ಚಲಿಸುತ್ತಿದ್ದ ರೈಲಿನಲ್ಲಿ ನರಳಿ ನರಳಿ ಪ್ರಾಣ ಬಿಟ್ಟ ಮೂರ್ಚೆ ರೋಗಿ…

ಮಂಡ್ಯ,ಮೇ29,Tv10 ಕನ್ನಡ
ಚಲಿಸುತ್ತಿದ್ದ ರೈಲಿನಲ್ಲೆ ಮೂರ್ಛೆ ರೋಗಿಯೊಬ್ಬ ನರಳಿ ನರಳಿ ಪ್ರಾಣ ಬಿಟ್ಟ ಘಟನೆ ಮಂಡ್ಯಾದಲ್ಲಿ ನಡೆದಿದೆ.
ಮೈಸೂರಿನ ರಮಾಬಾಯಿ ನಗರದ ನಿವಾಸಿ ಸ್ವಾಮಿ( 83) ಸಾವನ್ನಪ್ಪಿದ ದುರ್ದೈವಿ.
ನಿನ್ನೆ ಸಂಜೆ ಮೈಸೂರಿನಿಂದ ಬೆಂಗಳೂರಿಗೆ ಪ್ಯಾಸೇಂಜರ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ದುರ್ಘಟನೆ ನಡೆದಿದೆ.
ಮೈಸೂರಿನಲ್ಲಿ ರೈಲು ಹತ್ತುತ್ತಿದ್ದಂತೆ ಮೂರ್ಛೆ ಬಂದು ಕುಸಿದು ಬಿದ್ದಿದ್ದರು.ಸಹ ಪ್ರಯಾಣಿಕರು ಮೈಸೂರಿನಲ್ಲೆ ರೈಲ್ವೆ ಪೊಲೀಸರಿಗೆ, ಸಿಬ್ಬಂದಿಗೆ ಮಾಹಿತಿ ನೀಡಿದ್ದರು.
ಮಾಹಿತಿ ಕೊಟ್ಟರು ಸಿಬ್ಬಂದಿಗಳು ಚಿಕಿತ್ಸೆ ಕೊಡಿಸುವಲ್ಲಿ ವಿಳಂಬ ಮಾಡಿದ್ದಾರೆ.
ಮೈಸೂರಿನಿಂದ ಮಂಡ್ಯ ವರೆಗು ಎಲ್ಲಿಯು ಚಿಕಿತ್ಸೆ ದೊರೆತಿಲ್ಲ.
ರೈಲಿನಲ್ಲಿ ಮಂಡ್ಯ ಸಮೀಪ ಬರುತ್ತಿದ್ದಂತೆಯೇ ಸ್ವಾಮಿ ಸಾವನ್ನಪ್ಪಿದ್ದಾರೆ.
ರೈಲಿನ ಎಲ್ಲ ನಿಲ್ದಾಣದಲ್ಲಿಯು ರೈಲ್ವೆ ಪೊಲೀಸರಿಗು ತಿಳಿಸಿದ್ರು ಚಿಕಿತ್ಸೆ ಕೊಡಿಸಲಿಲ್ಲ ಎಂದು ಪ್ರಯಾಣಿಕರ ಆರೋಪ ಮಾಡಿದ್ದಾರೆ.
ರೈಲ್ವೆ ಅಧಿಕಾರಿಗಳು, ಪೊಲೀಸರ ನಿರ್ಲಕ್ಷಕ್ಕೆ ಸಾವಿಗೆ ಕಾರಣ ಎಂದ ಸಹ ಪ್ರಯಾಣಿಕರು ದೂರಿದ್ದಾರೆ.
ಮಂಡ್ಯದಲ್ಲಿ ಮೃತರ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನ ವಾರಸುದಾರರಿಗೆ ಒಪ್ಪಿಸಲಾಗಿಧ.
ಮಂಡ್ಯ ರೈಲ್ವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಕೊಳ್ಳೇಗಾಲ ತಾಲೂಕಿನ ಮದುವನಹಳ್ಳಿ ಗ್ರಾಮದಲ್ಲಿ ಭಗೀರಥ ಮಹರ್ಷಿ ರವರ ನಾಮಫಲಕ ಅನಾವರಣ.

