ಸ್ನೇಹಿತನಿಂದಲೇ ಕೊಲೆಯಾದ ವಿಧ್ಯಾರ್ಥಿ ಪ್ರಕರಣ…ಮೃತನ ಕುಟುಂಬಕ್ಕರ ಒಂದು ಲಕ್ಷ ಅರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಶಾಸಕ ಶ್ರೀವತ್ಸ…

ಸ್ನೇಹಿತನಿಂದಲೇ ಕೊಲೆಯಾದ ವಿಧ್ಯಾರ್ಥಿ ಪ್ರಕರಣ…ಮೃತನ ಕುಟುಂಬಕ್ಕರ ಒಂದು ಲಕ್ಷ ಅರ್ಥಿಕ ನೆರವು ನೀಡಿ ಮಾನವೀಯತೆ ಮೆರೆದ ಶಾಸಕ ಶ್ರೀವತ್ಸ…

ಮೈಸೂರು,ಸೆ23,Tv10 ಕನ್ನಡ

ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನಿಂದಲೇ ಕೊಲೆಯಾದ ವಿಧ್ಯಾರ್ಥಿ ಕೃಷ್ಣ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಆರ್ಥಿಕ ನೆರವು ನೀಡುವ ಮೂಲಕ ಶಾಸಕ ಟಿ.ಎಸ್.ಶ್ರೀವತ್ಸ ರವರು ಮಾನವೀಯತೆ ಮೆರೆದಿದ್ದಾರೆ. ಜೆ.ಪಿ‌.ನಗರದ ಹೆಸರಾಂತ ವಿದ್ಯಾಸಂಸ್ಥೆ ಯಲ್ಲಿ ವಿಧ್ಯಾರ್ಥಿ ಕೃಷ್ಣ ಕಾಲೇಜಿನ ಲ್ಯಾಬ್ ನಲ್ಲಿ ನಡೆದ ಅಚಾತುರ್ಯದಿಂದ ಸ್ನೇಹಿತನಿಂದಲೇ ಹಲ್ಲೆಗೊಳಗಾಗಿ ಸೆ.18 ರಂದು ಆಸ್ಪತ್ರೆಗೆ ದಾಖಲಾಗಿದ್ದ.ಚಿಕಿತ್ಸೆ ಫಲಕಾರಿಯಾಗದೆ ಮರುದಿನ ಕೃಷ್ಣ ಕೊನೆ ಉಸಿರೆಳೆದಿದ್ದ. ಬಡತನದ ನಡುವೆ ಓದಿನ ಮಧ್ಯೆ ಕೆಲಸ ಮಾಡಿ ಕುಟುಂಬಕ್ಕೆ ನೆರವಾಗುತ್ತಿದ್ದ ಕೃಷ್ಣ. ತಂದೆ ಸತೀಶ ಬೀದಿ ಬೀದಿಗಳಲ್ಲಿ ಬಟ್ಟೆ ವ್ಯಾಪಾರಿ.ತಾಯಿ ರೇಖಾ ಮನೆ ಕೆಲಸ,ಅಣ್ಣ ಅಭಿಷೇಕ್ ಸೋಮಾನಿ ಕಾಲೇಜು ಬಿ.ಎ‌.ವಿದ್ಯಾರ್ಥಿ. ಜೆ.ಪಿ.ನಗರ ಬಾಗದ ಮಹದೇವ ಪುರ ಮೊದಲನೇ ಕ್ರಾಸ್, ಸಿ.ಬ್ಲಾಕ್ ನ ಪುಟ್ಟ ಬಾಡಿಗೆ ಮನೆಯ ಜೀವನ.