ಉದಯಗಿರಿ ಪೊಲೀಸರ ಕಾರ್ಯಾಚರಣೆ…ಮನೆಗಳ್ಳನ ಬಂಧನ…26 ಲಕ್ಷ ಮೌಲ್ಯದ 392 ಗ್ರಾಂ ಚಿನ್ನಾಭರಣ ವಶ…
- TV10 Kannada Exclusive
- May 18, 2024
- No Comment
- 145
ಮೈಸೂರು,ಮೇ18,Tv10 ಕನ್ನಡ
ಉದಯಗಿರಿ ಠಾಣೆ ಪೊಲೀಸರು ನಡೆಸಿದ ಯಶಸ್ವಿ ಕಾರ್ಯಾಚರಣೆಯಲ್ಲಿ ಮನೆಗಳ್ಳನನ್ನ ಬಂಧಿಸಲಾಗಿದೆ.ಆರೋಪಿಯಿಂದ 26 ಲಕ್ಷ ಮೌಲ್ಯದ 392.5 ಗ್ರಾಂ ತೂಕದ ಚಿನ್ನಾಭರಣ ವಶಪಡಿಸಿಕೊಳ್ಳಲಾಗಿದೆ.ರಾಜೀವ್ ನಗರದ ನಿವಾಸಿ ಸೈಯದ್ ಅಸ್ಲಾಂ ಬಂಧಿತ ಆರೋಪಿ.
ಶಕ್ತಿನಗರದ ಮನೆಯೊಂದರಲ್ಲಿ ಕಳುವಾಗಿದ್ದ ಪ್ರಕರಣಕ್ಕೆ ಸಂಭಂಧಿಸಿದಂತೆ ಕಾರ್ಯಾಚರಣೆ ನಡೆಸಿದ ಉದಯಗಿರಿ ಠಾಣೆ ಪೊಲೀಸರು ಆರೋಪಿಯನ್ನ ಬಂಧಿಸಿ ಕಳುವಾದ ಮಾಲನ್ನ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಅಪರಾಧ ಮತ್ತು ಸಂಚಾರ ಡಿಸಿಪಿ ರವರಾದ ಜಾಹ್ನವಿ ರವರ ಮಾರ್ಗದರ್ಶನದಲ್ಲಿ ಎಸಿಪಿ ಶಾಂತಮಲ್ಲಪ್ಪ ರವರ ಉಸ್ತುವಾರಿಯಲ್ಲಿ ಉದಯಗಿರಿ ಠಾಣೆ ಇನ್ಸ್ಪೆಕ್ಟರ್ ಸುಧಾಕರ್ ಪಿಎಸ್ಸೈ ಆನಂದ್ ಹಾಗೂ ನಾಗರಾಜ ನಾಯ್ಕ ನೇತೃತ್ವದಲ್ಲಿ ಸಿಬ್ಬಂದಿಗಳಾದ ಸಿದ್ದಿಖಿ ಅಹ್ಮದ್,ಪ್ರಕಾಶ್, ಸಂತೋಷ್ ಪವಾರ್,ಮಲ್ಲಿಕಾರ್ಜುನ್ ಚೌಗಲೆ,ಸಮೀರ್ ಪಟೇಲ್,ಹಾಗೂ ಕು.ನಾಜಿಯಾ ಷರೀಫ್ ರವರು ಕಾರ್ಯಾಚರಣೆಯನ್ನ ಯಶಸ್ವಿಗೊಳಿಸಿದ್ದಾರೆ.
ಕಾರ್ಯಾಚರಣೆಯನ್ನ ನಗರ ಪೊಲೀಸ್ ಆಯುಕ್ತ ಡಾ.ಬಿ.ರಮೇಶ್ ಹಾಗೂ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ರವರು ಪ್ರಶಂಸಿಸಿದ್ದಾರೆ…