ಕೊಳ್ಳೇಗಾಲ ತಾಲೂಕಿನ ಮದುವನಹಳ್ಳಿ ಗ್ರಾಮದಲ್ಲಿ ಭಗೀರಥ ಮಹರ್ಷಿ ರವರ ನಾಮಫಲಕ ಅನಾವರಣ.

ಕೊಳ್ಳೇಗಾಲ : ಭಗೀರಥ ಮಹರ್ಷಿ ರವರ ಆದರ್ಶ ಗುಣಗಳನ್ನು ನಾವೆಲ್ಲರೂ ಪಾಲಿಸಿಕೊಳ್ಳುವುದರ ಮೂಲಕ ಅವರ ಮಾರ್ಗದರ್ಶನ ವನ್ನು ದೈನಂದಿನ ಬದುಕಿನಲ್ಲಿ ಕೂಡ ಅಳವಡಿಸಿಕೊಳ್ಳಬೇಕು ಎಂದು ಶಾಸಕ ಎಂ.ಆರ್ ಮಂಜುನಾಥ್…
ಗಿರವಿ ಹೆಸರಲ್ಲಿ 184 ಗ್ರಾಂ ಚಿನ್ನ ಧೋಖಾ…ಸ್ಟಾರ್ ಗೋಲ್ಡ್ ಕಂಪನಿ ಹೆಸರಲ್ಲಿ ವಂಚನೆ…

ಗಿರವಿ ಹೆಸರಲ್ಲಿ 184 ಗ್ರಾಂ ಚಿನ್ನ ಧೋಖಾ…ಸ್ಟಾರ್ ಗೋಲ್ಡ್ ಕಂಪನಿ ಹೆಸರಲ್ಲಿ…

ಗಿರವಿ ಹೆಸರಲ್ಲಿ 184 ಗ್ರಾಂ ಚಿನ್ನ ಧೋಖಾ…ಸ್ಟಾರ್ ಗೋಲ್ಡ್ ಕಂಪನಿ ಹೆಸರಲ್ಲಿ ವಂಚನೆ… ಮೈಸೂರು,ನ23,Tv10 ಕನ್ನಡ ಸ್ಟಾರ್ ಗೋಲ್ಡ್ ಕಂಪನಿಯಲ್ಲಿ ಗಿರವಿ ಇಟ್ಟ ಚಿನ್ನಾಭರಣ ಸಮೇತ ಬ್ರಾಂಚ್ ಸಿಬ್ಬಂದಿ…
ಗಂಡನ ಕೊಂದ‌ ಹೆಂಡತಿಗೆ ಇತ್ತು ಅನೈತಿಕ ಸಂಬಂಧ.ಸತ್ಯ ರಿವೀಲ್ ಮಾಡಿದ ಫೋಟೋಸ್…

ಗಂಡನ ಕೊಂದ‌ ಹೆಂಡತಿಗೆ ಇತ್ತು ಅನೈತಿಕ ಸಂಬಂಧ.ಸತ್ಯ ರಿವೀಲ್ ಮಾಡಿದ ಫೋಟೋಸ್…

ನಂಜನಗೂಡು,ನ22,Tv10 ಕನ್ನಡ ಗಂಡನ ಕೊಂದ ಹೆಂಡತಿಗೆ ಅನೈತಿಕ ಸಂಬಂಧ ಇರುವುದು ಬಹಿರಂಗವಾಗಿದೆ.ಲವರ್ ಜೊತೆ ಇರುವ ಫೋಟೋಗಳು ಸತ್ಯವನ್ನ ರಿವೀಲ್ ಮಾಡಿದೆ.ಅನೈತಿಕ ಸಂಬಂಧಕ್ಕಾಗಿ ಗಂಡನಿಗೆ ಮುಹೂರ್ತ ಇಟ್ಟಿದ್ದ ಹೆಂಡತಿಯ ಗುಟ್ಟುರಟ್ಟಾಗಿದೆ.ಲವರ್…

Leave a Reply

Your email address will not be published. Required fields are marked *