ನ್ಯಾಯಾಂಗ ಬಂಧನಕ್ಕೆ ನಿವೃತ್ತ ಡಿವೈಎಸ್ಪಿ ವಿಜಯ್ ಕುಮಾರ್…
- Crime
- October 4, 2023
- No Comment
- 941
ಮೈಸೂರು,ಅ4,Tv10 ಕನ್ನಡ
ನಿವೇಶನ ಕೊಡಿಸುವ ವಿಚಾರದಲ್ಲಿ ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ನಿವೃತ್ತ ಡಿವೈಎಸ್ಪಿ ವಿಜಯ್ ಕುಮಾರ್ ಗೆ ಮೈಸೂರು ನ್ಯಾಯಾಲಯ ನ್ಯಾಯಾಂಗ ಬಂದನಕ್ಕೆ ನೀಡಿದೆ.ನಿನ್ನೆ ತಡ ರಾತ್ರಿ ವಿಜಯ್ ಕುಮಾರ್ ರನ್ನ ಅಲನಹಳ್ಳಿಯ ನಿವಾಸದಲ್ಲಿ ಪೊಲೀಸರು ಬಂಧಿಸಿದ್ದರು.ಮಾಜಿ ಕಾರ್ಪೊರೇಟರ್ ಸೋಮಸುಂದರ್ ಹಾಗೂ ವಿಜಯ್ ಕುಮಾರ್ ವಿರುದ್ದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿತ್ತು.ಸೋಮಸುಂದರ್ ರನ್ನ ಪೊಲೀಸರು ಬಂಧಿಸಿದ್ದರು.ವಿಜಯ್ ಕುಮಾರ್ ಬಂಧನಕ್ಕೆ ಜಾಲ ಬೀಸಲಾಗಿತ್ತು.ನಿನ್ನೆ ತಡರಾತ್ರಿ ವಿಜಯ್ ಕುಮಾರ್ ಆಲನಹಳ್ಳಿಯ ತಮ್ಮ ನಿವಾಸದಲ್ಲಿ ಲಕ್ಷ್ಮಿಪುರಂ ಠಾಣೆ ಪೊಲೀಸರು ಬಂಧಿಸಿದ್ದರು.ಇಂದು ಮೈಸೂರಿನ ನ್ಯಾಯಾಲಯಕ್ಕೆ ವಿಜಯ್ ಕುಮಾರ್ ರನ್ನ ಹಾಜರುಪಡಿಸಲಾಗಿತ್ತು.ಜಾಮೀನು ಅರ್ಜಿಯನ್ನ ತಿರಸ್ಕರಿಸಲಾದ ಹಿನ್ನಲೆ ವಿಜಯ್ ಕುಮಾರ್ ರನ್ನ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ನಾಳೆ ಮತ್ತೆ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ…