ಮೈಸೂರು:ಭಾರತ ದೇಶದ ಇಬ್ಬಾಗದ ದಿನ…ಪಂಜಿನ ಮೆರವಣಿಗೆ…

ಮೈಸೂರು,ಆ14,Tv10 ಕನ್ನಡ

ಇಂದು ಭಾರತ ದೇಶ ಹಿಬ್ಬಾಗವಾದ ದಿನ ಹಿನ್ನಲೆ ಸುಮಾರು 250 ಕ್ಕೂ ಹೆಚ್ಚು ದೇಶಭಕ್ತರು ಪಂಜಿನ ಮೆರವಣಿಗೆಯ ಮೂಲಕ ಮೌನಾಚರಣೆ ಮಾಡಿದರು.ಪಂಜಿನ ಮೆರವಣಿಗೆಯ ನೇತೃತ್ವ ವಹಿಸಿ ಮಾತನಾಡಿದ ಶಾಸಕ ಶ್ರೀವತ್ಸ ಇದೊಂದು ಕರಾಳ ದಿನ ಎಂದರು.1947ರ ಆಗಸ್ಟ್ 14ರ ಮಧ್ಯರಾತ್ರಿ ಈ ದೇಶವನ್ನು ಇಬ್ಬಾಗ ಮಾಡಿ ಅನ್ಯ ಭಾರತಿಯರನ್ನು ಅವರ ತವರು ದೇಶವಾದ ಪಾಕಿಸ್ತಾನಕ್ಕೆ ಕಳಿಹಿಸುವುದರ ಮೂಲಕ ಹಾಗೂ ಪಾಕಿಸ್ತಾನದಲ್ಲಿದ್ದಂತಹ ಹಿಂದು ಭಾಂಧವರನ್ನು ಕಳುಹಿಸುವುದರ ಮೂಲಕ ಈ ದೇಶ ಇಬ್ಬಾಗವಾಯಿತು ಎಂದು ಇತಿಹಾಸದ ದಿನಗಳನ್ನ ಮೆಲುಕು ಹಾಕಿದರು.

ಕೆ.ಜಿ .ಕೊಪ್ಪಲಿನ ಚಾಮುಂಡೇಶ್ವರಿ ದೇವಸ್ಥಾನದ ಮುಂಭಾಗದಿಂದ ಹೊರಟು ಜಯನಗರ ಮುಖ್ಯರಸ್ತೆಯ ಮೂಲಕ ನಂತರ ಕೃಷ್ಣಮೂರ್ತಿಪುರಂ ಐದನೇ ಕ್ರಾಸ್ ನಾಲ್ಕನೇ ಕ್ರಾಸ್ ಮೂರನೇ ಕ್ರಾಸ್ ಮೂಲಕ ಮತ್ತೆ ಚಾಮುಂಡೇಶ್ವರಿ ದೇವಸ್ಥಾನದ ವೃತ್ತಕ್ಕೆ ಬಂದು ಶಾಂತಿಯುತವಾಗಿ ಪಂಜಿನ ಮೆರವಣಿಗೆ ಮಾಡಲಾಯಿತು.

ಈ ಸಂಧರ್ಭದಲ್ಲಿ ಮಹಾ ಪೌರರಾದ ಶಿವಕುಮಾರ್, ಉಪ ಮಹಾ ಪೌರರಾದ ರೂಪ ಯೋಗೆಶ್,ಮಾಜಿ ಶಾಸಕರರಾದ ನಾಗೇಂದ್ರ, ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ಮುಖ್ಯ ವಕ್ತಾರ ಮಹೇಶ್,ನಗರ ವಕ್ತಾರ ಮೋಹನ,ಆಡಳಿತ ಪಕ್ಷದ ನಾಯಕ ಮಾ.ವಿ.ರಾಮಪ್ರಸಾದ್,ಯಶಸ್ವಿ ಸೋಮಶೇಖರ್, ಪ್ರಧಾನಕಾರ್ಯದರ್ಶಿ ಸೋಮ ಸುಂದರ್, ವಾಣೀಶ್,ಸಂಚಾಲಕ ಜೋಗಿ ಮಂಜು, ಸಹ ಸಂಚಾಲಕ ರಾ.ಪರಮೇಶ್ ಗೌಡ,ದೇವರಾಜೇ ಗೌಡ,ರಾಕೇಶ್ ಗೌಡ,ವಡಿವೇಲು, ಗೆಜ್ಜಗಳ್ಳಿ ಮಹೇಶ್, ನಗರಪಾಲಿಕೆ ಸದಸ್ಯರಾದ ರಮೇಶ್,ಸೌಮ್ಯ ಉಮೇಶ್, ಬಿ‌ವಿ.ಮಂಜುನಾಥ, ಸುಬ್ಬಯ್ಯ,ಅಜಯ್ ಶಾಸ್ತೀ,ಶರತ್ ಭಂಡಾರಿ,ಸಂತೋಷ ಪಾಲ್,ರಾಜು,ಇನ್ನೂ ನೂರಾರು ಸಂಖ್ಯೆಯಲ್ಲಿ ಇದ್ದರು…

Spread the love

Related post

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…

Leave a Reply

Your email address will not be published. Required fields are marked *