ಸಿದ್ದರಾಮಯ್ಯ ಸೋಲಿಗೆ ಪೊಲೀಸರು ಸಂಕಲ್ಪ ತೊಟ್ಟಿದ್ದಾರಂತೆ…ಕರ್ನಾಟಕ ಪೊಲೀಸ್ ಮಹಾಸಂಘ ಹೊರಡಿಸಿದೆ ಅಚ್ಚರಿ ಪ್ರಕಟಣೆ…

ಸಿದ್ದರಾಮಯ್ಯ ಸೋಲಿಗೆ ಪೊಲೀಸರು ಸಂಕಲ್ಪ ತೊಟ್ಟಿದ್ದಾರಂತೆ…ಕರ್ನಾಟಕ ಪೊಲೀಸ್ ಮಹಾಸಂಘ ಹೊರಡಿಸಿದೆ ಅಚ್ಚರಿ ಪ್ರಕಟಣೆ…

ಮೈಸೂರು,ಏ23,Tv10 ಕನ್ನಡ
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಲಿಗಾಗಿ ಕರ್ನಾಟಕ ಪೊಲೀಸ್ ಸಿಬ್ಬಂದಿಗಳು,ಕುಟುಂಬ ವರ್ಗ ಸಂಕಲ್ಪ ತೊಟ್ಟಿದೆಯಂತೆ.ಇಂತಹ ಸಂದೇಶವಿರುವ ಪತ್ರಿಕಾ ಪ್ರಕಟಣೆ ಕರ್ನಾಟಕ ಪೊಲೀಸ್ ಮಹಾಸಂಘ ಅಧಿಕೃತವಾಗಿ ಪತ್ರಿಕಾ ಪ್ರಕಟಣೆ ಹೊರಡಿಸಿದೆ.ಅಧ್ಯಕ್ಷ ಶಶಿಧರ್ ಸಹಿ ಇರುವ ಪ್ರಕಟಣೆ ರವಾನೆಯಾಗಿದೆ.ಪೊಲೀಸರ ವಿರೋಧಿ ನೀತಿಯನ್ನ ಅನುಸರಿಸಿರುವ ಸಿದ್ದರಾಮಯ್ಯ ರನ್ನ ಸೋಲಿಸುವುದಾಗಿ ಪಣತೊಟ್ಟಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

2016 ರಲ್ಲಿ ವಿವಿದ ಬೇಡಿಕೆಗಳ ಈಡೇರಿಕೆಗಾಗಿ ಪೊಲೀಸರು ಹೋರಾಟಕ್ಕೆ ಇಳಿದಿದ್ದರು.ಇದರ ಮುಂಚೂಣಿಯನ್ನ ಶಶಿಧರ್ ವಹಿಸಿದ್ದರು.ಹೋರಾಟ ಹತ್ತಿಕ್ಕಲು ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನನ್ನ ಮೇಲೆ ಇಲ್ಲಸಲ್ಲದ ಆರೋಪ ಹೊರೆಸಿ 84 ದಿನಗಳ ಕಾಲ ಜೈಲಿಗೆ ಕಳಿಸಿದ್ದ ಬಗ್ಗೆ ಉಲ್ಲೇಖಿಸಿರುವ ಶಶಿಧರ್ ಕಳೆದ ಚುನಾವಣೆಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದಿಂದ ಸೋಲನುಭವಿಸಿದಂತೆ ಈ ಬಾರಿಯೂ ವರುಣಾ ಕ್ಷೇತ್ರದಲ್ಲಿ ಸಿದ್ದರಾಮಯ್ಯ ಸೋಲನುಭವಿಸುತ್ತಾರೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋಲಿಗೆ ಪೊಲೀಸರ ಪಾತ್ರ ಮಹತ್ತರವಾಗಿದೆ ಎಂದೂ ಸಹ ಉಲ್ಲೇಖವಾಗಿದೆ.

