ದೈವ ಸೂಚನೆಗೆ ಬದ್ದರಾದರಾ ಸಿದ್ದರಾಮಯ್ಯ…ಹಾಗೇ ಎನಿಸುತ್ತಿದೆ ಇತ್ತೀಚಿನ ಬೆಳವಣಿಗೆ…

ದೈವ ಸೂಚನೆಗೆ ಬದ್ದರಾದರಾ ಸಿದ್ದರಾಮಯ್ಯ…ಹಾಗೇ ಎನಿಸುತ್ತಿದೆ ಇತ್ತೀಚಿನ ಬೆಳವಣಿಗೆ…

  • Politics
  • March 29, 2023
  • No Comment
  • 197

ದೈವ ಸೂಚನೆಗೆ ಬದ್ದರಾದರಾ ಸಿದ್ದರಾಮಯ್ಯ…ಹಾಗೇ ಎನಿಸುತ್ತಿದೆ ಇತ್ತೀಚಿನ ಬೆಳವಣಿಗೆ…

ಮೈಸೂರು,ಮಾ29,Tv10 ಕನ್ನಡ
ದೇವರು ನೀಡಿದ ಸೂಚನೆ ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಬದ್ದರಾಗುತ್ತಿದ್ದಾರಾ ಎಂಬ ಮಾತು ನಿಜವಾಗುತ್ತಿದೆ.ಬೊಟ್ಟೆನಹಳ್ಳಿ ಗ್ರಾಮದ ಆದಿನಾಡು ಚಿನ್ನಮ್ಮ ದೇವಾಲಯದ ಅರ್ಚಕರ ಮೇಲೆ ದೇವಿ ಬಂದು ಎರಡು ಕಡೆ ಸ್ಪರ್ಧಿಸುವಂತೆ ಸೂಚನೆ ನೀಡಿತ್ತು.ದೇವಿಯ ಮಾತಿಗೆ ಪುಷ್ಟಿ ನೀಡುವಂತೆ ಸಿದ್ದರಾಮಯ್ಯ ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಇಂಗಿತ ವ್ಯಕ್ತಪಡಿಸಿದ್ದಾರೆ.ದೇವಿ ನೀಡಿದ ಸಲಹೆ ಸಿದ್ದರಾಮಯ್ಯ ಪಾಲಿಸುತ್ತಿದ್ದಾರೆ ಎ ಎಂಬಂತಿದೆ ಇತ್ತೀಚಿನ ರಾಜಕೀಯ ಬಳವಣಿಗೆ.ಕಾಂಗ್ರೆಸ್ ಮೊದಲ ಪಟ್ಟಿಯಲ್ಲಿ
ಸಿದ್ದರಾಮಯ್ಯನವರ ಹೆಸರನ್ನು ಈಗಾಗಲೇ ವರುಣದಿಂದ ಸ್ಪರ್ಧಿಸಲು ಸೂಚಿಸಿದೆ. ಆದರೆ ಸಿದ್ದರಾಮಯ್ಯನವರು ನಾನು ಕೋಲಾರದಿಂದಲೂ ಸ್ಪರ್ಧಿಸುವುದಾಗಿ ತಿಳಿಸಿದ್ದಾರೆ.
ಸಿದ್ದರಾಮನವರು 2 ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆಯೇ ಎಂಬುದಕ್ಕೆ ಕಾಂಗ್ರಸ್ ಹೈ ಕಮಾಂಡ್ ಇನ್ನೂ ಅಧಿಕೃತವಾಗಿ ಗ್ರೀನ್ ಸಿಗ್ನಲ್ ಕೊಟ್ಟಿಲ್ಲ.
ಕಾಂಗ್ರೆಸ್ ಪಕ್ಷ ಪ್ರಕಟಿಸಿರುವ ಮೊದಲ ಪಟ್ಟಿಯಲ್ಲಿ ಸಿದ್ದು ಹೆಸರನ್ನು ಸೂಚಿಸಿದೆ. ಆದರೆ ಕೋಲಾರ ಹಾಗೂ ಬಾದಾಮಿಗೆ ಯಾವುದೆ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಿಲ್ಲ.
ಕಾಂಗ್ರೆಸ್ ನ ಈ ನಡೆಯಿಂದ ಸಿದ್ದು ಎರಡು ಕ್ಷೇತ್ರದಲ್ಲಿ ಸ್ಪರ್ಧಿಸುವುದು ಪಕ್ಕಾ ಎಂಬಂತೆ ಭಾಸವಾಗುತ್ತಿದೆ. ಜನವರಿ ತಿಂಗಳಲ್ಲಿ ಬೊಟ್ಟೆನ ಹಳ್ಳಿ ಗ್ರಾಮದಲ್ಲಿನ ಆದಿನಾಡು ಚಿನ್ನಮ್ಮ ದೇವಸ್ಥಾನಕ್ಕೆ ಸಿದ್ದರಾಮಯ್ಯನವ ಪುತ್ರ ಹಾಗೂ ವರುಣಾ ಶಾಸಕ ಯತೀಂದ್ರ ಅವರು ತೆರಳಿದ್ದಾಗ ದೇವಾಲಯದ ಅರ್ಚಕರ ಮೈಮೇಲೆ ದೇವಿ ಆವಾಹನೆಯಾಗಿ 2 ಕ್ಷೇತ್ರದಲ್ಲಿ ಸಿದ್ದರಾಮಯ್ಯ ನಿಲ್ಲುವಂತೆ ಸೂಚಿಸಿ, ಒಂದೇ ಕ್ಷೇತ್ರದಲ್ಲಿ ನಿಂತರೆ ಸಮಸ್ಯೆ ಎಂದು ಹೇಳಿ ಎರಡು ಕ್ಷೇತ್ರದಲ್ಲಿ ನಿಲ್ಲುವಂತೆ ಸೂಚಿಸಿತ್ತು.ದೇವಿಯ ಸೂಚನೆಯಂತೆ ಸಿದ್ದರಾಮಯ್ಯ ಇದೀಗ ಕ್ಷೇತ್ರದಲ್ಲಿ ಸ್ಪರ್ಧಿಸಲು ನಿರ್ಧರಿಸಿದ್ದಾರೆ.
ಅಂದು ಯತೀಂದ್ರ ಅವರು ಸುದ್ದಿಗಾರರೊಂದಿಗೆ ಮಾತನಾಡಿ, 2 ಕಡೆ ನಿಲ್ಲುವಂತೆ ದೇವಿ ಹೇಳಿರುವುದು ನಿಜ. ಆದರೆ 2 ಕ್ಷೇತ್ರಗಳಲ್ಲಿ ನಮ್ಮ ತಂದೆ ಅವರು ನಿಲ್ಲುವುದಿಲ್ಲ. ಕೋಲಾರದಿಂದಲೇ ಸ್ಪರ್ಧಿಸಲಿದ್ದಾರೆಂದು ಯತಿಂದ್ರ ಹೇಳಿದ್ದರು.ಒಂದೇ ಕ್ಷೇತ್ರದಲ್ಲಿ ಸ್ಪರ್ಧೆ ಎನ್ನುತ್ತಿದ್ದ ಸಿದ್ದರಾಮಯ್ಯ ಎರಡು ಕ್ಷೇತ್ರ ಆಯ್ಕೆ ಮಾಡಿಕೊಂಡಿದ್ದಾರೆ.ಹೀಗಾಗಿ ದೇವಿಯ ಸೂಚನೆ ಪಾಲಿಸಲು ಖಡಕ್ ಆಗಿ ರೆಡಿಯಾಗುತ್ತಿದ್ದಾರೆ…

