***ಶಾಲೆ ಬೀಗ ಮುರಿದು ಕಳುವು…20 ಸಾವಿರ ನಗದು ಅಡಿಗೆ ಪದಾರ್ಥಗಳನ್ನ ದೋಚಿದ ಖದೀಮರು…***
- CrimeMysore
- June 26, 2023
- No Comment
- 81
ನಂಜನಗೂಡು,ಜೂ26,Tv10 ಕನ್ನಡ
ಶಾಲೆ ಬೀಗ ಮುರಿದು 20 ಸಾವಿರ ನಗದು ಒಂದು ಡಿವಿಆರ್ ಹಾಗೂ ಅಡಿಗೆ ಪದಾರ್ಥಗಳನ್ನ ಕಳುವು ಮಾಡಿರುವ ಘಟನೆ ನಂಜನಗೂಡಿನ ಹಗಿನವಾಳು ಗ್ರಾಮದಲ್ಲಿ ನಡೆದಿದೆ.ಗುರುಮಲ್ಲೇಶ್ವರ ಹೈಸ್ಕೂಲ್ ನಲ್ಲಿ ಘಟನೆ ನಡೆದಿದೆ.ಶನಿವಾರ ಬಾಗಿಲು ಮುಚ್ಚಿ ಸೋಮವಾರ ಬೆಳಿಗ್ಗೆ ತೆರೆದಾಗ ಕಳುವು ಪ್ರಕರಣ ಪತ್ತೆಯಾಗಿದೆ.ಶಾಲೆಯಲ್ಲಿದ್ದ 20 ಸಾವಿರ ನಗದು,ಸಿಸಿ ಟಿವಿ ಯ ಡಿವಿಆರ್ ಹಾಗೂ ಅಡಿಗೆ ಪದಾರ್ಥಗಳನ್ನ ಕಳುವು ಮಾಡಿ ಪರಾರಿಯಾಗಿದ್ದಾರೆ.ಸ್ಥಳಕ್ಕೆ ಬೆರಳಚ್ಚು ತಜ್ಞರು ಹಾಗೂ ಶ್ವಾನದಳ ಭೇಟಿ ನೀಡಿ ಪರಿಶೀಲನೆ ನಡೆಸಿದೆ.ಈ ಸಂಭಂಧ ನಂಜನಗೂಡು ಗ್ರಾಮಾಂತರ ಠಾಣಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…