ಬರ ಘೋಷಣೆ ಹಿನ್ನಲೆ…ಸಾಂಪ್ರದಾಯಿಕ ದಸರಾ ಆಚರಣೆಗೆ ತೀರ್ಮಾನ…
- TV10 Kannada Exclusive
- September 23, 2023
- No Comment
- 470


ಮೈಸೂರು,ಸೆ23,Tv10 ಕನ್ನಡ

ವಿಶ್ವವಿಖ್ಯಾತ ಮೈಸೂರು ದಸರಾ 2023 ಮಹೋತ್ಸವವನ್ನ ಸಾಂಪ್ರದಾಯಿಕವಾಗಿ ಆಚರಿಸಲು ತೀರ್ಮಾನಿಸಿರುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ

ಡಾ.ಹೆಚ್.ಸಿ.ಮಹದೇವಪ್ಪ ತಿಳಿಸಿದ್ದಾರೆ.ಅರಮನೆ ಆಡಳಿತ ಮಂಡಳಿ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.ಈಗಾಗಲೇ ಬರ ಘೋಷಣೆಯಾಗಿದೆ.
ಇನ್ನು 20 ರಿಂದ 23 ತಾಲ್ಲೂಕುಗಳು ಬರದ ಅಡಿಯಲ್ಲಿ ಬರಬಹುದು.
ಇಂತಹ ಸಂದರ್ಭದಲ್ಲಿ ಅದ್ದೂರಿ ದಸರಾ ಸೂಕ್ತ ಅಲ್ಲ.
ಅದ್ದೂರಿ ದಸರೆಗೆ ಸಿಎಂ ಸಿದ್ದರಾಮಯ್ಯ ತಾತ್ವಿಕ ಒಪ್ಪಿಗೆ ನೀಡಿದ್ದರು.
ಸರಳವೂ ಅಲ್ಲ ಅದ್ದೂರಿಯೂ ಅಲ್ಲ ಸಾಂಪ್ರದಾಯಿಕವೂ ದಸರಾ ಆಚರಣೆ ಸೂಕ್ತ ಎಂಬ ತೀರ್ಮಾನಕ್ಕೆ ಬಂದಿದ್ದೇವೆ.ಎಲ್ಲಾ ಕಾರ್ಯಕ್ರಮಗಳ ಇರಲಿವೆ ಆದರೆ ದುಂದುವೆಚ್ಚಕ್ಕೆ ಬ್ರೇಕ್ ಹಾಕುವುದಾಗಿ ತಿಳಿಸಿದರು.
ಪ್ರಾಯೋಜಕತ್ವಕ್ಕೆ ಹೆಚ್ಚಿನ ಮಹತ್ವ ನೀಡಲಾಗುವುದು.
ದೀಪಾಲಂಕಾರದಲ್ಲಿ ಯಾವುದೇ ಬದಲಾವಣೆ ಇಲ್ಲ ದು
ಸಚಿವ ಡಾ ಎಚ್ ಸಿ ಮಹದೇವಪ್ಪ ಹೇಳಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ,ನಗರ ಪೊಲೀಸ್ ಆಯುಕ್ತ ಡಾ.ಬಿ ರಮೇಶ್ ಉಪಸ್ಥಿತರಿದ್ದರು…