ಕಾವೇರಿ ವಿವಾದ ಬಗ್ಗೆ ದೇವೇಗೌಡರು ಬರೆದ ಪತ್ರ ನಾವು ಸ್ವಾಗತಿಸುತ್ತೇವೆ…ಆದರೆ ಸಮಸ್ಯೆ ಬಗೆಹರಿಸಲಿ…ಸಿಎಂಸಿದ್ದರಾಮಯ್ಯ…
- TV10 Kannada Exclusive
- September 26, 2023
- No Comment
- 86
ಮೈಸೂರು,ಸೆ26,Tv10 ಕನ್ನಡ
ಕಾವೇರಿ ನೀರು ವಿಚಾರಕ್ಕೆ
ದೇವೇಗೌಡರು ಬರೆದ ಪತ್ರವನ್ನ ನಾವು ಸ್ವಾಗತಿಸುತ್ತೇವೆ.ಆದರೆ ಸಮಸ್ಯೆ ಬಗೆಹರಿಸುವ ಕಾರ್ಯ ಮಾಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮೈಸೂರಿನಲ್ಲಿ ಹೇಳಿಕೆ ನೀಡಿದರು.
ಈಗ ಅವರದು ಬಿಜೆಪಿ ಜೊತೆಗೆ ಹೊಸ ಪ್ರೇಮ
ಆದರೆ ಸರ್ಕಾರ ಸರಿಯಾದ ನಿರ್ಧಾರ ಕೈಗೊಳ್ಳಲಿಲ್ಲ ಎಂಬುದನ್ನು ಪತ್ರದಲ್ಲಿ ಉಲ್ಲೇಖಿಸಿರುವುದನ್ನು ನಾವು ಒಪ್ಪುವುದಿಲ್ಲ.
ಸರ್ಕಾರ ಎಲ್ಲ ಅ
ಹಂತದಲ್ಲೂ ನಾಡಿನ ಜನರ ರಕ್ಷಣೆಗೆ ಬದ್ಧವಾಗಿಯೇ ಇದೆ.
ಕಾನೂನು ತಜ್ಞರು ಸರಿಯಾಗಿ ವಾದ ಮಾಡಿಲ್ಲ ಎಂಬ ಆರೋಪ ಸುಳ್ಳು.
ಹಿಂದಿನ ಎಲ್ಲಾ ಸರ್ಕಾರಗಳು ಇದ್ದಾಗಲೂ ಇದ್ದ ಲೀಗಲ್ ಟೀಮ್ ಈಗಲೂ ಇರೋದು.
ಅದೇ ಟೀಂ ವಾದ ಮಾಡಿದ್ದಾರೆ.
ಕಾನೂನು ತಜ್ಞರಲ್ಲಿ ಯಾವ ಬದಲಾವಣೆ ಆಗಿಲ್ಲ.ಹೀಗಾಗಿ ಸಮರ್ಥ ವಾದ ಮಂಡಿಸಿಲ್ಲ ಎಂಬುದರಲ್ಲಿ ಅರ್ಥವಿಲ್ಲ ಎಂದು ಸಮರ್ಥಿಸಿಕೊಂಡರು…