ಶಾಲಾ ಕಾಲೇಜು ವಿಧ್ಯಾರ್ಥಿ ವಿಧ್ಯಾರ್ಥಿನಿಯರ ಅನುಚಿತ ವರ್ತನೆಗೆ ಬ್ರೇಕ್ ಹಾಕಿ…ಶಾಸಕ ಶ್ರೀವತ್ಸ ಗೆ ಜೆ.ಪಿ.ನಗರ ನಿವಾಸಿಗಳ ಮನವಿ…

ಮೈಸೂರು,ಆ11,Tv10 ಕನ್ನಡ

ಶಾಲಾ ಕಾಲೇಜು ವಿಧ್ಯಾರ್ಥಿ ವಿಧ್ಯಾರ್ಥಿನಿಯರ ಅನುಚಿತ ವರ್ತನೆಗೆ ಕಡಿವಾಣ ಹಾಕುವಂತೆ ಶಾಸಕ ಶ್ರೀವತ್ಸ ಗೆ ಜೆಪಿ ನಗರ D ಬ್ಲಾಕ್ ,ರೈಲ್ವೆ ಟ್ರಾಕ್,ನ ಸುತ್ತಮುತ್ತಲಿನ ಜನತೆ ಮನವಿ ಮಾಡಿದ್ದಾರೆ.ಕೆ.ಆರ್.ಕ್ಷೇತ್ರ ವ್ಯಾಪ್ತಿಯ ಜೆಪಿ ನಗರ ಹಾಗೂ ಸುತ್ತಮುತ್ತಲಿನ ಭಾಗದಲ್ಲಿ ಇಂದು ಪಾದಯಾತ್ರೆ ನಡೆಸಿ ಅಹವಾಲು ಸ್ವೀಕಾರಿಸುವ ವೇಳೆ ಶಾಸಕ
ಟಿ.ಎಸ್.ಶ್ರೀ ವತ್ಸಗೆ ದೂರುಗಳ ಸುರಿಮಳೆ ಆಯಿತು.

ಕವಿತಾ ಬೇಕರಿಯ ಪಕ್ಕದಲ್ಲಿ ಇರುವ ಟವರ್ ನಿಂದ ಈ ಸುತ್ತಮುತ್ತಲಾಗದ ಜನರಿಗೆ ಸಮಸ್ಯೆ ಆಗುತ್ತಿದೆ.ಟವರ್ ಇರುವ ಕಾರಣ ಈ ಭಾಗದಲ್ಲಿ ಅತಿ ಹೆಚ್ಚು ಕೋತಿಗಳು ಬರುತ್ತಿದೆ ಹಾಗೂ ಎಲೆಕ್ಟ್ರಿಕ್ ಪೋಲಿನ ಮೇಲೆ ಕರೆಂಟ್ ವೈರ್ ಹಾಗೂ ಕೇಬಲ್ ವೈರ್ ಗಳು ಅತಿ ಹೆಚ್ಚಿದ್ದು ಯಾವತ್ತಾದರೂ ಅನಾಹುತ ಅನುಭವಿಸಬಹುದು ಎಂಬ ಕಾರಣದಿಂದ ದಯಮಾಡಿ ಈ ಟವರ್ ನನ್ನು ಬಿಎಸ್ಎನ್ಎಲ್ ರವರ ಸ್ವಂತ ಜಾಗದಲ್ಲಿ ಅಳವಡಿಸಲು ಆದೇಶ ಮಾಡಬೇಕೆಂದು ಮನವಿ ಮಾಡಿದರು.

ಪಕ್ಕದಲ್ಲಿರುವ ಜೆ ಎಸ್ ಎಸ್ ಶಾಲಾ ವಿದ್ಯಾರ್ಥಿ ವಿದ್ಯಾರ್ಥಿನಿಯರು ಅನುಚಿತವಾಗಿ ಸುತ್ತಮುತ್ತಲು ವರ್ತಿಸುತ್ತಾರೆ ಹಾಗೂ ಈ ಭಾಗದಲ್ಲಿ ಅತಿ ಹೆಚ್ಚು ಟು ವೀಲರ್ ರೈಡಿಂಗ್ ಗಳು ನಡೆಯುತ್ತಿರುತ್ತದೆ ದಯಮಾಡಿ ಬೆಳಿಗ್ಗೆ 9:00 ರಿಂದ 10 ಗಂಟೆಯವರೆಗೂ ಸಂಜೆ 4 ರಿಂದ 5 ಗಂಟೆಯವರೆಗೂ ಪೋಲಿಸ್ ನವರ ಗಸ್ತು ಹಾಕಿಸಿ ಕೊಡಬೇಕಾಗಿ ಮನವಿ ಮಾಡಿದರು.
ಸಂಬಂಧ ಪಟ್ಟ ಪೋಲಿಸ್ ಅಧಿಕಾರಿಗೆ ಶಾಸಕ ಶ್ರೀವತ್ಸ ಆದೇಶಮಾಡಿ ಕಡ್ಡಾಯವಾಗಿ ಗಸ್ತು ನಡೆಸಲು ಸೂಚಿಸಿದರು.

