ಹೆತ್ತವರ ವಿರೋಧ ಲೆಕ್ಕಿಸದೆ ಅಪ್ರಾಪ್ತೆಯೊಂದಿಗೆ ವಿವಾಹ…ಮದುಮಗ ಸೇರಿದಂತೆ ಮೂವರ ವಿರುದ್ದ FIR

ಹೆತ್ತವರ ವಿರೋಧ ಲೆಕ್ಕಿಸದೆ ಅಪ್ರಾಪ್ತೆಯೊಂದಿಗೆ ವಿವಾಹ…ಮದುಮಗ ಸೇರಿದಂತೆ ಮೂವರ ವಿರುದ್ದ FIR

ಮೈಸೂರು,ಫೆ23,Tv10 ಕನ್ನಡ

ಹೆತ್ತವರ ವಿರೋಧವಿದ್ದರೂ ಲೆಕ್ಕಿಸದೆ ಅಪ್ರಾಪ್ತೆಯನ್ನ ವಿವಾಹವಾ ಮದುಮಗ ಹಾಗೂ ಪೋಷಕರ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಮದುಮಗ ರಿಹಾನಾಚಪಾಷಾ,ಆತನ ತಂದೆ ಶೇಕ್ ಮೊಹಿದ್ದೀನ್ ತಾಯಿ ಫರ್ವೀನ್ ತಾಜ್ ವಿರುದ್ದ ಬಾಲ್ಯವಿವಾಹ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.16 ವರ್ಷದ ಅಪ್ರಾಪ್ತೆಯನ್ನ ವಿವಾಹವಾಗಲು ಬಯಸಿದ್ದ ರಿಹಾನ್ ಪಾಷಾ ಮನವಿಯನ್ನ ಬಾಲಕಿಯ ತಾಯಿ ವಿರೋಧಿಸಿದ್ದಾರೆ.ಬಾಲಕಿಗೆ ಕೇವಲ 16 ವರ್ಷ ಕಾರಣ ಮದುವೆ ಮಾಡಿಕೊಡಲು ನಿರಾಕರಿಸಿದ್ದಾರೆ.ವರನ ಕಡೆಯವರು ಎಂಗೇಜ್ ಮೆಂಟ್ ಮಾಡಿಕೊಡಿ ನಂತರ 18 ವರ್ಷ ದಾಟಿದ ಮೇಲೆ ಮದುವೆ ಆಗುವುದಾಗಿ ನಂಬಿಸಿದ್ದಾರೆ.ಹುಡುಗನ ಕಡೆಯವರ ಮಾತನ್ನ ನಂಬಿ ಎಂಗೇಜ್ ಮೆಂಟ್ ಮಾಡಿದ್ದಾರೆ.ನಂತರ ಬಾಲಕಿಯ ಜೊತೆ ರಿಹಾನ್ ಪಾಷಾ ಸಂಪರ್ಕ ಬೆಳೆಸಿಕೊಂಡಿದ್ದಾನೆ.ಅಪ್ರಾಪ್ತೆಗೆ ತಲೆಕೆಡಿಸಿ ಬಾಲ್ಯವಿವಾಹ ಕಾನೂನಿಗೆ ವಿರುದ್ದ ಎಂದು ಹೇಳಿದರೂ ಲೆಕ್ಕಿಸದೆ ವಿವಾಹವಾಗಿದ್ದಾನೆ.ಅಪ್ರಾಪ್ತ ಮಗಳ ಮದುವೆ ಆದ ಮದುಮಗ ಹಾಗೂ ಆತನ ಹೆತ್ತವರ ವಿರುದ್ದ ಉದಯಗಿರಿ ಪೊಲೀಸ್ ಪ್ರಕರಣ ದಾಖಲಾಗಿದೆ…

Spread the love

Related post

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…
ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಹುಲಿ ಹಾಗೂ ಮರಿಗಳ ಸಾವು ಪ್ರಕರಣ…ಅರಣ್ಯ ಸಚಿವ ಕಳವಳ…

ಕೊಳ್ಳೇಗಾಲ,ಜೂ26,Tv10 ಕನ್ನಡ ಮಲೆ ಮಹದೇಶ್ವರ ಬೆಟ್ಟದ ಅರಣ್ಯ ಪ್ರದೇಶದಲ್ಲಿ ಒಂದು ಹುಲಿ ಮತ್ತು ಮೂರು ಮರಿಗಳು ಅಸಹಜ ಸಾವಿಗೀಡಾಗಿರುವ ಬಗ್ಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ…

Leave a Reply

Your email address will not be published. Required fields are marked *