ಕೈ ಕೊಟ್ಟ ಚಾಲಕ…ಶವ ಸಾಗಿಸಿದ ಪುರಸಭಾ ಸದಸ್ಯ…ಸಾಮಾಜಿಕ ಕಳಕಳಿಗೆ ಸಾರ್ವಜನಿಕರು ಫಿದಾ…
- MysoreTV10 Kannada ExclusiveUncategorized
- June 19, 2023
- No Comment
- 87
ಮೈಸೂರು,ಜೂ19,Tv10 ಕನ್ನಡ
ಶವ ಸಾಗಿಸುವ ವಾಹನ ಚಾಲಕ ಕೈ ಕೊಟ್ಟ ಹಿನ್ನಲೆ ಪುರಸಭಾ ಸದಸ್ಯರೇ ಡ್ರೈವ್ ಮಾಡಿ ಮೃತ ದೇಹ ಸಾಗಿಸಿದ ಘಟನೆ ಹೆಚ್.ಡಿ.ಕೋಟೆಯಲ್ಲಿ ಬೆಳಕಿಗೆ ಬಂದಿದೆ.
ಪುರಸಭಾ ಸದಸ್ಯರಾದ ವೆಂಕಟೇಶ್ ರವರೇ ಇಂತಹ ಸಾಮಾಜಿಕ ಕಳಕಳಿ ಪ್ರದರ್ಶಿಸಿದ್ದಾರೆ.
ವಿಶ್ವನಾಥ ಕಾಲೋನಿಯ ಸುಜಾತ ಎಂಬುವರು ಸಾವನ್ನಪ್ಪಿದ್ದರು.ರುಧ್ರಭೂಮಿಗೆ ಮೃತದೇಹ ಸಾಗಿಸಬೇಕಿತ್ತು.ಈ ವೇಳೆ ಶವ ಸಾಗಿಸುವ ವಾಹನದ ಚಾಲಕ ಬಂದಿಲ್ಲ.ಪರಿಸ್ಥಿತಿ ಅರಿತ ಪುರಸಭಾ ಸದಸ್ಯ ತಾವೇ ಚಾಲಕರಾಗಿ ಮೃತದೇಹವನ್ನ ಕ್ರೈಸ್ತ ಸಮುದಾಯದ ರುದ್ರಭೂಮಿವರೆಗೂ ಸಾಗಿಸಿದ್ದಾರೆ.
ವೆಂಕಟೇಶ್ ರವರ ಸಾಮಾಜಿಕ ಕಳಕಳಿಗೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ…