ನಕಲಿ ಕೀ ಬಳಸಿ ಮನೆ ದೋಚಿದ ಮಾಲೀಕ…ಆತಂತ್ರವಾದ ಕುಟುಂಬ…

ನಕಲಿ ಕೀ ಬಳಸಿ ಮನೆ ದೋಚಿದ ಮಾಲೀಕ…ಆತಂತ್ರವಾದ ಕುಟುಂಬ…

ಮೈಸೂರು,ಜೂ19,Tv10 ಕನ್ನಡ

ನಕಲಿ ಕೀ ಬಳಸಿ ಬಾಡಿಗೆ ನೀಡಿದ್ದ ಮನೆಯನ್ನ ಮಾಲೀಕನೇ ದೋಚಿದ ಘಟನೆ ಮೈಸೂರಿನ ಲೋಕನಾಯಕನಗರದಲ್ಲಿ ನಡೆದಿದೆ.ಸರ್ವಸ್ವವನ್ನೂ ಕಳೆದುಕೊಂಡ ಬಾಡಿಗೆದಾರ ಇದೀಗ ಅತಂತ್ರವಾಗಿದ್ದಾರೆ.ಫುಡ್ ಪ್ರಾಡಕ್ಟ್ಸ್ ಡಿಸ್ಟ್ರಿಬ್ಯೂಟರ್ ಆಗಿರುವ ಮೇಘರಾಜ್ ರವರ ಕುಟುಂಬ ಇದೀಗ ಅತಂತ್ರಕ್ಕೆ ಸಿಲುಕಿದೆ.ಮಾಲೀಕ ಮಂಜುನಾಥ್ ಹಾಗೂ ಈತನ ಸಹೋದರನ ಮೇಲೆ ಮೇಘರಾಜ್ ರವರು ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಮಂಜುನಾಥ್ ರವರಿಗೆ ಸೇರಿದ ಮನೆಗೆ ಮೇಘರಾಜ್ ಸುಮಾರು 6 ತಿಂಗಳ ಹಿಂದೆ ಬಾಡಿಗೆ ಪಡೆದು ವಾಸಕ್ಕೆ ಬಂದಿದ್ದಾರೆ. ಬಾಡಿಗೆ ವಿಚಾರದಲ್ಲಿ ಮೇಘರಾಜ್ ಹಾಗೂ ಮಂಜುನಾಥ್ ನಡುವೆ ವಿವಾದ ಶುರುವಾಗಿದೆ.ತಾವು ನೀಡಿದ್ದ ಮುಂಗಡ ಹಣ ವಾಪಸ್ ಪಡೆದು ಮನೆ ಖಾಲಿ ಮಾಡಲು ಮೇಘರಾಜ್ ನಿರ್ಧರಿಸಿದ್ದಾರೆ. ಇದಕ್ಕೆ ಒಪ್ಪದ ಮಂಜುನಾಥ್ ಮನೆಗೆ ಬೀಗ ಜಡಿದು ದರ್ಪ ತೋರಿಸಿದ್ದಾರೆ.ಈ ಕುರಿತಂತೆ ಮೇಘರಾಜ್ ಮೇಟಗಳ್ಳಿ ಠಾಣೆ ಪೊಲೀಸರ ಮೊರೆ ಹೋಗಿದ್ದಾರೆ.ಮಂಜುನಾಥ್ ರವರನ್ನ ಕರೆಸಿ ಪೊಲೀಸರು ಬುದ್ದಿವಾದ ಹೇಳಿ ಬೀಗ ತೆಗೆಸಿದ್ದಾರೆ.ಹೀಗಿದ್ದರೂ ಆಗಾಗ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ಕಿರುಕುಳ ನೀಡಿದ್ದಾರೆ. ಕೆಲವು ದಿನಗಳ ಹಿಂದೆ ಮೇಘರಾಜ್ ರವರು ಕುಟುಂಬ ಸಮೇತ ತಮ್ಮ ಸ್ವಂತ ಊರಾದ ಕಬ್ಬಳಿಗೆರೆಗೆ ತೆರಳಿದ್ದಾರೆ.ಹಿಂದಿರುಗಿ ಬರುವಷ್ಟರಲ್ಲಿ ಮಂಜುನಾಥ್ ಮತ್ತೆ ಮನೆಗೆ ಬೀಗ ಹಾಕಿದ್ದಾರೆ.ಕಿಟಕಿ ಮೂಲಕ ಮನೆ ಒಳಗೆ ಪರಿಶೀಲಸಿದಾಗ ಪೀಠೋಪಕರಣಗಳ ಸಮೇತ ನಗದು ಚಿನ್ನಾಭರಣ ನಾಪತ್ತೆಯಾಗಿದೆ.ಸುಮಾರು 85 ಗ್ರಾಂ ಚಿನ್ನಾಭರಣ,1.20 ಲಕ್ಷ ನಗದು,ಫ್ರಿಡ್ಜ್,ವಾಶಿಂಗ್ ಮೆಷಿನ್,ಹರ್ಬಲ್ ಪ್ರಾಡಕ್ಟ್ಸ್ ಗಳು ನಾಪತ್ತೆಯಾಗಿದೆ.ನಕಲಿ ಕೀ ಬಳಸಿ ಮಾಲೀಕ ಮಂಜುನಾಥ್ ತಮ್ಮ ಪದಾರ್ಥಗಳನ್ನ ದೋಚಿದ್ದಾರೆಂದು ಮೇಘರಾಜ್ ಮೇಟಗಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ…

ಮೈಸೂರು: ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ. ರಘು ವಿರುದ್ಧ ಜೀವ ಬೆದರಿಕೆ, ಹಲ್ಲೆ ಆರೋಪ; ಎಫ್‌ಐಆರ್ ದಾಖಲು ಮೈಸೂರು, ಆ.4: ಮೈಸೂರಿನ ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ…
ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ…

ಹುಣಸೂರು ಎಸಿ ಕಾವ್ಯಾರಾಣಿ ಲೋಕಾ ಬಲೆಗೆ…5.5 ಲಕ್ಷ ಲಂಚ ಪಡೆಯವ ವೇಳೆ ದಾಳಿ… ಹುಣಸೂರು,ಆ3,Tv10 ಕನ್ನಡ ಹುಣಸೂರು ಎಸಿ ಕಾವ್ಯಾರಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ನೇತೃತ್ವದ…
ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ…

ಸಿಪಿಸಿ ಹುದ್ದೆಗಳ ನೇಮಕಾತಿ ಲಿಖಿತ ಪರೀಕ್ಷೆ ಗೊಂದಲ…ಸ್ಪಷ್ಠೀಕರಿಸಿದ ಪರೀಕ್ಷಾ ಪ್ರಾಧಿಕಾರ… ಮೈಸೂರು,ಆ3,Tv10 ಕನ್ನಡ ಪೊಲೀಸ್ ಇಲಾಖೆಯ ಮಿಕ್ಕುಳಿದ ವೃಂದ ಹಾಗೂ ಸಿವಿಲ್ ಪೊಲೀಸ್ ನೇಮಕಾತಿಯ ಲಿಖಿತ ಪರೀಕ್ಷೆ ವೇಳೆ…

Leave a Reply

Your email address will not be published. Required fields are marked *