ವಿಶ್ವ ಕ್ಯಾನ್ಸರ್ ಜಾಗೃತಿ ಸಪ್ತಾಹ…ಅಂಕೊಲಾಜಿ ಬಗ್ಗೆ ಮಹಿಳೆಯರಿಗೆ ಕಾರ್ಯಾಗಾರ…

ಮೈಸೂರು,ಫೆ1,Tv10 ಕನ್ನಡ

ವಿಶ್ವ ಕ್ಯಾನ್ಸರ್ ಜಾಗೃತಿ ಸಪ್ತಾಹದ ಅಂಗವಾಗಿ ಇಂದು ನೇಗಿಲಯೋಗಿ ಮಹಿಳಾ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಮಹಿಳೆಯರಿಗೆ ಅಂಕೋಲಾಜಿ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ಮೈಸೂರಿನ ಮರುಳೆೇಶ್ವರ ನೇಗಿಲಯೋಗಿ ಸೇವಾಭವನದಲ್ಲಿ ನಡೆದ ಕಾರ್ಯಕ್ರಮವನ್ನ ….ಉದ್ಘಾಟಿಸಿದರು.
ಮಹಿಳೆಯರಲ್ಲಿ ಸಾಮಾನ್ಯವಾಗಿ ಕಂಡುಬರುವ ಸ್ತ್ರೀರೋಗಶಾಸ್ತ್ರದ ಆಂಕೊಲಾಜಿಯ ಕಾರ್ಯಾಗಾರದಲ್ಲಿ ತಿಳುವಳಿಕೆ ಮೂಡಿಸಲಾಯಿತು.ಕಾರ್ಯಾಗಾರದಲ್ಲಿ ಸ್ತ್ರೀರೋಗಶಾಸ್ತ್ರದ ಆಂಕೊಲಾಜಿಯು ಮಹಿಳೆಯರಿಗೆ ನಿರ್ದಿಷ್ಟವಾದ ಕ್ಯಾನ್ಸರ್ ಗಳಾದ ಗರ್ಭಕಂಠದ ಕ್ಯಾನ್ಸರ್, ಸ್ಥನದ ಕ್ಯಾನ್ಸರ್, ಎಂಡೊಮೆಟ್ರಿಯಲ್ ಕ್ಯಾನ್ಸರ್, ಅಂಡಾಶಯದ ಕ್ಯಾನ್ಸರ್, ವಾಲ್ವಾರ್ ಕ್ಯಾನ್ಸರ್ ಗಳ ಅಪಾಯದ ಅಂಶಗಳು,ಸಾಮಾನ್ಯ ಲಕ್ಷಣಗಳು, ತಡೆಗಟ್ಟುವ ವಿಧಾನಗಳ ಬಗ್ಗೆ ಮಾಹಿತಿ ನೀಡಲಾಯಿತು.

ಕಾರ್ಯಾಗಾರದಲ್ಲಿ ಅವಂತ್ ಬಿ ಕೆ ಜಿ ಆಸ್ಪತ್ರೆಯಲ್ಲಿ ಸ್ತ್ರೀರೋಗ ತಜ್ಞೆ ಮತ್ತು ಕ್ಯಾನ್ಸರ್ ರೋಗ ತಜ್ಞೆ (ಆನ್ಕೊಲೊಜಿಸ್ಟ್ )ಆಗಿ ಕಾರ್ಯನಿರ್ವಹಸುತ್ತಿರುವ ಡಾ.ಡಿ ಆರ್ ರಮ್ಯಾ . ರವರು HPV ಲಸಿಕೆ, ಸ್ಕ್ರೀನಿಂಗ್, PAP ಸ್ಮೀಯರ್ / HPV ಡಿಎನ್ಎ ಪರೀಕ್ಷೆ, MRI ಮತ್ತು ಮ್ಯಾಮೊಗ್ರಾಮ್ ಸ್ಕ್ರೀನಿಂಗ್ ಹೀಗೇ ಮುಂತಾದ ಪರೀಕ್ಷೆಗಳನ್ನು ಯಾವ ಸಂದರ್ಭಗಳಲ್ಲಿ ಮಾಡಲಾಗುವುದು ಎಂದು ವಿವರವಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಮಹಿಳಾ ಸದಸ್ಯರೊಂದಿಗೆ ಸಂವಾದವನ್ನು ಏರ್ಪಾಡಿಸಲಾಗಿತ್ತು. ಮಹಿಳೆಯರು ತಮ್ಮೆಲ್ಲ ಸಂದೇಹಗಳಿಗೆ ಉತ್ತರವನ್ನು ಪಡೆದುಕೊಂಡರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಶ್ರೀಮತಿ ಜೆ ಶೋಭ ರವರು ವಹಿಸಿದ್ದರು.ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಹಲವಾರು ಮಹಿಳೆಯರು ಅಗತ್ಯ ಮಾಹಿತಿಯನ್ನು ಪಡೆದುಕೊಂಡರು…

