ಗೃಹಿಣಿ ಅನುಮಾನಾಸ್ಪದ ಸಾವು…ಪತಿ ಮೇಲೆ ಕೊಲೆ ಆರೋಪ…
- Crime
- August 11, 2023
- No Comment
- 123
ಗೃಹಿಣಿ ಅನುಮಾನಾಸ್ಪದ ಸಾವು…ಪತಿ ಮೇಲೆ ಕೊಲೆ ಆರೋಪ…
ಶ್ರೀರಂಗಪಟ್ಟಣ,ಆ11,Tv10 ಕನ್ನಡ
ಗೃಹಿಣಿ ಅನುಮಾನಸ್ಪದ ಸಾವನ್ನಪ್ಪಿರುವ ಘಟನೆ
ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲ್ಲೂಕಿನ ಬೆಳಗೊಳ ಗ್ರಾಮದಲ್ಲಿ ನಡೆದಿದೆ.
ಮೈಸೂರಿನ ದರ್ಶಿನಿ (21) ಮೃತ ದುರ್ದೈವಿ.
ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪತಿ ಸೂರ್ಯ ಹೇಳಿದ್ದಾನೆ.
ಕೆಆರ್.ಆಸ್ಪತ್ರೆಗೆ ಪತ್ನಿಯನ್ನ ದಾಖಲಿಸಿ ಮನೆಯವರಿಗೆ ತಿಳಿಸಿದ್ದ ಸೂರ್ಯ.
ಅಷ್ಟರಲ್ಲಿ ಸಾವನ್ನಪ್ಪಿರುವ ದರ್ಶಿನಿ. ಸೂರ್ಯನೇ ಕೊಲೆ ಮಾಡಿರುವುದಾಗಿ ದರ್ಶಿನಿ ಕುಟುಂಬಸ್ಥರ ಆರೋಪವಾಗಿದೆ.
ಒಂದುವರೆ ವರ್ಷದ ಹಿಂದೆ ಬೆಳಗೊಳ ಗ್ರಾಮದ ಸೂರ್ಯ ಎಂಬುವರ ಜೊತೆ ವಿವಾಹವಾಗಿತ್ತು.ಪ್ರೀತಿಸಿ ಮದುವೆಯಾಗಿದ್ದ ದರ್ಶಿನಿ ಮತ್ತು ಸೂರ್ಯ.ಮನೆಯವರ ವಿರೋಧದ ನಡುವೆಯೂ ದರ್ಶಿನಿ ಮದುವೆಯಾಗಿದ್ದ ಸೂರ್ಯ.ಮದುವೆಯಾದ 4 ತಿಂಗಳಿಂದ ವರದಕ್ಷಿಣೆ ಕಿರುಕುಳ ನೀಡುತ್ತಿದ್ದ ಎಂದು ಆರೋಪ.
ನನ್ನ ಮಗಳಿಗೆ ನಿತ್ಯ ಕಿರುಕುಳ ಕೊಡುತ್ತಿದ್ದ.
ವರದಕ್ಷಿಣೆ ತರುವಂತೆ ಮಗಳನ್ನ ಹಿಂಸಿಸುತ್ತಿದ್ದ.
ನನ್ನ ಮಗಳನ್ನ ಕೊಲೆ ಮಾಡಿ ನಮ್ಮ ಮೇಲು ಹಲ್ಲೆ ಮಾಡಿದ್ದಾನೆ.
ಬದುಕಿ ಬಾಳಬೇಕಿದ್ದ ನನ್ನ ಮಗಳ ಜೀವನ ಕೊಲೆಯಲ್ಲಿ ಅಂತ್ಯವಾಗಿದೆ.ನನ್ನ ಮಗಳ ಸಾವಿಗೆ ನ್ಯಾಯ ಬೇಕು.ಸೂರ್ಯ ಮತ್ತು ಆತನ
ಕುಟುಂಬಸ್ಥರನ್ನ ಬಂಧಿಸಬೇಕು ಎಂದು
ಮೃತ ಗೃಹಿಣಿ ತಾಯಿ ಪುಷ್ಪ ಆರೋಪ ಮಾಡಿದ್ದಾರೆ.
ಘಟನೆ ಸಂಬಂಧ ಕೆಆರ್ ಎಸ್ ಠಾಣೆಗೆ ಪತಿ ಹಾಗೂ ಮನೆಯವರ ವಿರುದ್ಧ ದೂರು ನೀಡಿರುವ ದರ್ಶಿನಿ ಕುಟುಂಬಸ್ಥರು…