ಇಂತಹ ಕುಟುಂಬಕ್ಕೆ ಬಂದು ತಟ್ಟಿದ ಸಾವು,ವಿಧಿಯ ಅಟಕ್ಕೆ ಕುಟುಂಬ ತತ್ತರವಾಯಿತು.ಆದಿನ ಶವವನ್ನು ಶಾಲೆಯ ಬಳಿ ತಂದು ಸಂಸ್ಥೆಯ ವಿರುದ್ದ ಪ್ರತಿಭಟನೆ ಮಾಡುವ ಸಂಧರ್ಭದಲ್ಲಿ ಆ ಭಾಗದ ,24 ಮನೆ ತೆಲಗು ಶೆಟ್ಟಿಯವರ ಕಾರ್ಯಕರ್ತ ತಕ್ಷಣವೇ ಶಾಸಕರಿಗೆ ಕರೆ ಮಾಡಿ ಸಾವಿನ ಮನೆ ನ್ಯಾಯ ಕೊಡಿಸಿ,ಸಾವಿನ ಕುಟುಂಬಕ್ಕೆ ನಿಮ್ಮಿಂದ ಸಾಂತ್ವನ ಬೇಕು ಎಂದು ಕೇಳಿದ ತಕ್ಷಣವೇ ಸ್ಥಳಕ್ಕೆ ಬಂದ ಶ್ರೀ ವತ್ಸ ರವರು ಅವರ ಕುಟುಂಬದವರೊಡನೆ ಮಾತನಾಡಿ ಅವರ ಕಷ್ಟವನ್ನು ಅರಿತು ತಕ್ಷಣವೇ ಸಂಸ್ಥೆಯ ಪ್ರಾಂಶುಪಾಲರು,ಪ್ರಾಧ್ಯಾಪಕರು, ಸಿಬ್ಬಂದಿ ವರ್ಗದವರೊಡನೆ ಮತ್ತು ಹಿರಿಯ ಪೋಲಿಸ್ ಅಧಿಕಾರಿಗಳು,ಕುಟುಂಬದವರು,ಹಾಗೂ ಸ್ಥಳೀಯ ಸಮಾಜದ ಮುಖಂಡರೊಂದಿಗೆ ಸುಧೀರ್ಘ ವಾಗಿ ಚರ್ಚಿಸಿ ಅವರ ಕುಟುಂಬದ ಆಧಾರ ಸ್ಥಂಭ ವಾದ ಮೊದಲನೆಯ ಮಗ ಅಭಿಷೇಕ ನಿಗೆ ಜೆ.ಎಸ್. ಎಸ್. ಸಂಸ್ಥೆಯಲ್ಲಿ ಡಿ.ಗ್ರೂಪ್ ನೌಕರಿ ಕೊಡಿಸಿ ಅತನ ವಿದ್ಯಾಭ್ಯಾಸ ಕ್ಕೆ ಸಹಾಯ ಮಾಡುವ ಕುರಿತಂತರ ಸಂಸ್ಥೆ ಯ ಹಿರಿಯರ ಅಧಿಕಾರಿಗಳನ್ನು ಒಪ್ಪಿಸಲಾಗಿತ್ತು.ಘಟನೆಗೆ ಮರುಗಿದ ಶಾಸಕ ಶ್ರೀವತ್ಸ ಸ್ಥಳದಲ್ಲಿಯೇ ತಮ್ಮ ಸಂಬಳದ ಸ್ವಂತ ಹಣದಲ್ಲಿ ಒಂದು ಲಕ್ಷ ರೂ ಗಳ ಪರಿಹಾರ ಹಾಗೂ ಕೆ.ಅರ್.ಕ್ಷೇತ್ರದ ವ್ಯಾಪ್ತಿಯಲ್ಲಿ ಅಶ್ರಯಮನೆಗೆ ಸ್ವಂತ ಹಣಕಟ್ಟಿ ಕೊಡಿಸುವುದಾಗಿ ಭರವಸೆ ನೀಡಿದ್ದರು. ಈ ಹಿನ್ನಲೆ ಇಂದು ಮೃತನ ತಂದೆ ಸತೀಶ್ ರವರ ಹೆಸರಿಗೆ ಚೆಕ್ ಹಸ್ತಾತರಿಸಲಾಯಿತು…

