ದೈವ ಸೂಚನೆಗೆ ಬದ್ದರಾದರಾ ಸಿದ್ದರಾಮಯ್ಯ…ಹಾಗೇ ಎನಿಸುತ್ತಿದೆ ಇತ್ತೀಚಿನ ಬೆಳವಣಿಗೆ…

ದೈವ ಸೂಚನೆಗೆ ಬದ್ದರಾದರಾ ಸಿದ್ದರಾಮಯ್ಯ…ಹಾಗೇ ಎನಿಸುತ್ತಿದೆ ಇತ್ತೀಚಿನ ಬೆಳವಣಿಗೆ…

  • Politics
  • March 29, 2023
  • No Comment
  • 150

ದೈವ ಸೂಚನೆಗೆ ಬದ್ದರಾದರಾ ಸಿದ್ದರಾಮಯ್ಯ…ಹಾಗೇ ಎನಿಸುತ್ತಿದೆ ಇತ್ತೀಚಿನ ಬೆಳವಣಿಗೆ…

ಮೈಸೂರು,ಮಾ29,Tv10 ಕನ್ನಡ
ದೇವರು ನೀಡಿದ ಸೂಚನೆ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬದ್ದರಾಗುತ್ತಿದ್ದಾರಾ ಎಂಬ ಮಾತು ನಿಜವಾಗುತ್ತಿದೆ.ಬೊಟ್ಟೆನಹಳ್ಳಿ ಗ್ರಾಮದ ಆದಿನಾಡು ಚಿನ್ನಮ್ಮ ದೇವಾಲಯದ ಅರ್ಚಕರ ಮೇಲೆ ದೇವಿ ಬಂದು ಎರಡು ಕಡೆ ಸ್ಪರ್ಧಿಸುವಂತೆ ಸೂಚನೆ ನೀಡಿತ್ತು.ದೇವಿಯ ಮಾತಿಗೆ ಪುಷ್ಟಿ ನೀಡುವಂತೆ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ.ದೇವಿ ನೀಡಿದ ಸಲಹೆ ಸಿದ್ದರಾಮಯ್ಯ ಪಾಲಿಸುತ್ತಿದ್ದಾರೆ ಎ ಎಂಬಂತಿದೆ ಇತ್ತೀಚಿನ ರಾಜಕೀಯ ಬಳವಣಿಗೆ.ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ
ಸಿದ್ದರಾಮಯ್ಯನವರ ಹೆಸರನ್ನು ಈಗಾಗಲೇ ವರುಣದಿಂದ ಸ್ಪರ್ಧಿಸಲು ಸೂಚಿಸಿದೆ. ಆದರೆ ಸಿದ್ದರಾಮಯ್ಯನವರು ನಾನು ಕೋಲಾರದಿಂದಲೂ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಸಿದ್ದರಾಮನವರು 2 ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಯೇ ಎಂಬುದಕ್ಕೆ ಕಾಂಗ್ರಸ್ ಹೈ ಕಮಾಂಡ್ ಇನ್ನೂ ಅಧಿಕೃತವಾಗಿ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.
ಕಾಂಗ್ರೆಸ್ ಪಕ್ಷ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ಸಿದ್ದು ಹೆಸರನ್ನು ಸೂಚಿಸಿದೆ. ಆದರೆ ಕೋಲಾರ ಹಾಗೂ ಬಾದಾಮಿಗೆ ಯಾವುದೆ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿಲ್ಲ.
ಕಾಂಗ್ರೆಸ್ ನ ಈ ನಡೆಯಿಂದ ಸಿದ್ದು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಪಕ್ಕಾ ಎಂಬಂತೆ ಭಾಸವಾಗುತ್ತಿದೆ. ಜನವರಿ ತಿಂಗಳಲ್ಲಿ ಬೊಟ್ಟೆನ ಹಳ್ಳಿ ಗ್ರಾಮದಲ್ಲಿನ ಆದಿನಾಡು ಚಿನ್ನಮ್ಮ ದೇವಸ್ಥಾನಕ್ಕೆ ಸಿದ್ದರಾಮಯ್ಯನವ ಪುತ್ರ ಹಾಗೂ ವರುಣಾ ಶಾಸಕ ಯತೀಂದ್ರ ಅವರು ತೆರಳಿದ್ದಾಗ ದೇವಾಲಯದ ಅರ್ಚಕರ ಮೈಮೇಲೆ ದೇವಿ ಆವಾಹನೆಯಾಗಿ 2 ಕ್ಷೇತ್ರದಲ್ಲಿ ಸಿದ್ದರಾಮಯ್ಯ ನಿಲ್ಲುವಂತೆ ಸೂಚಿಸಿ, ಒಂದೇ ಕ್ಷೇತ್ರದಲ್ಲಿ ನಿಂತರೆ ಸಮಸ್ಯೆ ಎಂದು ಹೇಳಿ ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ಸೂಚಿಸಿತ್ತು.ದೇವಿಯ ಸೂಚನೆಯಂತೆ ಸಿದ್ದರಾಮಯ್ಯ ಇದೀಗ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಅಂದು ಯತೀಂದ್ರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 2 ಕಡೆ ನಿಲ್ಲುವಂತೆ ದೇವಿ ಹೇಳಿರುವುದು ನಿಜ. ಆದರೆ 2 ಕ್ಷೇತ್ರಗಳಲ್ಲಿ ನಮ್ಮ ತಂದೆ ಅವರು ನಿಲ್ಲುವುದಿಲ್ಲ. ಕೋಲಾರದಿಂದಲೇ ಸ್ಪರ್ಧಿಸಲಿದ್ದಾರೆಂದು ಯತಿಂದ್ರ ಹೇಳಿದ್ದರು.ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಎನ್ನುತ್ತಿದ್ದ ಸಿದ್ದರಾಮಯ್ಯ ಎರಡು ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ.ಹೀಗಾಗಿ ದೇವಿಯ ಸೂಚನೆ ಪಾಲಿಸಲು ಖಡಕ್ ಆಗಿ ರೆಡಿಯಾಗುತ್ತಿದ್ದಾರೆ…