ಏ 18,2023 ರಂದು ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹಮಂತ್ರಿ ಪರಮೇಶ್ವರ್ ವಿರುದ್ದ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಅಭಿಯೋಜಕ ಅನುಮತಿ ನೀಡುವಂತೆ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಲಾಗಿದ್ದು ಮುಂದಿನ ದಿನಗಳಲ್ಲಿ ರೋಚಕತೆ ಪಡೆಯಲಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ…

Spread the love

Related post

ಎರಡು ಬೈಕ್ ಗಳ ಮುಖಾಮುಖಿ ಢಿಕ್ಕಿ…ಬೈಕ್ ಸವಾರ ಸಾವು…ಮತ್ತಿಬ್ಬರಿಗೆ ಗಂಭೀರ ಗಾಯ…ಟ್ರಿಪ್ಸ್ ತಂದ ಆಪತ್ತು…

ಎರಡು ಬೈಕ್ ಗಳ ಮುಖಾಮುಖಿ ಢಿಕ್ಕಿ…ಬೈಕ್ ಸವಾರ ಸಾವು…ಮತ್ತಿಬ್ಬರಿಗೆ ಗಂಭೀರ ಗಾಯ…ಟ್ರಿಪ್ಸ್…

ಮೈಸೂರು,ಮೇ17,Tv10 ಕನ್ನಡ ಟ್ರಿಪ್ಸ್ ನಲ್ಲಿ ತೆರಳುತ್ತಿದ್ದ ಬೈಕ್ ಗೆ ಮತ್ತೊಂದು ಬೈಕ್ ಢಿಕ್ಕಿ ಹೊಡೆದ ಪರಿಣಾಮ ಓರ್ವ ಸಾವನ್ನಪ್ಪಿದ್ದು ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಮೈಸೂರಿನ ರಿಂಗ್ ರೋಡ್…
ನಿಷೇಧಿತ ಪ್ಲಾಸ್ಟಿಕ್ ವಿರುದ್ದ ಪಾಲಿಕೆ ಸಮರ…1513 ಕೆಜಿ ಪ್ಲಾಸ್ಟಿಕ್ ವಶ…1.61 ಲಕ್ಷ ದಂಡ ವಸೂಲಿ…

ನಿಷೇಧಿತ ಪ್ಲಾಸ್ಟಿಕ್ ವಿರುದ್ದ ಪಾಲಿಕೆ ಸಮರ…1513 ಕೆಜಿ ಪ್ಲಾಸ್ಟಿಕ್ ವಶ…1.61 ಲಕ್ಷ…

ನಿಷೇಧಿತ ಪ್ಲಾಸ್ಟಿಕ್ ಬಳಕೆ ವಿರುದ್ದ ಮೈಸೂರು ಮಹಾನಗರ ಪಾಲಿಕೆ ಸಮರ ಸಾರಿದೆ.ನಿಷೇಧಿತ ಪ್ಲಾಸ್ಟಿಕ್ ಮಾರಾಟ ಮಾಡುವ ಉದ್ಯಮಿಗಳಿಗೆ ಬಿಸಿ ಮುಟ್ಟಿಸಿದೆ.ನಿನ್ನೆ 9 ವಲಯ ಕಚೇರಿ ವ್ಯಾಪ್ತಿಯಲ್ಲಿ ನಡೆದ ಕಾರ್ಯಾಚರಣೆಯಲ್ಲಿ…
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ FDA ಲೋಕಾ ಬಲೆಗೆ…30 ಸಾವಿರ ಲಂಚ ಸ್ವೀಕರಿಸುವ ವೇಳೆ ಲಾಕ್…

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ FDA ಲೋಕಾ ಬಲೆಗೆ…30 ಸಾವಿರ…

ಪಿರಿಯಾಪಟ್ಟಣ,ಮೇ16,Tv10 ಕನ್ನಡ ಆಹಾರ ಸರಬರಾಜು ಮಾಡಿದ ಬಿಲ್ ಪಾವತಿಸಲು 30 ಸಾವಿರ ಲಂಚ ಸ್ವೀಕರಿಸುತ್ತಿದ್ದ ಪಿರಿಯಾಪಟ್ಟಣ ಮಹಿಳಾ ಮಕ್ಕಳ ಕಲ್ಯಾಣ ಇಲಾಖೆ ಪ್ರಥಮ ದರ್ಜೆ ಸಹಾಯಕ ವಿಜಯ್ ಕುಮಾರ್…

Leave a Reply

Your email address will not be published. Required fields are marked *