ಈ ಸಂಧರ್ಭದಲ್ಲಿ ಪೂಜ್ಯ ಮಹಾ ಪೌರರಾದ ಶಿವಕುಮಾರ್, ಉಪ ಮೇಯರ್ ಡಾ.ರೂಪ, ಅಡಳಿತ ಪಕ್ಷದ ನಾಯಕ ಮಾ.ವಿ.ರಾಮ ಪ್ರಸಾದ್,ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ಮಂಗಳ ಸೋಮಶೇಖರ್, ನಗರ ಮಾಧ್ಯಮ ವಕ್ತಾರರಾದ ಮಾ.ಮೋಹನ್, ಸೋಮ ಸುಂದರ್, ವಾಣೀಶ್ ಕುಮಾರ್,ಪ್ರದೀಪ್, ಕಿಶೋರ್ ಹಾಜರಿದ್ದರು…

Spread the love

Related post

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಸರ್ವೆ ಸೂಪರ್‌ವೈಸರ್ ಮಂಜುನಾಥ್ ನಿಧನ…ಹೃದಯಾಘಾತದಿಂದ ಸಾವು…

ಹುಣಸೂರು,ಅ13,Tv10 ಕನ್ನಡ ಶ್ರೀರಂಗಪಟ್ಟಣ ಕಂದಾಯ ಇಲಾಖೆ ಸರ್ವೆ ಸೂಪರ್ ವೈಸರ್ ಆಗಿದ್ದ ಹುಣಸೂರು ತಾಲೂಕು ಶ್ಯಾನುಬೋಗನಹಳ್ಳಿಯ ನಿವೃತ್ತ ಸಂಚಾರ ನಿಯಂತ್ರಕ ಗೋವಿಂದೇಗೌಡರ ಪುತ್ರ ಮಂಜುನಾಥ್(50) ಹೃದಯಾಘಾತದಿಂದ ಮೈಸೂರಿನ ಖಾಸಗಿ…
ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಆರ್.ಎಸ್.ಎಸ್.ಪಥಸಂಚಲನ ವೇಳೆ ಕುಸಿದು ಬಿದ್ದಿದ್ದ ಕಾರ್ಯಕರ್ತ ಸಾವು…

ಮೈಸೂರು,ಅ12,Tv10 ಕನ್ನಡ ಆರ್ ಎಸ್ ಎಸ್ ಪಥ ಸಂಚಲನದ ವೇಳೆ ಕುಸಿದ ಬಿದ್ದಿದ್ದ ಸ್ವಯಂಸೇವಕ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ಮೈಸೂರಿನಲ್ಲಿ ನಡೆದಿದೆ.ಜಯನಗರ ನಿವಾಸಿ ಮಹೇಂದ್ರ ಜೋಯಲ್(37) ಸಾವನ್ನಪ್ಪಿದ ಸ್ವಯಂಸೇವಕ.ಇಂದು…
ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ ಸೇರಿ 7 ಮಂದಿ ವಿರುದ್ದ FIR…

ಶೇರು,ಲ್ಯಾಂಡ್ ಡೆವಲೆಪ್ ವಹಿವಾಟಿನಲ್ಲಿ ಹೆಚ್ಚಿನ ಲಾಭಾಂಶ ಆಮಿಷ…ವ್ಯಕ್ತಿಗೆ 2.5 ಕೋಟಿ ಪಂಗನಾಮ…ಪೇದೆ…

ಮೈಸೂರು,ಅ12,Tv10 ಕನ್ನಡ ಲ್ಯಾಂಡ್ ಡೆವಲೆಪ್ ಮೆಂಟ್ ಹಾಗೂ ಶೇರು ವಹಿವಾಟಿನಲ್ಲಿ ಲಕ್ಷ ಲಕ್ಷ ಸಂಪಾದಿಸಬಹುದೆಂಬ ಆಮಿಷ ಒಡ್ಡಿ ನಿವೃತ್ತ ಉದ್ಯೋಗಿಯೊಬ್ಬರಿಗೆ 2.5 ಕೋಟಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.ಮೈಸೂರಿನ…

Leave a Reply

Your email address will not be published. Required fields are marked *