ಬಕ್ರೀದ್ ಹಿನ್ನಲೆ…ನಗರ ಪೊಲೀಸ್ ಆಯುಕ್ತರಿಂದ ಶಾಂತಿ ಸಭೆ…
- MysoreTV10 Kannada Exclusive
- June 26, 2023
- No Comment
- 88

ಮೈಸೂರು,ಜೂ26,Tv10 ಕನ್ನಡ
ಜೂನ್ 29 ರಂದು ಬಕ್ರೀದ್ ಹಬ್ಬ ಆಚರಣೆ ಹಿನ್ನಲೆ ನಗರ ಪೊಲೀಸ್ ಆಯುಕ್ತರಾದ ಡಾ.ಬಿ.ರಮೇಶ್ ರವರು ತಮ್ಮ ಕಚೇರಿಯಲ್ಲಿ ಶಾಂತಿ ಸಭೆ ನಡೆಸಿದರು.ಹಿಂದು ಹಾಗೂ ಮುಸ್ಲಿಂ ಜನಾಂಗದ ಮುಖಂಡರೊಂದಿಗೆ ಚರ್ಚಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವಂತಹ ಕೆಲಸಗಳಿಗೆ ಆಸ್ಪದ ನೀಡಬಾರದೆಂದು ಮುಖಂಡರಿಗೆ ತಿಳಿಹೇಳಿದರು.ಪ್ರಾರ್ಥನಾ ಸ್ಥಳಗಳ ಬಳಿ ವಾಹನಗಳ ಸುಗಮ ಸಂಚಾರಕ್ಕೆ ಸಹಕರಿಸಬೇಕೆಂದು ಮನವಿ ಮಾಡಿದರು

ಸಭೆಯಲ್ಲಿ ಡಿಸಿಪಿ ಮುತ್ತುರಾಜ್ ಹಾಗೂ ಜಾಹ್ನವಿ,ನಗರ ಪಾಲಿಕೆ ಸದಸ್ಯರು,ವಿವಿದ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಗಳು ಹಾಜರಿದ್ದರು…