ವಿವಿ ಪುರಂ ಠಾಣೆ ಪೊಲೀಸರ ಕಾರ್ಯಾಚರಣೆ…ಯುವಕನನ್ನು ಅಪಹರಿಸಿ ನಗದು,ಚಿನ್ನಾಭರಣ ದೋಚಿದ್ದ ಮೂವರು ಖದೀಮರ ಬಂಧನ…

ವಿವಿ ಪುರಂ ಠಾಣೆ ಪೊಲೀಸರ ಕಾರ್ಯಾಚರಣೆ…ಯುವಕನನ್ನು ಅಪಹರಿಸಿ ನಗದು,ಚಿನ್ನಾಭರಣ ದೋಚಿದ್ದ ಮೂವರು ಖದೀಮರ ಬಂಧನ…

ಮೈಸೂರು,ಮೇ1,Tv10 ಕನ್ನಡ

ಯುಕನನ್ನ ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ನಗದು ಹಾಗೂ ಚಿನ್ನಾಭರಣ ದೋಚಿದ್ದ ಮೂವರು ಖದೀಮರನ್ನ ಬಂಧಿಸುವಲ್ಲಿ ವಿವಿ ಪುರಂ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೈಸೂರು ತಾಲೂಕಿನ ಕಾಮನಕೆರೆ ಹುಂಡಿಯ ರಾಹುಲ್(20), ಬೆಳವಾಡಿಯ ಅಖಿಲೇಶ್(19) ಮತ್ತು ಹೂಟಗಳ್ಳಿಯ ನಂದೀಶ್(19) ಬಂಧಿತರು. ನ್ಯಾಯಾಂಗ
ಈ ಮೂವರು ನಗರದ ರೇಲ್ವೆ ನಿಲ್ದಾಣದ ಬಳಿ ಕಾರಿನಲ್ಲಿ ತೆರಳುತ್ತಿದ್ದ ಯುವಕ ಚಿರಾಗ್ ಜೈನ್ ಎಂಬಾತನನ್ನ ಅಡ್ಡಗಟ್ಟಿ ಕಾರಿನ ಸಮೇತ ಅಪಹರಿಸಿ ಯಶಸ್ವಿನಿ ಕಲ್ಯಾಣ ಮಂಟಪದ ಬಳಿಗೆ ಕರೆದೊಯ್ದು. ನಗದು 2 ಸಾವಿರ ನಗದು 39 ಗ್ರಾಂ ತೂಕದ ಎರಡು ಚಿನ್ನದ ಸರ ದೋಚಿ ಇಡೀ ರಾತ್ರಿ ಬಂಧನದಲ್ಲಿರಿಸಿಕೊಂಡು ನಂತರ ಬಿಡುಗಡೆ ಮಾಡಿದ್ದಾರೆ.
ಸಿದ್ದಾರ್ಥನಗರದ ನಿವಾಸಿ ಚಿರಾಗ್ ಜೈನ್(23) ಶನಿವಾರ ತಡ ರಾತ್ರಿ ರಾಜಸ್ತಾನದಿಂದ ಆಜ್ಮೀರ್ ಎಕ್ಸ್‌ಪ್ರೈಸ್ ರೈಲಿನಲ್ಲಿ ಬಂದಿದ್ದ ತಂದೆ-ತಾಯಿಯನ್ನು ಕರೆದುಕೊಂಡು ಹೋಗಲು ರೈಲ್ವೆ ನಿಲ್ದಾಣದ ಹಿಂಭಾಗದ ಗೇಟ್ ಕಡೆ ಹೋಗುತ್ತಿದ್ದಾಗ ಸ್ಕೂಟರ್‌ನಲ್ಲಿ ನಿಂತಿದ್ದ ಈ ಮೂವರು ಅಡ್ಡಗಟ್ಟಿ ಕಾರನ್ನು ನಿಲ್ಲಿಸಿ ಗಲಾಟೆ ಮಾಡಿ ಕಾರಿನಿಂದ ಚಿರಾಗ್ ಜೈನ್ ನನ್ನು ಇಳಿಸಿದ್ದಾರೆ.
ಬಳಿಕ ಮೂವರಲ್ಲಿ ಒಬ್ಬಾತ ಚಿರಾಗ್ ಜೈನ್‌ನನ್ನು ಹೆದರಿಸಿ ಕಾರಿನಲ್ಲಿ ಕುಳಿತುಕೊಂಡು ಹುಣಸೂರು ರಸ್ತೆಯ ಮೂಲಕ ಹೂಟಗಳ್ಳಿ ಕಡೆ ಬಂದಿದ್ದಾರೆ.ಜೊತೆಗಿದ್ದವರು ಸ್ಕೂಟರ್‌ನಲ್ಲಿ ಹಿಂಬಾಲಿಸಿದ್ದಾರೆ.
ಹೂಟಗಳ್ಳಿ ಬಳಿ ಕಾರನ್ನು ನಿಲ್ಲಿಸಿ 39 ಗ್ರಾಂ ತೂಕದ 2 ಚಿನ್ನದ ಸರ, ಮೊಬೈಲ್ ಹಾಗೂ 2 ಸಾವಿರ ರೂ. ನಗದನ್ನು ಕಿತ್ತುಕೊಂಡಿದ್ದಾರೆ. ಬೆಳಗಿನ ಜಾವ 5 ಗಂಟೆಯವರೆಗೆ ಅಲ್ಲೇ ಇರಿಸಿಕೊಂಡು ಬಳಿಕ ಕಾರಿನ ಕೀ ಕೊಟ್ಟು ಕಳುಹಿಸಿದ್ದಾರೆ.
ಈ ಸಂಬಂಧ ಚಿರಾಗ್ ಜೈನ್ ನೀಡಿದ ದೂರಿನ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸರು, ಮೂವರನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಈ ಸಂಬಂಧ ವಿವಿ ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ…