Spread the love

Related post

11ಇ ಸ್ಕೆಚ್ ವಿತರಿಸುವಲ್ಲಿ ಗೋಲ್ ಮಾಲ್…ಲೈಸೆನ್ಸ್ ಸರ್ವೆಯರ್ AT ನಾಗರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಮತ್ತು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕಿ ರಮ್ಯಾ ರಿಂದ ಆದೇಶ…

11ಇ ಸ್ಕೆಚ್ ವಿತರಿಸುವಲ್ಲಿ ಗೋಲ್ ಮಾಲ್…ಲೈಸೆನ್ಸ್ ಸರ್ವೆಯರ್ AT ನಾಗರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿಗಳ…

11ಇ ಸ್ಕೆಚ್ ವಿತರಿಸುವಲ್ಲಿ ಗೋಲ್ ಮಾಲ್…ಲೈಸೆನ್ಸ್ ಸರ್ವೆಯರ್ AT ನಾಗರಾಜ್ ಸಸ್ಪೆಂಡ್…ಜಿಲ್ಲಾಧಿಕಾರಿಗಳ ತಾಂತ್ರಿಕ ಸಹಾಯಕ ಮತ್ತು ಪದನಿಮಿತ್ತ ಭೂದಾಖಲೆಗಳ ಉಪನಿರ್ದೇಶಕಿ ರಮ್ಯಾ ರಿಂದ ಆದೇಶ ಮೈಸೂರು,ಜು29,Tv10 ಕನ್ನಡ ರಸ್ತೆ…
ಬೆಳ್ಳಿ ಆಭರಣ ತಯಾರಿಸುವ ಘಟಕದಲ್ಲಿ ದರೋಡೆ…ಭದ್ರತಾ ಸಿಬ್ಬಂದಿಗಳನ್ನ ಕಟ್ಟಿಹಾಕಿ ಕೃತ್ಯ…10 ಕೆಜಿ ಬೆಳ್ಳಿ ಕಳುವು…

ಬೆಳ್ಳಿ ಆಭರಣ ತಯಾರಿಸುವ ಘಟಕದಲ್ಲಿ ದರೋಡೆ…ಭದ್ರತಾ ಸಿಬ್ಬಂದಿಗಳನ್ನ ಕಟ್ಟಿಹಾಕಿ ಕೃತ್ಯ…10 ಕೆಜಿ…

ಮೈಸೂರು,ಜು29,Tv10 ಕನ್ನಡ ಬೆಳ್ಳಿ ಪದಾರ್ಥಗಳನ್ನ ತಯಾರಿಸುವ ಘಟಕಕ್ಕೆ ನುಗ್ಗಿದ ದರೋಡೆಕೋರರು ಭದ್ರತಾ ಸಿಬ್ಬಂದಿಯನ್ನು ಕಟ್ಟಿ ಹಾಕಿ ಸುಮಾರು 10 ಕೆ.ಜಿ. ಬೆಳ್ಳಿ ಆಭರಣ ದೋಚಿ ಪರಾಕಿಯಾಗಿರುವ ಘಟನೆ ಮೈಸೂರಿನ…
ADGP ಬಿ.ದಯಾನಂದ್ ಹಾಗೂ ಎಸ್ಪಿ ಟಿ.ಶೇಖರ್ ಮೇಲಿನ ಅಮಾನತು ಆದೇಶ ಹಿಂಪಡೆದ ಸರ್ಕಾರ…

ADGP ಬಿ.ದಯಾನಂದ್ ಹಾಗೂ ಎಸ್ಪಿ ಟಿ.ಶೇಖರ್ ಮೇಲಿನ ಅಮಾನತು ಆದೇಶ ಹಿಂಪಡೆದ…

ಬೆಂಗಳೂರು,ಜು28,Tv10 ಕನ್ನಡ ಎಡಿಜಿಪಿ ಬಿ.ದಯಾನಂದ್ ಹಾಗೂ ಎಸ್ಪಿ ಟಿ.ಶೇಖರ್ ಮೇಲಿನ ಅಮಾನತು ಆದೇಶವನ್ನ ಸರ್ಕಾರ ಹಿಂಪಡೆದಿದೆ.ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ಪ್ರಕರಣಕ್ಕೆ ಸಂಭಂಧಿಸಿದಂತೆ ಇಬ್ಬರು ಅಧಿಕಾರಿಗಳನ್ನ ಸರ್ಕಾರ…

Leave a Reply

Your email address will not be published. Required fields are marked *