Spread the love

Related post

ವಿಜಯನಗರ ಪೊಲೀಸರ ಕಾರ್ಯಾಚರಣೆ…ನರ್ಸಿಂಗ್ ಸೇವೆ ನೀಡುವ ನೆಪದಲ್ಲಿ ಚಿನ್ನಾಭರಣ ಕಳುವು…ಆರೋಪಿ ಅಂದರ್…22.10 ಲಕ್ಷ ಮೌಲ್ಯದ ಪದಾರ್ಥ ವಶ…

ವಿಜಯನಗರ ಪೊಲೀಸರ ಕಾರ್ಯಾಚರಣೆ…ನರ್ಸಿಂಗ್ ಸೇವೆ ನೀಡುವ ನೆಪದಲ್ಲಿ ಚಿನ್ನಾಭರಣ ಕಳುವು…ಆರೋಪಿ ಅಂದರ್…22.10…

ವಿಜಯನಗರ ಪೊಲೀಸರ ಕಾರ್ಯಾಚರಣೆ…ನರ್ಸಿಂಗ್ ಸೇವೆ ನೀಡುವ ನೆಪದಲ್ಲಿ ಚಿನ್ನಾಭರಣ ಕಳುವು…ಆರೋಪಿ ಅಂದರ್…22.10 ಲಕ್ಷ ಮೌಲ್ಯದ ಪದಾರ್ಥ ವಶ… ಮೈಸೂರು,ಮೇ27,Tv10 ಕನ್ನಡ ವೃದ್ದೆ ಮನೆಯಲ್ಲಿ ನರ್ಸಿಂಗ್ ಸೇವೆಗೆ ಸೇರಿಕೊಂಡ ಐನಾತಿ…
ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ ಹೆಜ್ಜೆಯಂತ ಗರುತು ಪತ್ತೆ…ಕುಟುಂಬಸ್ಥರಲ್ಲಿ ಆತಂಕ…

ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ…

ಜಮೀನಿಗೆ ತೆರಳಿದ್ದ ಮಹಿಳೆ ನಿಗೂಢ ನಾಪತ್ತೆ…ಸ್ಥಳದಲ್ಲಿ ಮನುಷ್ಯನ ಬೆರಳಿನಿಂದ ಸೃಷ್ಟಿಸಿರುವ ಚಿರತೆ ಹೆಜ್ಜೆಯಂತ ಗರುತು ಪತ್ತೆ…ಕುಟುಂಬಸ್ಥರಲ್ಲಿ ಆತಂಕ… ನಂಜನಗೂಡು,ಮೇ26,Tv10 ಕನ್ನಡ ಜಮೀನಿಗೆ ತೆರಳಿದ ಮಹಿಳೆಯೊಬ್ಬರು ನಿಗೂಢವಾಗಿ ನಾಪತ್ತೆಯಾಗಿರುವ ಪ್ರಕರಣ…
ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ ಆಚರಣೆ…

ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ…

ಗೋವುಗಳಿಗೆ ಪೂಜೆ ಸಲ್ಲಿಸು ಮೇವು ವಿತರಿಸಿ ಗಣಪತಿ ಸಚ್ಚಿದಾನಂದಸ್ವಾಮಿಗಳ ಹುಟ್ಟು ಹಬ್ಬ ಆಚರಣೆ… ಮೈಸೂರು,ಮೇ26,Tv10 ಕನ್ನಡ ಶ್ರೀಗಣಪತಿ ಸಚ್ಚಿದಾನಂದ ಶ್ರೀಗಳ 84 ನೇ ಹುಟ್ಟುಹಬ್ಬ ಆಶ್ರಮದಲ್ಲಿ ಸಂಭ್ರಮದಿಂದ ನೆರವೇರುತ್ತಿದೆ.ವಿವಿಧ…

Leave a Reply

Your email address will not be published. Required fields are marked *