ಬೆಂಗಳೂರು ಜೈಲಿಗೆ ಶಿಫ್ಟ್ ಮಾಡುವಂತೆ ಸ್ಯಾಂಟ್ರೋ ರವಿ ಮನವಿ…ನ್ಯಾಯಾಲಯಕ್ಕೆ ಅರ್ಜಿ…
- Crime
- August 1, 2023
- No Comment
- 128

ಮೈಸೂರು,ಆ1,Tv10 ಕನ್ನಡ
ಮೈಸೂರು ಕೇಂದ್ರ ಕಾರಾಗೃಹದಿಂದ ಬೆಂಗಳೂರು ಜೈಲಿಗೆ ವರ್ಗಾವಣೆ ಮಾಡುವಂತೆ ಸ್ಯಾಂಟ್ರೋ ರವಿ .ಆ.ಮಂಜುನಾಥ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾನೆ.
ಜೈಲಿನ ಅಧಿಕಾರಿಗಳಿಗೂ ಸ್ಯಾಂಟ್ರೋ ರವಿ ತಲೆ ನೋವಾಗಿದ್ದಾನೆ.
ಮೈಸೂರು ನ್ಯಾಯಾಲಯಕ್ಕೆ ಲಿಖಿತವಾಗಿ ಮನವಿ ಮಾಡಿದ್ದಾನೆ.
ವೇಶ್ಯಾವಾಟಿಕೆ ವರ್ಗಾವಣೆ ದಂಧೆ ಮಹಿಳೆಗೆ ವಂಚನೆ ಪ್ರಕರಣದ ಆರೋಪಿಯಾಗಿರುವ ಸ್ಯಾಂಟ್ರೋ ರವಿ
ಸದ್ಯ ಮೈಸೂರು ಕೇಂದ್ರ ಕಾರಾಗೃಹದಲ್ಲಿ
ವಿಚಾರಣಾಧೀನ ಖೈದಿಯಾಗಿದ್ದಾನೆ.
ಜೈಲಿನ ಅಧಿಕಾರಿಗಳಿಗೆ ಗೌರವ ನೀಡದೆ ಅನುಚಿತ ವರ್ತನೆ,
ಕಾರಾಗೃಹದ ನಿಯಮಗಳನ್ನು ಪಾಲಿಸದಿರುವುದು,
ಅಧಿಕಾರಿಗಳಿಗೆ ಅವಾಚ್ಯ ಶಬ್ದದಿಂದ ನಿಂದನೆ ಮಾಡುವುದು,
ಸಹ ಖೈದಿಗಳ ಜೊತೆಯೂ ಸದಾ ಗಲಾಟೆ ಮಾಡುವ ಸ್ಯಾಂಟ್ರೋ ರವಿ
ವಿಶೇಷ ಸೌಲಭ್ಯ ನೀಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾನೆ…