
ಚುನಾವಣೆ ಎದುರಿಸಲು ಸಜ್ಜಾಗುತ್ತಿದೆ ಜಿಲ್ಲಾಡಳಿತ…ಸಾರ್ವಜನಿಕರಿಗೆ ಮತದಾನ ಪ್ರಾತ್ಯಕ್ಷಿಕೆ ಆರಂಭ…ವಿಶೇಷ ಏನು ಗೊತ್ತಾ…?
- MysoreTV10 Kannada Exclusive
- March 7, 2023
- No Comment
- 112

ಮೈಸೂರು,ಮಾ7,Tv10 ಕನ್ನಡ
ಯಾವುದೇ ಸಮಯದಲ್ಲಾದ್ರೂ ಸಾರ್ವತ್ರಿಕ ಚುನಾವಣೆ ಘೋಷಣೆಯಾಗಲಿದೆ.ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಮತದಾನದ ಮೂಲಕ ತಮ್ಮ ಪ್ರಭುಗಳನ್ನ ಆಯ್ಕೆ ಮಾಡುವ ಪ್ರಕ್ರಿಯೆ ಇದೆ.ಮತದಾನಕ್ಕೆ ಭಾರತ ಚುನಾವಣಾ ಆಯೋಗ ಎಲ್ಲಾ ರೀತಿಯಲ್ಲೂ ಸಜ್ಜಾಗುತ್ತಿದೆ.ವಿದ್ಯನ್ಮಾನ ಮತಯಂತ್ರಗಳ ಮೂಲಕ ಮತದಾನ ನಡೆಯುವ ಪದ್ದತಿ ಅನುಸರಿಸಲಾಗುತ್ತಿದೆ.ವಿದ್ಯುನ್ಮಾನ ಯಂತ್ರಗಳ ಮೂಲಕ ಮತದಾನ ಮಾಡುವ ಕುರಿತಂತೆ ಚುನಾವಣಾ ಆಯೋಗದ ವತಿಯಿಂದ ಪ್ರಾತ್ಯಕ್ಷಿಕೆ ಆರಂಭವಾಗಿದೆ.ಮೈಸೂರಿನ ಜಿಲ್ಕಾಧಿಕಾರಿಗಳ ಕಚೇರಿಯಲ್ಲಿ ಪ್ರಾತ್ಯಕ್ಷಿಕೆ ಕೇಂದ್ರ ಸ್ಥಾಪಿಸಲಾಗಿದೆ.ಇಂದಿನಿಂದ ಪ್ರಾತ್ಯಕ್ಷಿಕೆ ಸಹ ಆರಂಭವಾಗಿದೆ.ಈ ಬಾರಿ ವಿದ್ಯನ್ಮಾನ ಮತ ಯಂತ್ರಗಳಲ್ಲಿ ನೂತನ ವ್ಯವಸ್ಥೆ ಅಳವಡಿಸಲಾಗಿದೆ.ಮತಚಲಾಯಿಸಿದಾಗ ಒಂದೇ ಪಕ್ಷಕ್ಕೆ ಮತ ಸೇರುತ್ತಿದೆ ಎಂಬ ಆರೋಪಗಳು ಪ್ರತಿ ಚುನಾವಣೆಯಲ್ಲೂ ಕೇಳಿ ಬರುತ್ತಿತ್ತು.ಇಂತಹ ಆರೋಪಗಳಿಗೆ ಬ್ರೇಕ್ ಹಾಕಲು ಚುನಾವಣಾ ಆಯೋಗ ವಿಶೇಷವಾಗಿ ಮತಯಂತ್ರಗಳನ್ನ ಸಿದ್ದಪಡಿಸಿದೆ.ಮತದಾನ ಮಾಡಿದ ನಂತರ ಯಾವ ಚಿಹ್ನೆಗೆ ಮತ ಚಲಾವಣೆಯಾಗಿದೆ ಎಂದು ಖಚಿತಪಡಿಸಿಕೊಳ್ಳುವ ನೂತನ ವ್ಯವಸ್ಥೆಯನ್ನ ಈ ಬಾರಿಯ ವಿದ್ಯುನ್ಮಾನ ಮತ ಯಂತ್ರಗಳಲ್ಲಿ ಅಳವಡಿಸಲಾಗಿದೆ.ಪ್ರಾತ್ಯಕ್ಷಿಕೆಯಲ್ಲಿ ಸಾರ್ವಜನಿಕರಿಗೆ ಈ ಬಗ್ಗೆ ಅರಿವು ಮೂಡಿಸಲಾಗುತ್ತಿದೆ.ತಮ್ಮ ಮತ ಯಾವ ಅಭ್ಯರ್ಥಿಗೆ ಸೇರಿದೆ ಎಂದು ಖಚಿತಪಡಿಸಿಕೊಳ್ಳಬಹುದಾಗಿದೆ.ಚುನಾವಣೆಯಲ್ಲಿ ಅಕ್ರಮ ನಡೆಯುತ್ತಿರುವ ಆರೋಪಗಳಿಗೆ ಭಾರತ ಚುನಾವಣಾ ಆಯೋಗ ತಕ್ಕ ಉತ್ತರ ನೀಡಲಿದೆ…
