ಧ್ರುವನಾರಾಯಣ್ ಅಗಲಿಕೆ ಹಿನ್ನಲೆ…ಪುತ್ರನ ಪರ ಬೆಂಬಲಿಗರ ಬ್ಯಾಟಿಂಗ್…

ಧ್ರುವನಾರಾಯಣ್ ಅಗಲಿಕೆ ಹಿನ್ನಲೆ…ಪುತ್ರನ ಪರ ಬೆಂಬಲಿಗರ ಬ್ಯಾಟಿಂಗ್…

ಧ್ರುವನಾರಾಯಣ್ ಅಗಲಿಕೆ ಹಿನ್ನಲೆ…ಪುತ್ರನ ಪರ ಬೆಂಬಲಿಗರ ಬ್ಯಾಟಿಂಗ್…

ಚಾಮರಾಜನಗರ,ಮಾ14,Tv10 ಕನ್ನಡ
ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ನಿಧನವಾದ ಬೆನ್ನಹಿಂದೆಯೇ ನಂಜನಗೂಡು ಮೀಸಲು ಕ್ಷೇತ್ರದಲ್ಲಿ ರಾಜಕೀಯ ಚಟುವಟಿಕೆ ಚುರುಕಾಗುತ್ತಿದೆ.ನಂಜನಗೂಡಿನಿಂದ ಆರ್.ಧ್ರುವನಾರಾಯಣ್ ಸ್ಪರ್ಧೆ ಗ್ಯಾರೆಂಟಿ ಎನ್ನಲಾಗಿದ್ದು ಈಗಾಗಲೇ ಸಿದ್ದತೆ ನಡೆಸಿದ್ದರು.ಈ ಮಧ್ಯೆ ಧ್ರುವನಾರಾಯಣ್ ಅಗಲಿದ್ದರು.ನಂಜನಗೂಡಿನ ಕ್ಷೇತ್ರಕ್ಕೆ ಧ್ರುವನಾರಾಯಣ್ ಬದಲು ಉತ್ತರಾಧಿಕಾರಿಯಾಗಿ ಆಕಾಂಕ್ಷಿ ಯಾರು ಎಂಬ ಪ್ರಶ್ನೆ ಉದ್ಭವಿಸುವ ಮುನ್ನವೇ ಪುತ್ರ ದರ್ಶನ್ ಪರ ಬ್ಯಾಟಿಂಗ್ ಆರಂಭವಾಗಿದೆ.
ಧ್ರುವನಾರಾಯಣ್ ಬೆಂಬಲಿಗರು ಮಗ ದರ್ಶನ್ ಗೆ ಟಿಕೆಟ್ ನೀಡುವಂತೆ ಬೇಡಿಕೆ ಇಡುತ್ತಿದ್ದಾರೆ.
ಧ್ರುವನಾರಾಯಣ್ ಅಂತ್ಯ ಸಂಸ್ಕಾರದ ವೇಳೆಯಲ್ಲಿಯೂ ಈ ಕೂಗು ಕೇಳಿಬಂದಿತ್ತು.
ಈ ಬಾರಿ ನಂಜನಗೂಡಿನಿಂದ ದರ್ಶನ್ ಧ್ರುವಗೆ ಟಿಕೆಟ್ ನೀಡಿ ಎನ್ನುವ ಕೂಗು ಹೆಚ್ಚಾಗುತ್ತಿದೆ.
ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ದರ್ಶನ್ ಪರ ಬೆಂಬಲಿಗರು ಭರ್ಜರಿಯಾಗಿ ಬ್ಯಾಟ್ ಬೀಸುತ್ತಿದ್ದಾರೆ. ಪೋಸ್ಟರ್ ಹಾಕುವ ಮೂಲಕ ಬೆಂಬಲ ವ್ಯಕ್ತಪಡಿಸುತ್ತಿದ್ದಾರೆ.
I support darshan dhruva ಎನ್ನುವ ಪೋಸ್ಟರ್ಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ…

