ಭಾಗಮಂಡಲ ಪೊಲೀಸರ ಮಿಂಚಿನ ಕಾರ್ಯಾಚರಣೆ…ಮನೆಗಳ್ಳರ ಬಂಧನ…ನಗದು ಸೇರಿದಂತೆ 14.50 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಭಾಗಮಂಡಲ ಪೊಲೀಸರ ಮಿಂಚಿನ ಕಾರ್ಯಾಚರಣೆ…ಮನೆಗಳ್ಳರ ಬಂಧನ…ನಗದು ಸೇರಿದಂತೆ 14.50 ಲಕ್ಷ ಮೌಲ್ಯದ ಚಿನ್ನಾಭರಣ ವಶ…

ಮಡಿಕೇರಿ,ಏ16,Tv10 ಕನ್ನಡ

ಮನೆ ಬಾಗಿಲು ಮೀಟಿ 15 ಲಕ್ಷ ಮೌಲ್ಯದ 232 ಗ್ರಾಂ ಚಿನ್ನಾಭರಣಗಳನ್ನ ಕಳುವು ಮಾಡಿದ ಚೋರರನ್ನ ಬಂಧಿಸುವಲ್ಲಿ ಭಾಗಮಂಡಲ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.ಬಂಧಿತರಿಂದ 14.50 ಲಕ್ಷ ಮೌಲ್ಯದ 177 ಗ್ರಾಂ ಚಿನ್ನಾಭರಣ,ಕೃತ್ಯಕ್ಕೆ ಬಳಸಿದ ಒಂದು ಯಮಹಾ ಬೈಕ್,2 ಮೊಬೈಲ್ ವಶಪಡಿಸಿಕೊಳ್ಳಲಾಗಿದೆ.ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಎಲ್.ಅರುಣ್ ರವರ ನೇತೃತ್ವದ ತಂಡದ ಯಶಸ್ವಿ ಕಾರ್ಯಾಚರಣೆಯನ್ನ ಜಿಲ್ಲಾ ಎಸ್ಪಿ ರಾಮರಾಜನ್ ರವರು ಪ್ರಶಂಸಿಸಿದ್ದಾರೆ.

ಮಡಿಕೇರಿ ಅಯ್ಯಂಗೇರಿ ಗ್ರಾಮದ ಮಿದ್ ಲಾಜ್ (22) ಹಾಗೂ ಈತನ ಪ್ರೇಯಸಿ ಫಾತಿಮಾ(26) ಬಂಧಿತರು.ಅಯ್ಯಂಗೇರಿ ಗ್ರಾಮದ ಜಲೀನಾ ಎಂಬುವರ ಮನೆ ಬಾಗಿಲು ಮೀಟಿ ಕೃತ್ಯವೆಸಗಿದ್ದ ಕಿಲಾಡಿ ಲವರ್ಸ್ ಇದೀಗ ಪೊಲೀಸರ ಅತಿಥಿಗಳು.

ಏಪ್ರಿಲ್ 12 ರಂದು ಜಲೀನಾ ರವರು ತಮ್ಮ ಸಂಭಂಧಿಕರ ಮನೆಗೆ ತೆರಳಿದ್ದರು.ಹಿಂದಿರುಗಿ ಬಂದಾಗ ಮನೆ ಬಾಗಿಲು ಮೀಟಿ 15,08,000/- ಮೌಲ್ಯದ 232 ಗ್ರಾಂ ಚಿನ್ನಾಭರಣಗಳನ್ನ ಕಳ್ಳರು ದೋಚಿದ್ದರು.ಈ ಸಂಭಂಧ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಡಿಕೇರಿ ಜಿಲ್ಲಾ ಎಸ್ಪಿ ರಾಮರಾಜನ್ ಮಾರ್ಗದರ್ಶನದಲ್ಲಿ ಹಾಗೂ ಅಡಿಷನಲ್ ಎಸ್ಪಿ ಸುಂದರರಾಜ್ ಉಸ್ತುವಾರಿಯಲ್ಲಿ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರಾದ ಅರುಣ್.ಎಲ್.ರವರ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿತ್ತು.ಕ್ಷಿಪ್ರ ಕಾರ್ಯಾಚರಣೆ ನಡೆಸಿದ ತಂಡ ಘಟನೆ ನಡೆದ ಕೇವಲ 48 ಗಂಟೆಗಳಲ್ಲಿ ಆರೋಪಿಗಳನ್ನ ಸೆದೆಬಡಿಯುವಲ್ಲಿ ಯಶಸ್ವಿಯಾಗಿದೆ.

