ವಿಗ್ರಹಗಳನ್ನ ಕದ್ದೊಯ್ದ ಕಳ್ಳರು…ಪಡುವಾರಹಳ್ಳಿ ಗಣಪತಿ ದೇವಸ್ಥಾನದಲ್ಲಿ ಘಟನೆ…
- TV10 Kannada Exclusive
- November 25, 2023
- No Comment
- 547

ಮೈಸೂರು,ನ24,Tv10 ಕನ್ನಡ
ಗಣಪತಿ ದೇವಸ್ಥಾನದ ಕಿಟಕಿ ಗಾಜು ಹೊಡೆದ ಖದೀಮರು ದೇವರ ವಿಗ್ರಹಗಳನ್ನ ಕಳವು ಮಾಡಿರುವ ಘಟನೆ ಮೈಸೂರಿನ
ಪಡುವಾರಹಳ್ಳಿಯಲ್ಲಿ ನಡೆದಿದೆ.ಗುರುವಾರ ಮಧ್ಯರಾತ್ರಿ ದೇವಾಲಯದ ಕಿಟಿಕಿಯ ಗಾಜನ್ನು ಒಡೆದು ಒಳ ನುಗ್ಗಿರುವ ಕಳ್ಳರು ವಿಷ್ಣು, ಗಣಪತಿ, ಮಹಾಲಕ್ಷ್ಮೀ, ಕೃಷ್ಣ, ಶಿವನ ವಿಗ್ರಹ ಕಳ್ಳತನ ಮಾಡಿದ್ದಾರೆ ಎಂದು ದೇವಸ್ಥಾನದ ಅರ್ಚಕರು ಜಯಲಕ್ಷ್ಮೀಪುರಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ…