ಮೈಸೂರು:ಹೋಟೆಲ್ ಕ್ಯಾಶಿಯರ್ ನೇಣು ಬಿಗಿದು ಆತ್ಮಹತ್ಯೆ…
- CrimeMysore
- June 11, 2023
- No Comment
- 86
ಮೈಸೂರು,ಜೂ11,Tv10 ಕನ್ನಡ
ಹೋಟೆಲ್ ಒಂದರಲ್ಲಿ ಕ್ಯಾಶಿಯರ್ ಆಗಿದ್ದ ಯುವಕ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.ಗುಲ್ಬರ್ಗಾ ಮೂಲದ ಲಖನ್(24) ಮೃತ ದುರ್ದೈವಿ.ಕಳೆದ ಮೂರು ತಿಂಗಳಿನಿಂದ ಹೋಟೆಲ್ ಕ್ಯಾಶಿಯರ್ ಆಗಿದ್ದ ಲಖನ್ ಬಲಮುರಿ ಗಣಪತಿ ದೇವಸ್ಥಾನದ ಬಳಿ ಇರುವ ಸ್ನೇಹಿತನ ಕೊಠಡಿಯಲ್ಲಿ ತಂಗಿದ್ದ.ಸ್ನೇಹಿತ ತನ್ನ ಸ್ವಗ್ರಾಮಕ್ಕೆ ತಡರಳಿದ ನಂತರ ಕೊಠಡಿಗೆ ಸೇರಿದ ಲಖನ್ ಹೊರಗೆ ಬಂದಿಲ್ಲ.ಕೆಲಸಕ್ಕೆ ಬಾರದ ಹಿನ್ನಲೆ ಹೋಟೆಲ್ ಮಾಲೀಕರು ಕೊಠಡಿ ಬಳಿ ಬಂದಾಗ ಆತ್ಮಹತ್ಯೆಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.ಲಖನ್ ಸಾವಿಗೆ ಕಾರಣ ತಿಳಿದು ಬಂದಿಲ್ಲ.ಉದಯಗಿರಿ ಠಾಣಾ ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ…