ.ಕೂಡಲೇ ಎಚ್ಚೆತ್ತ ಲೋಕಾಯುಕ್ತ ಅಧಿಕಾರಿಗಳು ತಮ್ಮ ಸಿಬ್ಬಂದಿ ಸಮೇತ ದಾಳಿ ನಡೆಸಿ ಆರೋಪಿಯನ್ನ ರೆಡ್ ಹ್ಯಾಂಡಾಗಿ ಲಾಕ್ ಮಾಡಿದ್ದಾರೆ.
ಇಂದಿನ ಕಾರ್ಯಾಚರಣೆ ಡಿವೈಎಸ್ಪಿ ಕೃಷ್ಣಯ್ಯ ನೇತೃತ್ವದಲ್ಲಿ
ಜಯರತ್ನ PI ಮೈಸೂರು,ಲೋಕೇಶ್ ಪಿ ಐ ಮಡಿಕೇರಿ ಹಾಗೂ ಸಿಬ್ಬಂದಿಗಳಾದ
ಗೋಪಿ,ರಮೇಶ್,
ಲೋಕೇಶ್,ಮಂಜುನಾಥ್,ಪ್ರಕಾಶ್ ,ಸಲಾವುದ್ಧಿನ್ ,ಲೋಹಿತ್,
ಪ್ರವೀಣ್ ಕುಮಾರ್,
ಶಶಿಕುಮಾರ್,
ನಾಗೇಂದ್ರ( ಚಾಲಕ)
ಲೋಕೇಶ್ (ಚಾಲಕ) ಯಶಸ್ವಿಗೊಳಿಸಿದ್ದಾರೆ…