Spread the love

Related post

ಕೌಟುಂಬಿಕ ಕಲಹ…ಪತಿಗೆ ಪತ್ನಿಯಿಂದ ಕೊಲೆಬೆದರಿಕೆ…5 ಮಂದಿ ವಿರುದ್ದ FIR ದಾಖಲು…

ಕೌಟುಂಬಿಕ ಕಲಹ…ಪತಿಗೆ ಪತ್ನಿಯಿಂದ ಕೊಲೆಬೆದರಿಕೆ…5 ಮಂದಿ ವಿರುದ್ದ FIR ದಾಖಲು…

ಮೈಸೂರು,ಮೇ12,Tv10 ಕನ್ನಡ ಕೌಟುಂಬಿಕ ಕಲಹ ಹಿನ್ನಲೆ ವಿಚ್ಛೇದನ ಕೋರಿ ನ್ಯಾಯಾಲಯದ ಮೊರೆ ಹೋದ ಪತಿಗೆ ಪತ್ನಿಯೇ ಕೊಲೆ ಬೆದರಿಕೆ ಹಾಕಿದ ಆರೋಪ ಕೇಳಿಬಂದಿದೆ.ಪತ್ನಿ,ಅತ್ತೆ ಸೇರಿದಂತೆ 6 ಮಂದಿ ವಿರುದ್ದ…
ಗಾಂಜಾ ಸಂಗ್ರಹಿಸಿದ್ದ ಮಹಿಳೆ ಸಿಸಿಬಿ ಪೊಲೀಸರ ವಶಕ್ಕೆ…

ಗಾಂಜಾ ಸಂಗ್ರಹಿಸಿದ್ದ ಮಹಿಳೆ ಸಿಸಿಬಿ ಪೊಲೀಸರ ವಶಕ್ಕೆ…

ಮೈಸೂರು,ಮೇ10,Tv10 ಕನ್ನಡ ಗಾಂಜಾ ಸಂಗ್ರಹ ಮಾಡಿದ್ದ ಮಹಿಳೆಯನ್ನ ಮೈಸೂರು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.ಸಲ್ಮಾ (50)ಬಂಧಿತ ಆರೋಪಿ. ಆರೋಪಿಯಿಂದ 26 ಕೆ ಜಿ ಗಾಂಜಾ ವಶಪಡಿಸಿಕೊಂಡಿದ್ದಾರೆ.ನಗರದ ಪೋರೋಂ ಮಾಲ್…
ಭಾರತ ಸೈನಿಕರ ಹೆಸರಿನಲ್ಲಿ ಹನುಮಾನ್ ಚಾಲಿಸ ಪಠಣೆ…ಬಿಜೆಪಿ ಕಾರ್ಯಕರ್ಯರಿಂದ ವಿಶೇಷ ಪೂಜೆ…

ಭಾರತ ಸೈನಿಕರ ಹೆಸರಿನಲ್ಲಿ ಹನುಮಾನ್ ಚಾಲಿಸ ಪಠಣೆ…ಬಿಜೆಪಿ ಕಾರ್ಯಕರ್ಯರಿಂದ ವಿಶೇಷ ಪೂಜೆ…

ಮೈಸೂರು,ಮೇ9,Tv10 ಕನ್ನಡ ಪಾಕ್ ಉಗ್ರರ ಮೇಲೆ ಭಾರತದ ಸೈನಿಕರಿಂದ ಸಿಂಧೂರ್ ಆಪರೇಷನ್ಯೋಧರ ಹೆಸರಿನಲ್ಲಿ ಮೈಸೂರಿನಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ಮೈಸೂರಿನ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರುಕೋಟೆ ಆಂಜನೇಯ ದೇವಸ್ಥಾನದಲ್ಲಿ ಸೈನಿಕರ…

Leave a Reply

Your email address will not be published. Required fields are marked *