ಹುಣಸೂರು:ಬೋರ್ ವೆಲ್ ನಲ್ಲಿ ಕಲ್ಲು ಚಪ್ಪಡಿಗಳನ್ನ ಹಾಕಿ ಧ್ವೇಷ ತೀರಿಸಿಕೊಂಡ ಸಂಭಂಧಿಕ…

ಹುಣಸೂರು:ಬೋರ್ ವೆಲ್ ನಲ್ಲಿ ಕಲ್ಲು ಚಪ್ಪಡಿಗಳನ್ನ ಹಾಕಿ ಧ್ವೇಷ ತೀರಿಸಿಕೊಂಡ ಸಂಭಂಧಿಕ…

ಹುಣಸೂರು,ಮೇ19,Tv10 ಕನ್ನಡ

ಹುಣಸೂರಿನಲ್ಲಿ ನಡೆದ ಬೋರ್ ವೆಲ್ ಕಿರಿಕ್ ಪ್ರಕರಣ ಮತ್ತೊಂದು ತಿರುವು ಪಡೆದುಕೊಂಡಿದೆ.ಬೋರ್ ವೆಲ್ ಹಾಕುವುದನ್ನ ವಿರೋಧಿಸುತ್ತಾ ಬಂದಿದ್ದ ಸಂಭಂಧಿಕ ಅಮಾನವೀಯವಾಗಿ ಧ್ವೇಷ ತೀರಿಸಿಕೊಂಡಿದ್ದಾನೆ.ಲಕ್ಷಾಂತರ ರೂ ಖರ್ಚು ಮಾಡಿ ಕೊರೆಸಿದ ಬೋರ್ ವೆಲ್ ಗೆ ಕಲ್ಲು ಚೆಪ್ಪಡಿಗಳನ್ನ ತುಂಬಿ ಧ್ವೇಷ ತೀರಿಸಿಕೊಂಡಿದ್ದಾನೆ.ಹುಣಸೂರಿನ ಹೆಮ್ಮಿಗೆ ಗ್ರಾಮದಲ್ಲಿ ಘಟನೆ ನಡೆದಿದೆ.

ಹೆಮ್ಮಿಗೆ ಗ್ರಾಮದ ಸುಜಾತ ಹಾಗೂ ಕೃಷ್ಣೇಗೌಡ ಸಂಭಂಧಿಕರು.ಅಕ್ಕಪಕ್ಕದಲ್ಲೇ ಇವರಿಬ್ಬರ ಜಮೀನಿದೆ.ನೀರಿಗಾಗಿ ಸುಜಾತ ಬೋರ್ ವೆಲ್ ಕೊರೆಸಿದ್ದಾರೆ.ಮೊದಲಬಾರಿಗೆ ನೀರು ಸಿಕ್ಕಿಲ್ಲ.ನಂತರ ಮತ್ತೊಂದು ಬೋರ್ ವೆಲ್ ಕೊರೆಸಿದಾಗ ನೀರು ಬಂದಿದೆ.ಈ ವೇಳೆ ಸಂಭಂಧಿಕ ಕೃಷ್ಣೇಗೌಡ ಕ್ಯಾತೆ ತೆಗೆದಿದ್ದಾನೆ.ಪಕ್ಕದಲ್ಲೇ ಬೋರ್ ಹಾಕಿದ್ರೆ ನಮ್ಮ ಬೋರ್ ವೆಲ್ ನಲ್ಲಿ ನೀರಿನ ಪ್ರಮಾಣ ಕಡಿಮೆ ಆಗುತ್ತದೆ ಎಂದು ಕಾರಣ ನೀಡಿ ಕಿರಿಕ್ ಮಾಡಿದ್ದಾನೆ.ಬೋರ್ ವೆಲ್ ಕೊರೆಸಲು ಬಿಡದೆ ಅಡ್ಡಿಪಡಿಸಿದ್ದಾನೆ.ಕೆಲವು ದಿನಗಳ ಹಿಂದಷ್ಟೆ ಈ ಕಿರಿಕ್ ನಡೆದಿದ್ದು ಪ್ರಕರಣ ಪೊಲೀಸ್ ಠಾಣೆ ಮೆಟ್ಟಿಲೇರಿದೆ.ಎರಡೂ ಕುಟುಂಬಗಳನ್ನ ಕರೆಸಿ ಪೊಲೀಸರು ಬುದ್ದಿವಾದ ಹೇಳಿದ್ದಾರೆ.ನಂತರ ಗ್ರಾಮದಲ್ಲಿ ಪಂಚಾಯ್ತಿ ನಡೆದು ಅನುಸರಿಸಿಕೊಂಡು ಹೋಗುವಂತೆ ಸಲಹೆ ನೀಡಿದ್ದಾರೆ.ಇಷ್ಟಕ್ಕೆ ಸುಮ್ಮನಿರದ ಕೃಷ್ಣೇಗೌಡ ರಾತ್ರೋ ರಾತ್ರಿ ಬೋರ್ ವೆಲ್ ನಲ್ಲಿ ಕಲ್ಲು ಚೆಪ್ಪಡಿಗಳನ್ನ ತುಂಬಿ ಹಗೆ ತೀರಿಸಿಕೊಂಡಿದ್ದಾನೆ.ಕೃಷ್ಣೇಗೌಡನ ಕುತಂತ್ರಕ್ಕೆ ಬೋರ್ ವೆಲ್ ನ ಪರಿಕರಗಳು ನಾಶವಾಗಿ ಸಾವಿರಾರು ರೂ ನಷ್ಟವಾಗಿದೆ.ಇದೀಗ ಸುಜಾತ ಮನೆಯವರು ಮತ್ತೆ ಹುಣಸೂರು ಗ್ರಾಮಾಂತರ ಠಾಣೆ ಪೊಲೀಸರ ಮೊರೆ ಹೋಗಿ ಕೃಷ್ಣೇಗೌಡ ವಿರುದ್ದ ದೂರು ದಾಖಲಿಸಿದ್ದಾರೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *