ಅನ್ನ ಹಾಕಿದ ಮನೆಗೆ ಖನ್ನ…ಮಹಡಿಯಿಂದ ಜಿಗಿದು ಗಾಯಗೊಂಡ ಕಳ್ಳ…
- TV10 Kannada Exclusive
- May 19, 2024
- No Comment
- 222
ಮೈಸೂರು,ಮ19,Tv10 ಕನ್ನಡ
ಕಳ್ಳತನ ಮಾಡುವಾಗ ಸಿಕ್ಕಿ ಬಿದ್ದು ತಪ್ಪಿಸಿಕೊಳ್ಳಲು ಮಹಡಿಯಿಂದ ಜಿಗಿದ ಕಳ್ಳ ಗಾಯಗೊಂಡ ಘಟನೆ ಮೈಸೂರಿನ ಮಾನಸಿ ನಗರದಲ್ಲಿ ಬೆಳಕಿಗೆ ಬಂದಿದೆ.
ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ರವಿ ಎಂಬಾತನೇ ಕಳ್ಳತನ ಮಾಡಿ ಸಿಕ್ಕಿಬಿದ್ದ ಖದೀಮ.ಡಾ.ಬಾಲಾಜಿ ಮನೆಯಲ್ಲಿ ಕಳ್ಳತನ ಮಾಡುವಾಗ ಸಿಕ್ಕಿಬಿದ್ದಿದ್ದಾನೆ. ಕಳ್ಳ
ಬಾಲಾಜಿ ಅವರಿಗೆ ದೃಷ್ಟಿ ಸಮಸ್ಯೆ ಇದೆ. ಮರ ಗೆಲಸ ಮಾಡಲು ರವಿ ಬಂದಿದ್ದ.ಮನೆಯಲ್ಲಿ ಜಾಗ ಕೊಟ್ಟು ಕೆಲಸ ಮಾಡಲು ಬಾಲಾಜಿ ರವರು ರವಿಯನ್ನ ಇರಿಸಿಕೊಂಡಿದ್ದರು.
ಈ ಹಿಂದೆಯೂ ಮೂರು ಬಾರಿ ಕಳ್ಳತನ ಮಾಡಿ ಸಿಕ್ಕಿಬಿದ್ದಾಗ
ಬುದ್ದಿ ಹೇಳಿ ವಾರ್ನ್ ಮಾಡಿದ್ದರು. ಡಾ. ಬಾಲಾಜಿ
ನಂಬಿಕೆಯನ್ನೇ ಬಂಡವಾಳ ಮಾಡಿಕೊಂಡು ಮತ್ತೆ ಕಳ್ಳತನಕ್ಕೆ ಯತ್ನಿಸಿದ್ದಾನೆ.
ಮನೆಯ ನಕಲಿ ಬೀಗದ ಕೀ ಇಟ್ಟುಕೊಂಡಿದ್ದ ರವಿ
ಯಾರು ಇಲ್ಲದೆ ವೇಳೆ ನಕಲಿ ಬೀಗ ಬಳಸಿ ಕಳ್ಳತನಕ್ಕೆ ಯತ್ನಸಿದ್ದಾನೆ.
ಈ ವೇಳೆ ದಿಢೀರ್ ಮನೆಗೆ ಬಂದ ಬಾಲಾಜಿ
ಬೀಗ ತೆಗೆದಿರುವ ಬಗ್ಗೆ ಅನುಮಾನಗೊಂಡ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆಯೇ ಮನೆಯ ಮೇಲಿಂದ ರಗ್ಗು ಕಟ್ಟಿ ಹಾರಲು ಯತ್ನಿಸಿ ಕೆಳಗರ ಬಿದ್ದು ತಲೆಗೆ ಪೆಟ್ಟು ಮಾಡಿಕೊಂಡಿದ್ದಾನೆ.
ಈ ವೇಳೆ ಕಳ್ಳ ರವಿಯನ್ನು ಮೈಸೂರು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದಿದ್ದಾರೆ…