Spread the love

Related post

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ ಬಾಯ್ಸ್…ಅಭಿಮಾನಿಗಳ ಮುಖದ ಮೇಲೆ ರಾರಾಜಿಸಿದ ತ್ರಿವಣ ಧ್ವಜ…ಮೈಸೂರಿನಲ್ಲಿ ಹರಿದುಬಂದ ವಿಶಸ್ ಮಹಾಪೂರ…

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ…

ಗುಡ್ ಲಕ್ ಇಂಡಿಯಾ…ಬ್ಲಾಕ್ ಕ್ಯಾಪ್ಸ್ ಗೆ ಮಣಿಸಿ ಗೆದ್ದು ಬರಲಿ ಬ್ಲೂ ಬಾಯ್ಸ್…ಅಭಿಮಾನಿಗಳ ಮುಖದ ಮೇಲೆ ರಾರಾಜಿಸಿದ ತ್ರಿವಣ ಧ್ವಜ…ಮೈಸೂರಿನಲ್ಲಿ ಹರಿದುಬಂದ ವಿಶಸ್ ಮಹಾಪೂರ… ಮೈಸೂರು,ಮಾ8,Tv10 ಕನ್ನಡ ವಿಶ್ವಕಪ್…
ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ…

ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ…

ನದಿಪಾತ್ರದ ಮರಗಳ ಮಾರಣ ಹೋಮ…ಎಸ್ಕೇಪ್ ಆದ ಖದೀಮರು…ಸಚಿವ ಹೆಚ್.ಸಿ.ಮಹದೇವಪ್ಪ ಸಂಬಂಧಿಕರಿಂದ ಕೃತ್ಯ ಆರೋಪ… ನಂಜನಗೂಡು,ಮಾ8,Tv10 ಕನ್ನಡ ನಂಜನಗೂಡು ಕಪಿಲಾ ನದಿ ಪಾತ್ರದ ಭಾರಿ ಮರಗಳ ಮಾರಣಹೋಮವಾಗಿದೆ.ಶ್ರೀಕಂಠೇಶ್ವರನ ದೇವಾಲಯ ಸಮೀಪ…
ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು ಮೀನಾಮೇಷ…ಸರ್ಕಾರದ ಪತ್ರಕ್ಕೂ ಡೋಂಟ್ ಕೇರ್…ಪ್ರಾಧಿಕಾರದ ಕಾನೂನು ಶಾಖೆ ಬಣ್ಣಬಯಲು…ಶಿಸ್ತುಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಪ್ರಾಧಿಕಾರಕ್ಕೆ ಖಡಕ್ ವಾರ್ನಿಂಗ್…

ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು…

ಅಮಾನತಿನಲ್ಲಿರುವ ಎಂಡಿಎ ವಿಶೇಷ ತಹಸೀಲ್ದಾರ್ ರಾಜಶೇಖರ್ ಪರ ಭರ್ಜರಿ ಬ್ಯಾಂಟಿಂಗ್…ಶಿಸ್ತುಕ್ರಮ ವಹಿಸಲು ಮೀನಾಮೇಷ…ಸರ್ಕಾರದ ಪತ್ರಕ್ಕೂ ಡೋಂಟ್ ಕೇರ್…ಪ್ರಾಧಿಕಾರದ ಕಾನೂನು ಶಾಖೆ ಬಣ್ಣಬಯಲು…ಶಿಸ್ತುಕ್ರಮ ಕೈಗೊಂಡ ವರದಿ ಸಲ್ಲಿಸುವಂತೆ ಪ್ರಾಧಿಕಾರಕ್ಕೆ ಖಡಕ್…

Leave a Reply

Your email address will not be published. Required fields are marked *