ಮೈಸೂರು: ರಸ್ತೆ ಅಪಘಾತ…ಮೀಸಲುಪಡೆ ಪೇದಗಳಿಬ್ಬರ ದುರ್ಮರಣ…
- Crime
- August 14, 2023
- No Comment
- 129


ಮೈಸೂರು,ಆ14,Tv10 ಕನ್ನಡ
ಪಲ್ಸರ್, ಮಹೀಂದ್ರಾ ಥಾರ್ ನಡುವೆ ಭೀಕರ ನಡೆದ ಅಪಘಾತದಲ್ಲಿ ಪೊಲೀಸ್ ಪೇದೆಗಳಿಬ್ಬರ ದುರ್ಮರಣ ಹೊಂದಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಕುಂಬಾರಕೊಪ್ಪಲು ಬಡಾವಣೆ ಪಿ.ಮಹೇಶ್(23), ಬಿಜಾಪುರ ಜಿಲ್ಲೆ ಜಮಖಂಡಿ ತಾಲೂಕಿನ ಅಮರನಾಥ ತಾಳಿಕೋಟಿ (24) ಮೃತ ದುರ್ದೈವಿಗಳು.
ರಾಜ್ಯ ಮೀಸಲು ಪಡೆಯ 5 ನೇ ಬಟಾಲಿಯನ್ ಪೇದೆಗಳು.ನಿನ್ನೆ ತಡರಾತ್ರಿ ಲಲಿತಮಹಲ್ ಹೋಟೆಲ್ ಸಮೀಪ ಅಪಘಾತ ನಡೆದಿದೆ.
ಫುಡ್ ಸ್ಟ್ರೀಟ್ ನಲ್ಲಿ ಊಟದ ಬಳಿಕ ತಮ್ಮ ಪಲ್ಸರ್ ಬೈಕ್ ನಲ್ಲಿ ಕೆಎಸ್ಆರ್ ಪಿ ಬಟಾಲಿಯನ್ ಕಡೆ ಹೋಗುವಾಗ ಘಟನೆ ನಡೆದಿದೆ.
ಎದುರಿಗೆ ಬಂದ ಮಹೀಂದ್ರಾ ಥಾರ್ ಕಾರ ಡಿಕ್ಕಿ ಹೊಡೆದಿದೆ.
ಡಿಕ್ಕಿ ರಭಸಕ್ಕೆ ಸ್ಥಳದಲ್ಲಿಯೇ ಪೇದೆಗಳ ಸಾವನ್ನಪ್ಪಿದ್ದಾರೆ.
ಡಿಕ್ಕಿ ಮಾಡಿ ಎಸ್ಕೇಪ್ ಆಗುತ್ತಿದ್ದ ಚಾಲಕನನ್ನ ಸಾರ್ವಜನಿಕರು ಹಿಡಿದಿದ್ದಾರೆ.
ಸಿದ್ಧಾರ್ಥ ನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…