![ಟೋಲ್ ಸಿಬ್ಬಂದಿಗಳಿಂದ ಮಾರಣಾಂತಿಕ ಹಲ್ಲೆ ಆರೋಪ…ಕುಂಬಳಗೋಡು ಠಾಣೆಯಲ್ಲಿ FIR ದಾಖಲು…](https://tv10kannada.com/wp-content/uploads/2023/03/IMG-20230331-WA0008.jpg)
ಟೋಲ್ ಸಿಬ್ಬಂದಿಗಳಿಂದ ಮಾರಣಾಂತಿಕ ಹಲ್ಲೆ ಆರೋಪ…ಕುಂಬಳಗೋಡು ಠಾಣೆಯಲ್ಲಿ FIR ದಾಖಲು…
- CrimeTV10 Kannada Exclusive
- March 31, 2023
- No Comment
- 96
![](https://tv10kannada.com/wp-content/uploads/2023/03/InShot_20230331_185220846-1024x1024.jpg)
ಟೋಲ್ ಸಿಬ್ಬಂದಿಗಳಿಂದ ಮಾರಣಾಂತಿಕ ಹಲ್ಲೆ ಆರೋಪ…ಕುಂಬಳಗೋಡು ಠಾಣೆಯಲ್ಲಿ FIR ದಾಖಲು…
ರಾಮನಗರ,ಮಾ31,Tv10 ಕನ್ನಡ
ಕ್ಷುಲ್ಲಕ ಕಾರಣಕ್ಕೆ ಪ್ರಯಾಣಿಕನ ಮೇಲೆ ಹಲ್ಲೆ ನಡೆಸಿದ ಟೋಲ್ ಸಿಬ್ಬಂದಿಗಳ ವಿರುದ್ದ ಕುಂಬಳಗೋಡು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.ರಾಚೇನಹಳ್ಳಿ ನಿವಾಸಿ ಸಾಫ್ಟ್ ವೇರ್ ಇಂಜಿನಿಯರ್ ವಿಶ್ವನಾಥ್ ಎಂಬುವರು ಕಾನೂನು ಕ್ರಮ ಜರುಗಿಸುವಂತೆ ಪ್ರಕರಣ ದಾಖಲಿಸಿದ್ದಾರೆ.ಮಾ29 ರ ರಾತ್ರಿ 12 ಗಂಟೆ ವೇಳೆ ಕನ್ ಮಿನಿಕಿ ಬಳಿ ನಿರ್ಮಿಸಲಾದ ಟೋಲ್ ನಲ್ಲಿದ್ದ ಸಿಬ್ಬಂದಿಗಳ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆಂದು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ.ಫಾಸ್ಟ್ ಟ್ಯಾಗ್ ಸರಿಯಾಗಿ ನಿರ್ವಹಿಸದ ಹಿನ್ನಲೆ ಸಹಕರಿಸದ ಸಿಬ್ಬಂದಿಗಳು ಏಕಾಏಕಿ ಅವ್ಯಾಚ ಶಬ್ದಗಳಿಂದ ನಿಂದಿಸಿ ಹಲ್ಲೆ ನಡೆಸಿರುವುದಾಗಿ ಆರೋಪಿಸಿದ್ದಾರೆ.ಟೋಲ್ ಸಿಬ್ಬಂದಿಗಳಾದ ಮಂಜೇಶ್,ಪವನ್,ಪುರುಶೋತ್ತಮ್ ಹಾಗೂ ವಿನಯ್ ಕುಮಾರ್ ಎಂಬುವರ ಮೇಲೆ ಪ್ರಕರಣ ದಾಖಲಾಗಿದೆ…