ವೃತ್ತನಿರೀಕ್ಷಕರಾದ ಅರುಣ್.ಎಲ್.ರವರ ತಂಡದಲ್ಲಿ ಎಸ್ಸೈಗಳಾದ ಶೋಭಾ ಲಮಾಣಿ,ನಾಪೋಕ್ಲು ಠಾಣೆಯ ಮಂಜುನಾಥ್ ಎಎಸ್ಸೈ ದಿನೇಶ್ ಹಾಗೂ ಸಿಬ್ಬಂದಿಗಳಾದ ರಾಮಪ್ಪ,ಲೋಕೇಶ್,ಮಧುಸೂಧನ್,ವಸಂತ,ಪ್ರೇಮ್ ಕುಮಾರ್,ಸುನಿಲ್ ಕುಮಾರ್,ಮಹದೇವಸ್ವಾಮಿ,ಪರಮೇಶ್,ನಾಗರಾಜ್ ಕಡಗಣ್ಣನವರ್,ಸಂಗಪ್ಪ,ಚೋಂದಮ್ಮ,ಶ್ರೀಶೈಲ ಬಿರಾದಾರ್,ಉಮೇಶ್,ಫರೀಫ್,ರಾಜೇಶ್,ಪ್ರವೀಣ್ ರವರು ಕಾರ್ಯಾಚರಣೆ ನಡೆಸಿ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.ಚುನಾವಣೆ ನಿಮಿತ್ತ ಮೈಸೂರಿನಿಂದ ಮಡಿಕೇರಿಗೆ ವರ್ಗಾವಣೆಯಾದ ಅರುಣ್ ಎಲ್ ರವರ ಮಿಂಚಿನ ಕಾರ್ಯಾಚರಣೆಯನ್ನ ಜಿಲ್ಲಾ ಎಸ್ಪಿ ಹಾಗೂ ಹೆಚ್ಚುವರಿ ಅಧೀಕ್ಷಕರು ಶ್ಲಾಘಿಸಿದ್ದಾರೆ…

Spread the love

Related post

ಯುವಕನ ಮೇಲೆ ಹಲ್ಲೆ…ನಾಲ್ವರಿಂದ ಕೃತ್ಯ…ಪ್ರಕರಣ ದಾಖಲು…

ಯುವಕನ ಮೇಲೆ ಹಲ್ಲೆ…ನಾಲ್ವರಿಂದ ಕೃತ್ಯ…ಪ್ರಕರಣ ದಾಖಲು…

ಪಿರಿಯಾಪಟ್ಟಣ,ಮಾ18,Tv10 ಕನ್ನಡ ಯುವಕನನ್ನು ಕರೆದುಕೊಂಡು ಹೋಗಿ ಹಲ್ಲೆ ನಡೆಸಿರುವ ಘಟನೆ ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಪ್ರಜ್ವಲ್ (21) ಹಲ್ಲೆಗೊಳಗಾದ ಯುವಕ. ಪಿರಿಯಾಪಟ್ಟಣ ತಾಲ್ಲೂಕು…
ಶ್ರೀರಾಮ ಗೆಳೆಯರ ಬಳಗದಿಂದ ಪುನೀತ್ ರಾಜ್ ಕುಮಾರ್ ಜನ್ಮದಿನೋತ್ಸವ ಆಚರಣೆ…ಮಜ್ಜಿಗೆ,ಸಿಹಿ ವಿತರಣೆ…

ಶ್ರೀರಾಮ ಗೆಳೆಯರ ಬಳಗದಿಂದ ಪುನೀತ್ ರಾಜ್ ಕುಮಾರ್ ಜನ್ಮದಿನೋತ್ಸವ ಆಚರಣೆ…ಮಜ್ಜಿಗೆ,ಸಿಹಿ ವಿತರಣೆ…

ಮೈಸೂರು,ಮಾ17,Tv10 ಕನ್ನಡ ಕನ್ನಡ ಚಿತ್ರರಂಗದ ಮರೆಯಲಾಗದ ಮಾಣಿಕ್ಯ ಪವರ್ ಸ್ಟಾರ್ ಯುವರತ್ನ ಪುನೀತ್ ರಾಜಕುಮಾರ್ ರವರ ಜನ್ಮದಿನೋತ್ಸವದ ನೆನಪಿಗಾಗಿ ‘ಶ್ರೀರಾಮ ಗೆಳಯರ ಬಳಗದ’ ವತಿಯಿಂದ ಚಾಮುಂಡಿಪುರಂ ವೃತ್ತದಲ್ಲಿ ಸಾರ್ವಜನಿಕರಿಗೆ…
ಕಳೆದುಹೋಗಿದ್ದ ಮೊಬೈಲ್ ವಾರಸುದಾರರಿಗೆ…ಮಾಲೀಕರನ್ನ ತಲುಪಿದ 37 ಮೊಬೈಲ್…

ಕಳೆದುಹೋಗಿದ್ದ ಮೊಬೈಲ್ ವಾರಸುದಾರರಿಗೆ…ಮಾಲೀಕರನ್ನ ತಲುಪಿದ 37 ಮೊಬೈಲ್…

ಮೈಸೂರು,ಮಾ17,Tv10 ಕನ್ನಡ ಕಳೆದುಹೋಗಿದ್ದ 37 ಮೊಬೈಲ್ ಫೋನ್ ಗಳನ್ನು ದೇವರಾಜ ಠಾಣೆ ಪೊಲೀಸರು ಇಂದು ವಾರಸುದಾರರಿಗೆ ಮರಳಿಸಿದರು. ದೇವರಾಜ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ರಘು.ಕೆ.ಆರ್. ಉಪ ನಿರೀಕ್ಷಕರಾದ…

Leave a Reply

Your email address will not be published. Required fields are marked *