ಸಿದ್ದಾರ್ಥ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಹಣ ದುರುಪಯೋಗ…ಮಾಜಿ ಅಧ್ಯಕ್ಷ,ಕಾರ್ಯದರ್ಶಿ,ಖಜಾಂಚಿ,ವ್ಯವಸ್ಥಾಪಕನ ವಿರುದ್ದ FIR ದಾಖಲು…

ಸಿದ್ದಾರ್ಥ ಸ್ಪೋರ್ಟ್ಸ್ ಕ್ಲಬ್ ನಲ್ಲಿ ಹಣ ದುರುಪಯೋಗ…ಮಾಜಿ ಅಧ್ಯಕ್ಷ,ಕಾರ್ಯದರ್ಶಿ,ಖಜಾಂಚಿ,ವ್ಯವಸ್ಥಾಪಕನ ವಿರುದ್ದ FIR ದಾಖಲು…

ಮೈಸೂರು,ಜೂ22,Tv10 ಕನ್ನಡ

ಆಲನಹಳ್ಳಿ ಬಾಡವಣೆಯಲ್ಲಿರುವ ಸಿದ್ದಾರ್ಥ ಸ್ಪೋರ್ಟ್ಸ ಕ್ಲಬ್ ನಲ್ಲಿ ಹಣ ದುರುಪಯೋಗಪಡಿಸಿದ ಆರೋಪದ ಹಿನ್ನಲೆ ಮಾಜಿ ಅಧ್ಯಕ್ಷ,ಮಾಜಿ ಕಾರ್ಯದರ್ಶಿ,ಮಾಜಿ ಖಜಾಂಚಿ ಹಾಗೂ ಮಾಜಿ ವ್ಯವಸ್ಥಾಪಕನ ವಿರುದ್ದ ನಜರಬಾದ್ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಹಾಲಿ ಅಧ್ಯಕ್ಷ ಹಾಗೂ ಹಾಲಿ ಕಾರ್ಯದರ್ಶಿ ಪ್ರಕರಣ ದಾಖಲಿಸಿದ್ದಾರೆ.2019-23 ನೇ ಸಾಲಿನಲ್ಲಿ 99,33,371/- ರೂ ಹಣವನ್ನ ಅಕ್ರಮವಾಗಿ ಬಳಸಿಕೊಂಡು ಸದಸ್ಯರಿಗೆ ವಂಚಿಸಿದ್ದಾರೆಂದು ಆರೋಪಿಸಿ FIR ದಾಖಲಿಸಲಾಗಿದೆ.

ಮಾಜಿ ಅಧ್ಯಕ್ಷ ಸುರೇಶ್ ಗೌಡ,ಮಾಜಿ ಕಾರ್ಯದರ್ಶಿ ನಾಗರಾಜು,ಮಾಜಿ ಖಜಾಂಚಿ ಪುಟ್ಟಸ್ವಾಮಿ ಹಾಗೂ ಮಾಜಿ ವ್ಯವಸ್ಥಾಪಕ ವಿನಯ್ ಕುಮಾರ್ ವಿರುದ್ದ ಪ್ರಕರಣ ದಾಖಲಾಗಿದೆ.

2019-23 ನೇ ಸಾಲಿನಲ್ಲಿ ಒಟ್ಟು 1,49,83,371/- ರೂ ದುರುಪಯೋಗವಾಗಿದ್ದು ಈ ಪೈಕಿ ವಿನಯ್ ಕುಮಾರ್ 35 ಲಕ್ಷ ಹಾಗೂ ಸದಸ್ಯರದ 15.50 ಲಕ್ಷ ಒಟ್ಟು 50,50,000/- ಹಣ ಹಿಂದಿರುಗಿಸಿದ್ದಾರೆ.ಉಳಿಕೆ 99,33,371/- ರೂ ವಂಚಿಸಿದ್ದಾರೆಂದು ಹಾಲಿ ಅಧ್ಯಕ್ಷ ವೆಂಕಟಪ್ಪ ಹಾಗೂ ಹಾಲಿ ಕಾರ್ಯದರ್ಶಿ ಅಶೋಕ್ ರವರು ಆರೋಪಿಸಿ ಪ್ರಕರಣ ದಾಖಲಿಸಿದ್ದಾರೆ…

Spread the love

Related post

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಇಂದು ಕಾವೇರಿ ಮಾತೆಗೆಸಿಎಂ ಸಿದ್ದರಾಮಯ್ಯ ಅವರಿಂದ ಬಾಗಿನ ಅರ್ಪಣೆ…ಶೃಂಗಾರಗೊಂಡ ಕೆ.ಆರ್.ಎಸ್…

ಮಂಡ್ಯ,ಜೂ30,Tv10 ಕನ್ನಡ ಕೆ.ಆರ್.ಎಸ್.ಡ್ಯಾಂ ಒಡಲನ್ನು ತುಂಬಿದ ಕಾವೇರಿ ಮಾತೆಗೆ ಇಂದು ಸಿಎಂ ಸಿದ್ದರಾಮಯ್ಯ ಬಾಗಿನ ಅರ್ಪಿಸಲಿದ್ದಾರೆ.ಈ ಹಿನ್ನೆಲೆ ಕೆ ಆರ್.ಎಸ್.ನವವಧುವಿನಂತೆ ಶೃಂಗಾರಗೊಂಡಿದೆ.ಕನ್ನಡ ಬಾವುಟದಿಂದ ಕಂಗೊಳಿಸುತ್ತಿದೆ.ಹಸಿರು ತೋರಣ, ಹೂಗಳ ಮೂಲಕ…
ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ ಪುರೋಹಿತ ಹಲ್ಲೆ…

ಟ್ರಸ್ಟ್ ಗೆ ಪಾವತಿಸಿದ ಹಣ ವಾಪಸ್ ನೀಡುವಂತೆ ಕಿರೀಕ್…ಪುರೋಹಿತನ ಮೇಲೆ ಮತ್ತೊಬ್ಬ…

ಮೈಸೂರು,ಜೂ29,Tv10 ಕನ್ನಡ ಟ್ರಸ್ಟ್ ಗೆ ನೀಡಿದ ಹಣ ವಾಪಸ್ ನೀಡುವಂತೆ ಪಟ್ಟು ಹಿಡಿದ ಪುರೋಹಿತನೊಬ್ಬ ಮತ್ತೊಬ್ಬ ಪುರೋಹಿತನ ಮೇಲೆ ಹಲ್ಲೆ ನಡೆಸಿದ ಘಟನೆ ಮೈಸೂರಿನ ಚಾಮುಂಡಿಪುರಂ ಬಳಿ ನಡೆದಿದೆ.ಗೀತಾಮೃತ…
ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ,ಮಹಿಳೆ ಸೇರಿದಂತೆ 7 ಮಂದಿ ಬಂಧನ…

ಜಾನುವಾರು ಸಂರಕ್ಷಣೆ ಹೆಸರಲ್ಲಿ ರೋಲ್ ಕಾಲ್… ಹಿಂದೂ ರಾಷ್ಟ್ರ ರಕ್ಷಣಾ ಪಡೆ…

ಹುಣಸೂರು,ಜೂ26,Tv10 ಕನ್ನಡ ಜಾನುವಾರುಗಳ ರಕ್ಷಣೆ ನೆಪದಲ್ಲಿ ಹಣ ವಸೂಲಿಗೆ ಇಳಿದ ಹಿಂದೂ ರಾಷ್ಟ್ರ ರಕ್ಷಣಾ ಪಡೆ ರಾಷ್ಟ್ರೀಯ ಅಧ್ಯಕ್ಷ ರಾಮಕೃಷ್ಣ,ಬೆಂಗಳೂರು ಮೂಲದ ಮಹಿಳೆ ಸೇರಿದಂತೆ 7 ಮಂದಿಯನ್ನಹುಣಸೂರು ಪೊಲೀಸರು…

Leave a Reply

Your email address will not be published. Required fields are marked *