ಚಿರತೆ ದಾಳಿ…ಎರಡು ಮೇಕೆ ಬಲಿ…ಗ್ರಾಮಸ್ಥರಲ್ಲಿ ಆತಂಕ…
- CrimeMysore
- June 12, 2023
- No Comment
- 79

ಚಿರತೆ ದಾಳಿ…ಎರಡು ಮೇಕೆ ಬಲಿ…ಗ್ರಾಮಸ್ಥರಲ್ಲಿ ಆತಂಕ…

ಹುಣಸೂರು,ಜೂ12,Tv10 ಕನ್ನಡ
ಗುಡಿಸಿಲಿನಲ್ಲಿ ಕಟ್ಟಿಹಾಕಿದ್ದ ಎರಡು ಮೇಕೆಗಳನ್ನ ಚಿರತೆ ಬಲಿ ಪಡೆದ ಘಟನೆ ಹುಣಸೂರು ತಾಲ್ಲೂಕಿನ ಶ್ರವಣನಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಹದೇವಮ್ಮ ಎಂಬುವರ ಮನೆಯ ಗುಡಿಸಿಲಿನಲ್ಲಿ ಕಟ್ಟುಹಾಕಿದ್ದ ಎರಡು ಮೇಕೆಗಳನ್ನು ಚಿರತೆ ಬಲಿ ಪಡೆದಿದೆ.ಘಟನೆಯಿಂದ ಸುತ್ತಮುತ್ತಲಿನ ಗ್ರಾಮಸ್ಥರು ಆತಂಕಕ್ಕೆ ಸಿಲುಕಿದ್ದಾರೆ. ಕೂಡಲೇ ಚಿರತೆಯನ್ನ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರ ಆಗ್ರಹಿಸಿದ್ದಾರೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ರವಿಕುಮಾರ್ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.ಸುಮಾರು 40000 ಬೆಲೆಬಾಳುವ ಮೇಕೆಗಳಿಗೆ ತಕ್ಷಣ ಪರಿಹಾರ ನೀಡಬೇಕೆಂದು ಮಹದೇವಮ್ಮನವರು ಆಗ್ರಹಿಸಿದ್ದಾರೆ…