ಬೀದಿ ನಾಯಿಗಳ ದಾಳಿ…ಕುರಿಮರಿ ಬಲಿ…
- Mysore
- June 19, 2024
- No Comment
- 159
ಬನ್ನೂರು,ಜೂ19,Tv10 ಕನ್ನಡ
ಬೀದಿ ನಾಯಿಗಳ ದಾಳಿಗೆ ಮನೆ ಮುಂದೆ ಕಟ್ಟಿಹಾಕಿದ್ದ ಕುರಿಮರಿ ಬಲಿಯಾದ ಘಟನೆ ಟಿ.ನರಸೀಪುರ ತಾಲೂಕಿನ ಕುಪ್ಪೆ ಗ್ರಾಮದಲ್ಲಿ ನಡೆದಿದೆ.

ಮಹದೇವ ಎಂಬುವರಿಗೆ ಸೇರಿದ ಕುರಿಮರಿ ಬಲಿಯಾಗಿದೆ.ಬೀದಿನಾಯಿಗಳ ಹಾವಳಿ ತಪ್ಪಿಸಬೇಕು ಹಾಗೂ ಕುರಿಮರಿ ಕಳೆದುಕೊಂಡ ಮಹದೇವ ರವರಿಗೆ ಪರಿಹಾರ ಕಲ್ಪಿಸಬೇಕೆಂದು ಸಂಬಂಧ ಪಟ್ಟ ಅಧಿಕಾರಿಗಳಿಗೆ ರೈತ ಮುಖಂಡ ಬನ್ನೂರು ನಾರಾಯಣ್ ಆಗ್ರಹಿಸಿದ್ದಾರೆ…