ರಸ್ತೆಯ ಇಕ್ಕೆಲದಲ್ಲಿರುವ ಮರಗಳು ತುಂಬಾ ಹಳೆಯದಾಗಿದ್ದು ರಸ್ತೆಗೆ ಬಾಗಿದೆ. ಅತಿಯಾದ ಮಳೆ ಅಥವಾ ಗಾಳಿ ಬಂದಂತ ಸಂದರ್ಭದಲ್ಲಿ ಮನೆಯ ಗೋಡೆಗಳ ಮೇಲೆ ಬಿಳುವ ಸಂಭವವಿದೆ ಅರಣ್ಯ ಇಲಾಖೆಯವರಿಗೆ ನಿರ್ದೇಶನ ನೀಡಿ ಈ ಮರಗಳನ್ನು ತೆಗೆಸಿಕೊಡಬೇಕಾಗಿ ಮನವಿ ಮಾಡಿದರು.

ಈ ಸಂಧರ್ಭದಲ್ಲಿ ನಗರಪಾಲಿಕೆ ಸದಸ್ಯ ರಾದ ಶಾರದಮ್ಮ ಈಶ್ವರ್, ದೇವರಾಜೇ ಗೌಡ,ನಾಗರಾಜು ಟಿ.ವಿ.ಎಸ್.ಅಕ್ಷಯ್,ದೀಪು, ಶ್ರೀನಿವಾಸ್,ಜೋಗಿ ಮಂಜು, ಪ್ರದೀಪ್, ಕಿಶೋರ್, ಶಿವರಾಜ್ ಸಾಥ್ ನೀಡಿದರು…

Spread the love

Related post

ವಿಜಯನಗರ ಪೊಲೀಸರ ಕಾರ್ಯಾಚರಣೆ…ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ 8 ಮಂದಿ ಬಂಧನ…ಓರ್ವ ರೌಡಿಶೀಟರ್…

ವಿಜಯನಗರ ಪೊಲೀಸರ ಕಾರ್ಯಾಚರಣೆ…ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ 8 ಮಂದಿ…

ಮೈಸೂರು,ಫೆ5,Tv10 ಕನ್ನಡ ಸ್ನೇಹಿತನ ತಂಗಿ ಬಗ್ಗೆ ಅಪಪ್ರಚಾರ ಮಾಡಿದ್ದ ಹಿನ್ನಲೆ ಬುದ್ದಿ ಹೇಳಿದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ 8 ಮಂದಿ ಆರೋಪಿಗಳನ್ನ ಬಂಧಿಸುವಲ್ಲಿ ವಿಜಯನಗರ ಠಾಣೆ…
ಐಸ್ ಕ್ರೀಂ ಮಾರಾಟ ನೆಪದಲ್ಲಿ ಮಹಿಳೆ ಚಿನ್ನದ ಸರ ಕಸಿದು ಸಿಕ್ಕಿಬಿದ್ದ ಕಳ್ಳ…ಆರೋಪಿ ಪೊಲೀಸರ ವಶಕ್ಕೆ…

ಐಸ್ ಕ್ರೀಂ ಮಾರಾಟ ನೆಪದಲ್ಲಿ ಮಹಿಳೆ ಚಿನ್ನದ ಸರ ಕಸಿದು ಸಿಕ್ಕಿಬಿದ್ದ…

ಹುಣಸೂರು,ಫೆ5,Tv10 ಕನ್ನಡ ಜಮೀನು ಕೆಲಸ ಮಾಡಲು ತೆರಳುತ್ತಿದ್ದ ಮಹಿಳೆಯನ್ನ ಐಸ್ ಮಾರಾಟ ಮಾಡುವ ನೆಪದಲ್ಲಿ ಹಿಂಬಾಲಿಸಿ ನಂತರ ಹಲ್ಲೆ ನಡೆಸಿ ಚಿನ್ನದ ಸರ ಕಿತ್ತು ಪರಾರಿಯಾದ ಖದೀಮ ಪೊಲೀಸರ…
ವಿಚಿತ್ರ ರೂಪ ಹೊಂದಿದ ಮಗು ಜನನ…ವೈದ್ಯ ಲೋಕಕ್ಕೆ ಸವಾಲಾದ ಪ್ರಕರಣ…ದಂಪತಿಗೆ ಎರಡನೇ ಬಾರಿಗೂ ಇದೇ ರೀತಿ ಮಗು ಜನನ…

ವಿಚಿತ್ರ ರೂಪ ಹೊಂದಿದ ಮಗು ಜನನ…ವೈದ್ಯ ಲೋಕಕ್ಕೆ ಸವಾಲಾದ ಪ್ರಕರಣ…ದಂಪತಿಗೆ ಎರಡನೇ…

ನಂಜನಗೂಡು,ಫೆ5,Tv10 ಕನ್ನಡ ವೈದ್ಯ ಲೋಕವನ್ನೇ ಬೆರಗಾಗುವಂತಹ ರೂಪ ಹೊಂದಿದ ಮಗುವೊಂದು ನಂಜನಗೂಡಿನ ಹುರಾ ಗ್ರಾಮದ ಸರ್ಕಾರಿ ಆಸ್ಪತ್ರೆಯಲ್ಲಿ ಜನನವಾಗಿದೆ.ಹುಟ್ಟಿದ ಮಗು ಆರೋಗ್ಯ ಇಲಾಖೆಯನ್ನು ಬೆಚ್ಚಿ ಬೀಳಿಸಿದೆ.ವಿಚಿತ್ರವಾದ ಕಣ್ಣು ಮತ್ತು…

Leave a Reply

Your email address will not be published. Required fields are marked *