Spread the love

Related post

ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ ಮಾರಾಟ…ಬೆಲೆಬಾಳುವ ಖನಿಜಗಳು ಖದೀಮರ ಪಾಲು…ರಕ್ಷಣೆ ಮಾಡುವಂತೆ ದೂರು ಕೊಟ್ರೂ ಡೋಂಟ್ ಕೇರ್…ಕ್ರಮ ಕೈಗೊಳ್ಳಲು ಮೀನಾ ಮೇಷ…ಪ್ರಭಾವಿಗಳ ಕೈವಾಡವೇ…ಅಕ್ರಮದ ಹಿಂದಿರುವ ಕಾಣದ ಕೈಗಳು ಯಾವುದು…?

ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ…

ಸ್ಥಗಿತಗೊಂಡಿರುವ ಮೈನಿಂಗ್ ನಲ್ಲಿ ಕೊಳ್ಳೆ…ಕೋಟ್ಯಾಂತರ ಮೌಲ್ಯದ ಸರ್ಕಾರಿ ಜಾಗಕ್ಕಿಲ್ಲ ರಕ್ಷಣೆ…ನಿವೇಶನಗಳಾಗಿ ಪರಿವರ್ತಿಸಿ ಮಾರಾಟ…ಬೆಲೆಬಾಳುವ ಖನಿಜಗಳು ಖದೀಮರ ಪಾಲು…ರಕ್ಷಣೆ ಮಾಡುವಂತೆ ದೂರು ಕೊಟ್ರೂ ಡೋಂಟ್ ಕೇರ್…ಕ್ರಮ ಕೈಗೊಳ್ಳಲು ಮೀನಾ ಮೇಷ…ಪ್ರಭಾವಿಗಳ…
ಮದ್ದೂರಿನಲ್ಲಿ ರೌಡಿ ಶೀಟರ್ ಯಶ್ವಂತ್ ಹತ್ಯೆ ಪ್ರಕರಣ…ಆರೋಪಿಗಳು ಅರೆಸ್ಟ್…ಎಸ್ಪಿ ಶೋಭಾರಾಣಿ ಪ್ರಸ್ ಮೀಟ್…

ಮದ್ದೂರಿನಲ್ಲಿ ರೌಡಿ ಶೀಟರ್ ಯಶ್ವಂತ್ ಹತ್ಯೆ ಪ್ರಕರಣ…ಆರೋಪಿಗಳು ಅರೆಸ್ಟ್…ಎಸ್ಪಿ ಶೋಭಾರಾಣಿ ಪ್ರಸ್…

ಮದ್ದೂರಿನಲ್ಲಿ ರೌಡಿ ಶೀಟರ್ ಯಶ್ವಂತ್ ಹತ್ಯೆ ಪ್ರಕರಣ…ಆರೋಪಿಗಳು ಅರೆಸ್ಟ್…ಎಸ್ಪಿ ಶೋಭಾರಾಣಿ ಪ್ರಸ್ ಮೀಟ್… ಮಂಡ್ಯ,ಏ18,Tv10 ಕನ್ನಡ ಮದ್ದೂರಿನಲ್ಲಿ ರೌಡಿಶೀಟರ್ ಯಶ್ವಂತ್ ಕೊಲೆ ಪ್ರಕರಣ ಸಂಬಂಧಿಸಿದಂತೆ ಪೊಲೀಸರು ಹಂತಕರನ್ನ ಬಂಧಿಸುವಲ್ಲಿ…
ಮಂಗಳಮುಖಿ ಕಿಡ್ನಾಪ್…ಲೈಂಗಿಕ ಕಿರುಕುಳ…ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ…ಮೂವರು ಅಂದರ್…24 ಗಂಟೆಯಲ್ಲಿ ಮೇಟಗಳ್ಳಿ ಪೊಲೀಸರ ಯಶಸ್ವಿ ಕಾರ್ಯಾಚರಣೆ…

ಮಂಗಳಮುಖಿ ಕಿಡ್ನಾಪ್…ಲೈಂಗಿಕ ಕಿರುಕುಳ…ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ…ಮೂವರು ಅಂದರ್…24 ಗಂಟೆಯಲ್ಲಿ ಮೇಟಗಳ್ಳಿ ಪೊಲೀಸರ…

ಮಂಗಳಮುಖಿ ಕಿಡ್ನಾಪ್…ಲೈಂಗಿಕ ಕಿರುಕುಳ…ನಾಲ್ವರು ದುಷ್ಕರ್ಮಿಗಳಿಂದ ಕೃತ್ಯ…ಮೂವರು ಅಂದರ್…24 ಗಂಟೆಯಲ್ಲಿ ಮೇಟಗಳ್ಳಿ ಪೊಲೀಸರ ಯಶಸ್ವಿ ಕಾರ್ಯಾಚರಣೆ… ಮೈಸೂರು,ಏ18,Tv10 ಕನ್ನಡ ತಡರಾತ್ರಿಯಲ್ಲಿ ಒಂಟಿಯಾಗಿ ಬರುತ್ತಿದ್ದ ಮಂಗಳಮುಖಿಯನ್ನ ನಾಲ್ವರು ದುಷ್ಕರ್ಮಿಗಳು ಬಲವಂತವಾಗಿ ಆಟೋದಲ್ಲಿ…

Leave a Reply

Your email address will not be published. Required fields are marked *