ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ವಶಕ್ಕೆ ಪಡೆಯಲು ಮುಂದಾದ ಮುಡಾ…ಗುತ್ತಿಗೆದಾರನಿಗೆ ನೋಟೀಸ್…
- TV10 Kannada Exclusive
- April 5, 2024
- No Comment
- 393






ಮೈಸೂರು,ಏ4,Tv10 ಕನ್ನಡ
ನಿಯಮಾನುಸಾರ ಅವಧಿಯೊಳಗೆ ಗುತ್ತಿಗೆ ಹಣ ಪಾವತಿಸುವಲ್ಲಿ ವಿಫಲವಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ಗುತ್ತಿಗೆದಾರನಿಗೆ ಮುಡಾ ಅಧಿಕಾರಿಗಳು ನೋಟೀಸ್ ನೀಡಿದ್ದಾರೆ.ಗುತ್ತಿಗೆ ಹಣ ಪೂರ್ಣವಾಗಿ ಪಾವತಿಸಿ ಕನ್ವೆನ್ಷನ್ ಹಾಲ್ ನ್ನ ವಶಕ್ಕೆ ನೀಡುವಂತೆ ನೋಟೀಸ್ ನಲ್ಲಿ ಸೂಚಿಸಲಾಗಿದೆ.ಬೆಂಗಳೂರು ಮೂಲದ ಸರ್ಕಾರ್ ಕನ್ಸ್ಟ್ರಕ್ಷನ್ ನ ಮಾಲೀಕರಾದ ಸಿದ್ದರಾಜಪ್ಪ ಎಂಬುವರಿಗೆ ಮೈಸೂರಿನ ಹೆಬ್ಬಾಳ್ ಬಡಾವಣೆಯಲ್ಲಿರುವ ನಾಲ್ವಡಿ ಕೃಷ್ಣರಾಜ ಒಡೆಯರ್ ಕನ್ವೆನ್ಷನ್ ಹಾಲ್ ನ್ನ ಮದುವೆ ಮುಂತಾದ ಕಾರ್ಯಕ್ರಮಗಳನ್ನ ನಡೆಸಲು ಗುತ್ತಿಗೆ ನೀಡಲಾಗಿತ್ತು.ನಿಗದಿಪಡಿಸಿದ ಗುತ್ತಿಗೆ ಹಣವನ್ನ ನಿಗದಿತ ಸಮಯದಲ್ಲಿ ಪಾವತಿಸುವಲ್ಲಿ ಸಿದ್ದರಾಜಪ್ಪ ವಿಫಲರಾಗಿದ್ದರು.ಈ ಸಂಭಂಧ ಈ ಹಿಂದೆ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರ ಬಾಕಿ ಗುತ್ತಿಗೆ ಹಣ ಪಾವತಿಸುವಂತೆ ನೋಟೀಸ್ ನೀಡಿ ಎಚ್ಚರಿಕೆ ನೀಡಿತ್ತು.ಈ ವೇಳೆ ಬಾಕಿ ಇರುವ ಗುತ್ತಿಗೆ ಹಣ ಪಾವತಿಸಲು ಸಮಯಾವಕಾಶ ಕೋರಿ ಸಿದ್ದರಾಜಪ್ಪ ನ್ಯಾಯಾಲಯದ ಮೊರೆ ಹೋಗಿದ್ದರು. ಸಧ್ಯ ನ್ಯಾಯಾಲಯದಲ್ಲಿ ಹೂಡಲಾಗಿದ್ದ ರಿಟ್ ಪಿಟಿಷನ್ ಸಂಖ್ಯೆ 26241/2023 ನ್ನ ವಜಾ ಮಾಡಲಾಗಿದೆ.ಈ ಹಿನ್ನಲೆ ಸದರಿ ಗುತ್ತಿಗೆದಾರನಿಗೆ ಪ್ರಾಧಿಕಾರದ ಕಾರ್ಯದರ್ಶಿಗಳು ನೋಟೀಸ್ ಜಾರಿ ಮಾಡಿದ್ದಾರೆ.ಬಾಕಿ ಗುತ್ತಿಗೆ ಹಣವನ್ನ ಸಂಪೂರ್ಣ ಪಾವತಿಸಿ ಸದರಿ ಕನ್ವೆನ್ಷನ್ ಹಾಲ್ ನ್ನ ಪ್ರಾಧಿಕಾರದ ವಶಕ್ಕೆ ನೀಡುವಂತೆ ಸೂಚಿಸಿದ್ದಾರೆ.ತಪ್ಪಿದ್ದಲ್ಲಿ ಕಾನೂನು ರೀತಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ…