ಮಾದಕವಸ್ತು ಸೇವನೆ ಮತ್ತು ಮಾನವ ಕಳ್ಳ ಸಾಗಣೆಯ ಜಾಗೃತಿ ಕಾರ್ಯಕ್ರಮಗಳು ಪ್ರಸ್ತುತ ಸನ್ನಿವೇಶಕ್ಕೆ ಅಗತ್ಯ-ಲಯನ್ ಸಿ.ಆರ್ .ದಿನೇಶ್
- TV10 Kannada Exclusive
- August 2, 2023
- No Comment
- 123
ಮಾನವರ ಕಳ್ಳ ಸಾಗಾಣಿಕೆ ದೊಡ್ಡ ಸಾಮಾಜಿಕ ಪಿಡುಗಾಗಿ ಪರಿಣಮಿಸಿದ್ದು ಇದಕ್ಕೆ ಸಣ್ಣ ಮಕ್ಕಳು, ಹೆಣ್ಣು ಮಕ್ಕಳು ಬಲಿಯಾಗುತ್ತಿರುವುದು ಅತ್ಯಂತ ಕಳವಳಕಾರಿಯಾದ ವಿಷಯ ಎಂದು ಪ್ರಾಂಶುಪಾಲರಾದ ಲಯನ್ ಸಿ ಆರ್ ದಿನೇಶ್ ರವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು .ಇವರು ಸರ್ಕಾರಿ ಪದವಿ ಪೂರ್ವ ಕಾಲೇಜು ಬಲ್ಲೇನಹಳ್ಳಿ ಮತ್ತು ತಾಲೂಕು ಆರೋಗ್ಯ ಕೇಂದ್ರ ಸಂಯುಕ್ತ ಆಶ್ರಯದಲ್ಲಿ ಮಾನವ ಕಳ್ಳ ಸಾಗಾಣಿಕೆ ತಡೆ ದಿನಾಚರಣೆ ಹಾಗೂ ಮಹಾಂತೇಶ ಸ್ವಾಮೀಜಿ ರವರ ಜನ್ಮ ದಿನದ ಅಂಗವಾಗಿ ವ್ಯಸನ ಮುಕ್ತ ದಿನಾಚರಣೆಯನ್ನು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದು ಸ್ವಾಮಿಜಿ ಅವರು ಗ್ರಾಮ, ನಗರ ಇಡೀ ರಾಜ್ಯದಾಂತ್ಯ ಸಂಚಾರ ನಡೆಸಿ ಸಾವಿರಾರು ಜನರು ತಮ್ಮ ದುಶ್ಚಟಗಳನ್ನು ಬಿಟ್ಟು ಸರಿ ದಾರಿಗೆ ತಂದ ಕಾರ್ಯ ಶ್ಲಾಘನೀಯವಾದದ್ದು ಇಂದು ಮಾಹಿತಿ ನೀಡಿದರು.
ತಾಲೂಕು ಆರೋಗ್ಯ ಶಿಕ್ಷಣ ಅಧಿಕಾರಿ ಶಿವಮ್ಮ ಮಾದಕ ದ್ರವ್ಯ ಸೇವನೆಯು ಯಾವ ರೀತಿಯಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರು ಬಲಿಪಶು ಆಗುತ್ತಿದ್ದಾರೆ ಅದರಿಂದ ಆಗುವ ದುಷ್ಪರಿಣಾಮಗಳು ಹಾಗೂ ಈ ದುಶ್ಚಟಗಳಿಂದ ಯಾವ ರೀತಿಯಲ್ಲಿ ಹೊರಬರುವ ಮಾರ್ಗಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು
ಆರೋಗ್ಯ ಸಮನ್ವಯ ಅಧಿಕಾರಿ ಜಯಕುಮಾರ್ ಅವರು ಸಮನ್ವಯ ಕೇಂದ್ರದಿಂದ ದೊರಕುವ ಆರೋಗ್ಯ ಇಲಾಖೆಯ ಸವಲತ್ತುಗಳ ಬಗ್ಗೆ ಮಾಹಿತಿ ನೀಡಿದರು ಹಿರಿಯೂ ಉಪನ್ಯಾಸಕರಾದ ಹೆಚ್ ಎನ್ ರಂಗರಾಜುರವರು ಕಳ್ಳ ಸಾಗಾಣಿಕೆ ವಿರೋಧಿ ಪ್ರತಿಜ್ಞಾವಿಧಿಯನ್ನು ಬೋಧಿಸಿದರು. ರಾಜಶಾಸ್ತ್ರ ಉಪನ್ಯಾಸಕ ಜೆ.ಜಿ ರಾಜೇಗೌಡ ರವರು ಉಪನ್ಯಾಸ ನೀಡಿದರು .ಕಾರ್ಯಕ್ರಮದಲ್ಲಿ ಆರೋಗ್ಯ ಸಮಾನವಾಗಿ ಸಮನ್ವಯ ಅಧಿಕಾರಿ ಚೇತನ್ ಉಪನ್ಯಾಸಕರಾದ ಬೃಂದಾ ವೀಣಾ ಆರ್, ಚೈತ್ರ , ಶೃತಿ ಶ್ರೀಕಾಂತ್ ಉಪಸಿತರಿದ್ದರು .
ಸ್ವಾಗತ ಶ್ರೀನಿಧಿ ವಂದನಾರ್ಪಣೆ ಶೋಭಿತ ಕಾರ್ಯಕ್ರಮದ ನಿರೂಪಣೆಯನ್ನು ರಕ್ಷಿತಾ ಮಾಡಿದರು.