ಮೈಸೂರು:ಭಾರತ ದೇಶದ ಇಬ್ಬಾಗದ ದಿನ…ಪಂಜಿನ ಮೆರವಣಿಗೆ…
- MysoreTV10 Kannada Exclusive
- August 14, 2023
- No Comment
- 103

ಮೈಸೂರು,ಆ14,Tv10 ಕನ್ನಡ
ಇಂದು ಭಾರತ ದೇಶ ಹಿಬ್ಬಾಗವಾದ ದಿನ ಹಿನ್ನಲೆ ಸುಮಾರು 250 ಕ್ಕೂ ಹೆಚ್ಚು ದೇಶಭಕ್ತರು ಪಂಜಿನ ಮೆರವಣಿಗೆಯ ಮೂಲಕ ಮೌನಾಚರಣೆ ಮಾಡಿದರು.ಪಂಜಿನ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದ ಶಾಸಕ ಶ್ರೀವತ್ಸ ಇದೊಂದು ಕರಾಳ ದಿನ ಎಂದರು.1947ರ ಆಗಸ್ಟ್ 14ರ ಮಧ್ಯರಾತ್ರಿ ಈ ದೇಶವನ್ನು ಇಬ್ಬಾಗ ಮಾಡಿ ಅನ್ಯ ಭಾರತಿಯರನ್ನು ಅವರ ತವರು ದೇಶವಾದ ಪಾಕಿಸ್ತಾನಕ್ಕೆ ಕಳಿಹಿಸುವುದರ ಮೂಲಕ ಹಾಗೂ ಪಾಕಿಸ್ತಾನದಲ್ಲಿದ್ದಂತಹ ಹಿಂದು ಭಾಂಧವರನ್ನು ಕಳುಹಿಸುವುದರ ಮೂಲಕ ಈ ದೇಶ ಇಬ್ಬಾಗವಾಯಿತು ಎಂದು ಇತಿಹಾಸದ ದಿನಗಳನ್ನ ಮೆಲುಕು ಹಾಕಿದರು.
ಕೆ.ಜಿ .ಕೊಪ್ಪಲಿನ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದಿಂದ ಹೊರಟು ಜಯನಗರ ಮುಖ್ಯರಸ್ತೆಯ ಮೂಲಕ ನಂತರ ಕೃಷ್ಣಮೂರ್ತಿಪುರಂ ಐದನೇ ಕ್ರಾಸ್ ನಾಲ್ಕನೇ ಕ್ರಾಸ್ ಮೂರನೇ ಕ್ರಾಸ್ ಮೂಲಕ ಮತ್ತೆ ಚಾಮುಂಡೇಶ್ವರಿ ದೇವಸ್ಥಾನದ ವೃತ್ತಕ್ಕೆ ಬಂದು ಶಾಂತಿಯುತವಾಗಿ ಪಂಜಿನ ಮೆರವಣಿಗೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಮಹಾ ಪೌರರಾದ ಶಿವಕುಮಾರ್, ಉಪ ಮಹಾ ಪೌರರಾದ ರೂಪ ಯೋಗೆಶ್,ಮಾಜಿ ಶಾಸಕರರಾದ ನಾಗೇಂದ್ರ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಮುಖ್ಯ ವಕ್ತಾರ ಮಹೇಶ್,ನಗರ ವಕ್ತಾರ ಮೋಹನ,ಆಡಳಿತ ಪಕ್ಷದ ನಾಯಕ ಮಾ.ವಿ.ರಾಮಪ್ರಸಾದ್,ಯಶಸ್ವಿ ಸೋಮಶೇಖರ್, ಪ್ರಧಾನಕಾರ್ಯದರ್ಶಿ ಸೋಮ ಸುಂದರ್, ವಾಣೀಶ್,ಸಂಚಾಲಕ ಜೋಗಿ ಮಂಜು, ಸಹ ಸಂಚಾಲಕ ರಾ.ಪರಮೇಶ್ ಗೌಡ,ದೇವರಾಜೇ ಗೌಡ,ರಾಕೇಶ್ ಗೌಡ,ವಡಿವೇಲು, ಗೆಜ್ಜಗಳ್ಳಿ ಮಹೇಶ್, ನಗರಪಾಲಿಕೆ ಸದಸ್ಯರಾದ ರಮೇಶ್,ಸೌಮ್ಯ ಉಮೇಶ್, ಬಿವಿ.ಮಂಜುನಾಥ, ಸುಬ್ಬಯ್ಯ,ಅಜಯ್ ಶಾಸ್ತೀ,ಶರತ್ ಭಂಡಾರಿ,ಸಂತೋಷ ಪಾಲ್,ರಾಜು,ಇನ್ನೂ ನೂರಾರು ಸಂಖ್ಯೆಯಲ್ಲಿ ಇದ್ದರು…